Crime News: ಕಳೆದ ಬುಧವಾರ ಮುಂಜಾನೆ, ದೀಪ ಕುತ್ತಿಗೆಗೆ ಚಾಕುವಿನಿಂದ ತಿವಿದು, ಕೊಲೆಯೆಸಗಿ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇದೀಗ ಘಟನೆ ನಡೆದು ನಾಲ್ಕು ದಿನ ಕಳೆದಿದ್ದು, ಮನೆಯಿಂದ ದುರ್ವಾಸನೆ ಬರತೊಡಗಿದೆ. ಅನುಮಾನಗೊಂಡ ಸ್ಥಳೀಯರು, ಸಂಜೆ ವೇಳೆ ಮನೆಯ ಬಾಗಿಲಿನ ಬೀಗದ ಕಿಂಡಿಯಿಂದ ಇಣುಕಿ ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ.
Fake Marriages: ಮದುವೆ ಹೆಸರಿನಲ್ಲಿ ಅವಿವಾಹಿತರಿಗೆ ಟೋಪಿ ಹಾಕುತ್ತಿದ್ದ 8 ಜನ ಮಹಿಳೆಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಘೋಲಿಯ ಕೇಘ್ನಾಂಡ್ ಫಾಟಾ ನಿವಾಸಿ ಜ್ಯೋತಿ ರವೀಂದ್ರ ಪಾಟೀಲ್(35), ವಿದ್ಯಾ ಸತೀಶ್ ಖಂಡೇಲ್ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು 4 ದಿನಗಳ ಕಾಲ ಕಸ್ಟಡಿಯಲ್ಲಿರಿಸಲಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಡ್ ಕಾನ್ಸ್ಟೇಬಲ್ ಲೋಕಾ ಬಲೆಗೆ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ... ಆಕ್ಸಿಡೆಂಟ್ ಆಗಿದ್ದ ಬೈಕ್ ರಿಲೀಸ್ ಮಾಡಲು ಅರ್ಜುನ್ ಸಾಲಾಪುರ ಲಂಚದ ಬೇಡಿಕೆ ಇಟ್ಟಿದ್ದರಂತೆ. 25 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ...
Haldwani Violence: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮದ್ರಸಾವನ್ನು ಧ್ವಂಸಗೊಳಿಸಿದ ನಂತರ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರ ಭುಗಿಲೆದ್ದಿದೆ. ಪರಿಸ್ಥಿತಿ ನಿಯಂತ್ರಿಸಲು ಅರೆಸೇನಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
Facebook Live Murder Incident: ಶಿವಸೇನೆಯ (ಯುಬಿಟಿ) ಮಾಜಿ ಕೌನ್ಸಿಲರ್ ಅಭಿಷೇಕ್ ಘೋಷಾಲ್ಕರ್ ಅವರನ್ನು ಮುಂಬೈನ ಉಪನಗರವಾದ ದಹಿಸರ್ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಾಳಿಯ ನಂತರ ದಾಳಿಕೋರ ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಣದ ವಿಚಾರವಾಗಿ ಅಭಿಷೇಕ್ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಭಿಷೇಕ್ ಶಿವಸೇನಾ ಮಾಜಿ ಶಾಸಕ ವಿನೋದ್ ಘೋಷಾಲ್ಕರ್ ಅವರ ಪುತ್ರನಾಗಿದ್ದಾನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ವಕ್ತಾರರು ಶಿಂಧೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರ ಲೆಟರ್ ಪ್ಯಾಡ್, ಸೀಲ್, ಸಹಿ ಅಂದ್ರೆ ಅದಕ್ಕೊಂದು ಬೆಲೆ ಇರುತ್ತೆ. ಗೌರವ ಇರುತ್ತೆ. ಅಂತಹ ಲೆಟರ್ ಪ್ಯಾಡ್, ಸೀಲ್-ಸಹಿಗಳು ಸರ್ಕಾರಿ ಕಚೇರಿಯಲ್ಲಿ ಎಫ್.ಡಿ.ಎ.ಗಳ ಬಳಿ ಇರುತ್ತೆ ಅಂದ್ರೆ ಅದು ಬೇರೆಯದ್ದೇ ಅರ್ಥ ಕೊಡುತ್ತೆ. ಅಂತಹಾ ಘಟನೆಗೆ ಚಿಕ್ಕಮಗಳೂರು ನಗರ ಸಾಕ್ಷಿಯಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ತೀರ್ಪು ಪ್ರಕಟಿಸಿದೆ.
