ಏಪ್ರಿಲ್ 2 ರಂದು ಭಾರತಕ್ಕೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭೇಟಿ

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಏಪ್ರಿಲ್ 2 ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ.ಇಸ್ರೇಲ್ ಮತ್ತು ಭಾರತ ನಡುವಿನ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಭೇಟಿ ನಡೆಯಲಿದೆ.

Written by - Zee Kannada News Desk | Last Updated : Mar 20, 2022, 06:49 AM IST
  • ಕಳೆದ ಅಕ್ಟೋಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆದ ಯುಎನ್ ಹವಾಮಾನ ಬದಲಾವಣೆ ಸಮ್ಮೇಳನದ (COP26) ನೇಪಥ್ಯದಲ್ಲಿ ಉಭಯ ನಾಯಕರು ಮೊದಲು ಭೇಟಿಯಾಗಿದ್ದರು
 ಏಪ್ರಿಲ್ 2 ರಂದು ಭಾರತಕ್ಕೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭೇಟಿ title=
Photo Courtesy: Twitter

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಏಪ್ರಿಲ್ 2 ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ.ಇಸ್ರೇಲ್ ಮತ್ತು ಭಾರತ ನಡುವಿನ ಸಂಬಂಧಗಳ ಸ್ಥಾಪನೆಯ 30 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಭೇಟಿ ನಡೆಯಲಿದೆ.

ಇದನ್ನೂ ಓದಿ:  ರಷ್ಯಾದಿಂದ ಅಗ್ಗದ ತೈಲ ಖರೀದಿಗೆ ಭಾರತ ಸಿದ್ಧತೆ! ನಿರ್ಬಂಧದ ತೂಗುಗತ್ತಿ?

ಅವರ ಈ ಭೇಟಿಯ ವೇಳೆ ಬೆನೆಟ್ ಅವರು ಪ್ರಧಾನಿ ಮೋದಿ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಮತ್ತು ದೇಶದ ಯಹೂದಿ ಸಮುದಾಯವನ್ನು ಭೇಟಿ ಮಾಡಲಿದ್ದಾರೆ.ಈ ಭೇಟಿಯು ಉಭಯ ದೇಶಗಳ ನಡುವಿನ ಮಹತ್ವದ ಸಂಪರ್ಕವನ್ನು ಪುನರುಚ್ಚರಿಸುತ್ತದೆ.ಇಸ್ರೇಲ್ ಮತ್ತು ಭಾರತದ ನಡುವಿನ ವ್ಯೂಹಾತ್ಮಕ ಮೈತ್ರಿಯನ್ನು ಮುನ್ನಡೆಸುವುದು ಮತ್ತು ಬಲಪಡಿಸುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದು ಈ ಭೇಟಿಯ ಉದ್ದೇಶವಾಗಿದೆ.ಬೆನೆಟ್ ಮತ್ತು ಮೋದಿ ಅವರು ನಾವೀನ್ಯತೆ, ಆರ್ಥಿಕತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕೃಷಿ ಮತ್ತು ಹೆಚ್ಚಿನವು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಪುಟಿನ್ ಸಾರಿದ ಸಮರದಲ್ಲಿ ಮಡಿದವರೆಷ್ಟು? ಖೆರ್ಸನ್ ಪ್ರದೇಶದ ಸಂಪೂರ್ಣ ಆಡಳಿತ ರಷ್ಯಾ ಪಾಲಾಗಿದ್ದು ಹೇಗೆ?

"ನನ್ನ ಸ್ನೇಹಿತ, ಪ್ರಧಾನಿ ಮೋದಿ (PM Modi) ಯವರ ಆಹ್ವಾನದ ಮೇರೆಗೆ ಭಾರತಕ್ಕೆ ನನ್ನ ಮೊದಲ ಅಧಿಕೃತ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ ಮತ್ತು ನಮ್ಮ ದೇಶಗಳ ಸಂಬಂಧಗಳನ್ನು ನಾವು ಒಟ್ಟಾಗಿ ಮುನ್ನಡೆಸುತ್ತೇವೆ.ಮೋದಿ ಅವರು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಪುನರಾರಂಭಿಸಿದ್ದು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿದೆ, ಭಾರತೀಯ ಸಂಸ್ಕೃತಿ ಮತ್ತು ಯಹೂದಿ ಸಂಸ್ಕೃತಿಗಳ ನಡುವಿನ ಸಂಬಂಧಗಳು ಆಳವಾದವು ಮತ್ತು ಅವು ಆಳವಾದ ಮೆಚ್ಚುಗೆ ಮತ್ತು ಅರ್ಥಪೂರ್ಣ ಸಹಯೋಗಗಳನ್ನು ಅವಲಂಬಿಸಿವೆ" ಎಂದು ಬೆನೆಟ್ ಹೇಳಿದರು.

"ಭಾರತೀಯರಿಂದ ನಾವು ಕಲಿಯಬಹುದಾದ ಹಲವು ವಿಷಯಗಳಿವೆ, ಮತ್ತು ನಾವು ಇದನ್ನು ಮಾಡಲು ಪ್ರಯತ್ನಿಸುತ್ತೇವೆ. ನಾವೀನ್ಯತೆ ಮತ್ತು ತಂತ್ರಜ್ಞಾನ, ಭದ್ರತೆ ಮತ್ತು ಸೈಬರ್, ಕೃಷಿ ಮತ್ತು ಹವಾಮಾನ ಬದಲಾವಣೆಯಿಂದ ಇತರ ಕ್ಷೇತ್ರಗಳಿಗೆ ನಾವು ನಮ್ಮ ಸಹಕಾರವನ್ನು ವಿಸ್ತರಿಸುತ್ತೇವೆ" ಎಂದು ಅವರು ಹೇಳಿದರು.

ಕಳೆದ ಅಕ್ಟೋಬರ್‌ನಲ್ಲಿ ಗ್ಲಾಸ್ಗೋದಲ್ಲಿ ನಡೆದ ಯುಎನ್ ಹವಾಮಾನ ಬದಲಾವಣೆ ಸಮ್ಮೇಳನದ (COP26) ನೇಪಥ್ಯದಲ್ಲಿ ಉಭಯ ನಾಯಕರು ಮೊದಲು ಭೇಟಿಯಾಗಿದ್ದರು, ಅಲ್ಲಿ ಪ್ರಧಾನಿ ಮೋದಿ ಅವರು ದೇಶಕ್ಕೆ ಅಧಿಕೃತ ಭೇಟಿ ನೀಡುವಂತೆ ಬೆನೆಟ್ ಅವರನ್ನು ಆಹ್ವಾನಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News