Viral Video: ಹಳ್ಳಕ್ಕೆ ಬಿದ್ದ ಬೆಕ್ಕಿನ ರಕ್ಷಣೆಗೆ ಕೋತಿಯ ಶತಪ್ರಯತ್ನ: ಮನಮುಟ್ಟುತ್ತೆ ಈ ವಿಡಿಯೋ

Heart Touching Viral Video: ಮಂಗವೊಂದು ಕೆಸರುಮಯವಾದ ಹೊಂಡದಿಂದ ಬೆಕ್ಕಿನ ಮರಿಯನ್ನು ಹೊರತರಲು ಶತಪ್ರಯತ್ನ ಮಾಡುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಕಡೆಗೆ ಹಳ್ಳದೊಳಗೆ ಮಹಿಳೆಯೊಬ್ಬರು ಇಳಿದು, ಆ ಬೆಕ್ಕಿನ ಮರಿಯನ್ನು ಅಲ್ಲಿಂದ ರಕ್ಷಿಸಿ ಕೋತಿಯ ಕೈಗೆ ನೀಡುತ್ತಾರೆ. ಬೆಕ್ಕಿನ ಮರಿಯನ್ನು ಹೊರ ಬಂದ ಬಳಿಕ ಅದನ್ನು ಸ್ವಚ್ಛಗೊಳಿಸಲು ಆರಂಭಿಸುತ್ತದೆ ಈ ಕೋತಿ.

Written by - Bhavishya Shetty | Last Updated : Apr 18, 2023, 11:45 PM IST
    • ಕೆಲವೊಮ್ಮೆ ಕೆಲವೊಂದು ವಿಷಯಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.
    • ಅಂತಹ ವಿಡಿಯೋದ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
    • ಮಂಗವೊಂದು ಕೆಸರುಮಯವಾದ ಹೊಂಡದಿಂದ ಬೆಕ್ಕಿನ ಮರಿಯನ್ನು ಹೊರತರಲು ಶತಪ್ರಯತ್ನ ಮಾಡುತ್ತಿದೆ.
Viral Video: ಹಳ್ಳಕ್ಕೆ ಬಿದ್ದ ಬೆಕ್ಕಿನ ರಕ್ಷಣೆಗೆ ಕೋತಿಯ ಶತಪ್ರಯತ್ನ: ಮನಮುಟ್ಟುತ್ತೆ ಈ ವಿಡಿಯೋ title=
Viral Video

Viral Video: ಸಾಮಾನ್ಯವಾಗಿ ನಾವು ಪ್ರಾಣಿಗಳ ಫನ್ನಿ ವಿಡಿಯೋ, ಅಥವಾ ಮುದ್ದಾಡಿಕೊಳ್ಳುವುದು, ಜಗಳವಾಡುವುದು ಹೀಗೆ ಬಗೆ ಬಗೆಯ ವಿಡಿಯೋಗಳನ್ನು ನೋಡಿರುತ್ತೇವೆ. ಆದರೆ ಇಂದು ನಾವು ಹೇಳಹೊರಟಿರುವ ವಿಡಿಯೋ ವಿಶ್ಲೇಷಣೆ ನಿಮ್ಮ ಮನಮುಟ್ಟದೆ ಇರದು. ಕೆಲವೊಮ್ಮೆ ಕೆಲವೊಂದು ವಿಷಯಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅಂತಹ ವಿಡಿಯೋದ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ನೋಡಲು ಸಣಕಲು… ಆದ್ರೆ World Cupನಲ್ಲಿ ಟೀಂ ಇಂಡಿಯಾ ಆನೆಬಲ ತುಂಬಲಿದ್ದಾನೆ ಈ ಆಟಗಾರ! ಎಂಟ್ರಿ ಕನ್ಫರ್ಮ್?

ವಿಡಿಯೋದಲ್ಲಿ ಕಾಣುವಂತೆ, ಮಂಗವೊಂದು ಕೆಸರುಮಯವಾದ ಹೊಂಡದಿಂದ ಬೆಕ್ಕಿನ ಮರಿಯನ್ನು ಹೊರತರಲು ಶತಪ್ರಯತ್ನ ಮಾಡುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಆಗುವುದಿಲ್ಲ. ಕಡೆಗೆ ಹಳ್ಳದೊಳಗೆ ಮಹಿಳೆಯೊಬ್ಬರು ಇಳಿದು, ಆ ಬೆಕ್ಕಿನ ಮರಿಯನ್ನು ಅಲ್ಲಿಂದ ರಕ್ಷಿಸಿ ಕೋತಿಯ ಕೈಗೆ ನೀಡುತ್ತಾರೆ. ಬೆಕ್ಕಿನ ಮರಿಯನ್ನು ಹೊರ ಬಂದ ಬಳಿಕ ಅದನ್ನು ಸ್ವಚ್ಛಗೊಳಿಸಲು ಆರಂಭಿಸುತ್ತದೆ ಈ ಕೋತಿ. ಈ ವಿಡಿಯೋವನ್ನು ನಂಬೋದಕ್ಕೆ ಅಸಾಧ್ಯವಾಗುತ್ತದೆ. ಆದರೆ ವಿಚಿತ್ರ ಎನಿಸಿದರೂ, ತೃಪ್ತಿಕರವಾದ ಭಾವನೆ ನಮ್ಮಲ್ಲಿ ಮೂಡುತ್ತದೆ.

ಈ ವಿಡಿಯೋವನ್ನು ತಾನ್ಸು ಎಗೆನ್ ಎಂಬ ಟ್ವಿಟರ್ ಅಧಿಕೃತ ಖಾತೆಯಿಂದ ಶೇರ್ ಮಾಡಲಾಗಿದೆ. ಇದಕ್ಕೆ “ಇದುವರೆಗೆ ಕಂಡ ಅತ್ಯಂತ ಹೃದಯಸ್ಪರ್ಶಿ ವಿಡಿಯೋ” ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋವನ್ನು 10 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅನೇಕ ರೀತಿಯಲ್ಲಿ ಕಮೆಂಟ್’ಗಳು ಬರುತ್ತಿವೆ.

 

ಇದನ್ನೂ ಓದಿ:RCB vs CSK: ಸಿಕ್ಸ್, ಬೌಂಡರಿ, ಕ್ಯಾಚ್, ಡ್ರಾಪ್.. ರೋಚಕ ಹೋರಾಟದಲ್ಲಿ ಗೆದ್ದ ಸಿಎಸ್’ಕೆ! ಹೈವೋಲ್ಟೇಜ್ ಪಂದ್ಯದ Highlights ಇಲ್ಲಿದೆ

ಸ್ಟೀವ್ ಪಾರ್ಕರ್ ಎಂಬವರು, “ತಿಳುವಳಿಕೆಯ ಮಟ್ಟ ಅದ್ಭುತವಾಗಿದೆ” ಎಂದು ಕಮೆಂಟ್ ಮಾಡಿದ್ರೆ, ಪ್ರಿಯಾ ಎಂಬವರು, “ ಕೊನೆಯಲ್ಲಿ ಕಂಡ ಆ ಅಪ್ಪುಗೆ” ಎಂದು ಮುಗ್ಧತೆಯನ್ನು ಹೊರಹಾಕಿದ್ದಾರೆ. ಇನ್ನು ಶ್ವೇತಾಂಬರಿ ರಜಪೂತ್ ಎಂಬಾಕೆ, “ಎಷ್ಟು ಮಧುರವಾಗಿದೆ. ಇಲ್ಲಿ ಭಾವನೆಗಳು ಪರಿಶುದ್ಧವಾಗಿ ಕಾಣಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News