ಪ್ರಕರಣ ಸಂಬಂಧ ಕೆನರಾ ಬ್ಯಾಂಕ್ ಎಜಿಎಂ ಆಗಿರುವ ರಮೇಶ್ ಟಿ, SLN CNC ಟೆಕ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಅಶೋಕ್ ಎಂವಿ ಮತ್ತು ಇತರ ನಿರ್ದೇಶಕರು, ಕೆನರಾ ಬ್ಯಾಂಕ್ ಪ್ರಬಂಧಕರ ವಿರುದ್ಧ ವಿರುದ್ಧ ಕೆಎಎಲ್ ಇಂಜಿನಿಯರಿಂಗ್ ಮಾಲೀಕರಾದ ಮೇಘನಾ ಎಂಬವರು ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪ್ರತಿಮಾ ಕೊಲೆ ಕೇಸ್
ನ್ಯಾಯಾಲಯಕ್ಕೆ 600 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ತನಿಖಾಧಿಕಾರಿ ಇನ್ಸ್ಪೆಕ್ಟರ್ ಜಗದೀಶ್ ಅವರಿಂದ ಸಲ್ಲಿಕೆ
ನ. 4ರಂದು ಭೂ ವಿಜ್ಞಾನಿ ಪ್ರತಿಮಾ ಮರ್ಡರ್ ನಡೆದಿತ್ತು
ಮಾಜಿ ಕಾರು ಚಾಲಕ ಕಿರಣ್ ಕತ್ತು ಕೊಯ್ದು ಕೊಲೆ ಮಾಡಿದ್ದ
ಪ್ರಕರಣ ಸಂಬಂಧ 70 ಸಾಕ್ಷಿಗಳ ಹೇಳಿಕೆ ಪಡೆದ ಪೊಲೀಸರು
Bangalore Student Run Over: ಈ ವೇಳೆ ಬ್ಯಾಲೆನ್ಸ್ ಕಳೆದುಕೊಂಡ ವಿದ್ಯಾರ್ಥಿನಿ ಬಲಕ್ಕೆ ಬಿದ್ದಿದ್ದಾಳೆ. ಇದನ್ನ ಗಮನಿಸದ ಚಾಲಕ ಬಸ್ ಹಿಂಬದಿ ಚಕ್ರವನ್ನ ಯುವತಿಯ ಮೇಲೆ ಹತ್ತಿಸಿದ್ದಾನೆ. ತಕ್ಷಣ ಎಚ್ಚೆತ್ತ ಸಾರ್ವಜನಿಕರು ಬಸ್ ನಿಲ್ಲಿಸುವಂತೆ ತಡೆದಿದ್ದಾರೆ. ಮುಂದೆನಾಯ್ತು.. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
Bangalore crime - Son murders mother: ಕೋಪದಲ್ಲಿ ಮಗನಿಗೆ ಬೈದಿದ್ದ ನೇತ್ತಾವತಿ ನೀನ್ ನನ್ ಮಗ ಅಲ್ಲಾ, ನಾನ್ ನಿನ್ ತಾಯಿಯಲ್ಲ.. ಅಡುಗೆ ಯಾಕ್ ಮಾಡಿ ಹಾಕ್ಲಿ ಅಂತಾ ಬೈದಿದ್ದಾರೆ. ಅಷ್ಟೇ ಪಾಪಿ ಮಗನಿಗೆ ಅದ್ಯಾವ ಕೋಪಾನೋ ಸೀದಾ ಮನೆಯಲ್ಲಿದ್ದ ರಾಡ್ ಕೈಗೆ ತೆಗೆದುಕೊಂಡವನೇ.. ಸಂಪೂರ್ಣ ವಿವರಕ್ಕಾಗಿ ಸುದ್ದಿ ಓದಿ..
Lakhs Worth Gold Jewelry Seized: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಗ್ರಾಮೀಣ ಭಾಗದಲ್ಲಿ 2021 ರಿಂದ 2024 ವರೆಗೆ ಕಳ್ಳತನ ಮಾಡಿದ್ದ ಕಳ್ಳತನ ಪ್ರಕರಣ ಭೇಸಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕಳ್ಳನನ್ನ ಬಂಧಿಸಿದ್ದಾರೆ.
Drunk Man called 108 : ಮದ್ಯ ಮದದಲ್ಲಿ ಕುಡುಕರು ಏನ್ ಮಾಡ್ತಾರೆ ಅಂತ ಗೊತ್ತೆ ಆಗುವುದಿಲ್ಲ. ಕೆಲವೊಂದಿಷ್ಟು ಮದ್ಯಪ್ರಿಯರ ಮಾತುಗಳು, ಅವರಾಡುವ ರೀತಿ ನಗು ಬರಿಸುವಂತಿರುತ್ತವೆ, ಇನ್ನೂ ಕೆಲವರು ಕ್ರೂರವಾಗಿ ವರ್ತಿಸುತ್ತಾರೆ. ಇದೀಗ ಇಲ್ಲೊಬ್ಬ ಕುಡುಕ ಎಣ್ಣೆ ಏಟಲ್ಲಿ ತುರ್ತು ಪರಿಸ್ಥಿತಿ ಅಂತ 108ಗೆ ಕರೆ ಮಾಡಿದ ಪ್ರಸಂಗ ನಡೆದಿದೆ.. ಮುಂದೇನಾಯ್ತು.. ಬನ್ನಿ ನೋಡೋಣ..
ಸಿಟಿಯಲ್ಲಿ ಹೊಸ ಬಿಲ್ಡಿಂಗ್ ನೋಡಿದ್ರೆ ಸಾಕು ತಾನೊಬ್ಬ RTI ಕಾರ್ಯಕರ್ತ ಅಂತ ಬಿಲ್ಡಪ್ ಕೊಟ್ಕೊಂಡು ಒಂದಿಬ್ಬರು ರೌಡಿಗಳ ಜೊತೆ ಬಿಲ್ಡರ್ಗಳ ಹತ್ರ ಹೋಗುತ್ತಿದ್ದ. ಅಲ್ಲಿ ನಿಮ್ಮ ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಹಣ ವಸೂಲಿ ಮಾಡ್ತಿದ್ದ..
Crime News: ಬಾಲ್ಯದಲ್ಲಿ ಆಗಿರುವ ಮದುವೆಯನ್ನು ವಿರೋಧಿಸಿ, ವಯಸ್ಸಿಗೆ ಬರುತ್ತಿದ್ದಂತೆ ತನ್ನ ಗಂಡನಿಗೆ ವಿಚ್ಛೇದನ ನೀಡಿ ಬದುಕು ಕಟ್ಟಿಕೊಳ್ಳಬೇಕೆಂಬ ಯುವತಿಯ ಕನಸಿಗೆ ಮಾಜಿ ಪತಿ ಓರ್ವ ನವ ದಂಪತಿಗಳಿಬ್ಬರನ್ನು ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆಗೆ ಅಥಣಿ ಜನ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಏನು ಈ ಪ್ರಕರಣ ಅಂತೀರಾ? ಸಂಪೂರ್ಣ ಡೀಟೇಲ್ಸ್ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.