ಬೆಳೆ ಚೆನ್ನಾಗಿ ಬರಲಿ, ಜನರ ಕಣ್ಣು ಬೀರದಿರಲೆಂದು ರೈತನ ವಿಚಿತ್ರ ಪ್ಲಾನ್ !

ಸಾಮಾನ್ಯವಾಗಿ ರೈತರು ತಮ್ಮ ಜಾಮೀನಿನ ಮೇಲೆ ತಾವು ಬೆಳೆದ ಬೆಳೆಗೆ ಕೆಟ್ಟ ದೃಷ್ಟಿ ಬೀಳಬಾರದು. ಪ್ರಾಣಿಗಳು ಬಂದು ಬೆಳೆ ಹಾನಿಗೊಳಿಸಬಾರದು ಎಂದು ಬಿದುರು ಗೊಂಬೆಗಳನ್ನು ನಿರ್ಮಿಸುತ್ತಾರೆ. ಆದರೀಗ ಟ್ರೆಂಡ್ ಬದಲಾಗಿದೆ. 

Written by - Yashaswini V | Last Updated : Apr 23, 2024, 12:18 PM IST
  • ಈ ಕಾರ್ಟೂನ್ ಪ್ರಪಂಚದಲ್ಲಿ ಬಿದುರುಗೊಂಬೆಗಳನ್ನು ಯಾರೂ ನೋಡುವುದಿಲ್ಲ
  • ಹಾಗಾಗಿಯೇ ರೈತನೊಬ್ಬ ಈಗಿನ ಕಾಲಕ್ಕೆ ತಕ್ಕಂತೆ ಜನರ ಗಮನವನ್ನು ಬೇರೆಡೆ ತಿರುಗಿಸಲು ನೂತನ ಪ್ಲಾನ್ ಮಾಡಿದ್ದಾನೆ...
ಬೆಳೆ ಚೆನ್ನಾಗಿ ಬರಲಿ, ಜನರ ಕಣ್ಣು ಬೀರದಿರಲೆಂದು ರೈತನ ವಿಚಿತ್ರ ಪ್ಲಾನ್ ! title=

Viral News: ತಮ್ಮ ಬೆಳೆಗೆ ರೋಗ ಬರದಿರಲಿ, ಜನರ ಕೆಟ್ಟ ದೃಷ್ಟಿ ಬೀಳದಿರಲಿ ಮತ್ತು ಬೆಳೆ ಚೆನ್ನಾಗಿ ಬರಲೆಂದು ರೈತಾನೊಬ್ಬ ತನ್ನ ಜಮೀನಿನಲ್ಲಿ ವಿಚಿತ್ರವಾದ ಗೊಂಬೆಗಳನ್ನು ಕಟ್ಟಿರುವ ಘಟನೆ  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಬೆಳೆಕಿಗೆ ಬಂದಿದೆ. 

ಹೌದು, ಸಾಮಾನ್ಯವಾಗಿ ರೈತರು (Farmer) ತಮ್ಮ ಜಾಮೀನಿನ ಮೇಲೆ ತಾವು ಬೆಳೆದ ಬೆಳೆಗೆ ಕೆಟ್ಟ ದೃಷ್ಟಿ ಬೀಳಬಾರದು. ಪ್ರಾಣಿಗಳು ಬಂದು ಬೆಳೆ ಹಾನಿಗೊಳಿಸಬಾರದು ಎಂದು ಬಿದುರು ಗೊಂಬೆಗಳನ್ನು ನಿರ್ಮಿಸುತ್ತಾರೆ. ಆದರೆ ಈ ಹಳೆ ಸಂಪ್ರದಾಯಕ್ಕೆ ಬೈ, ಬೈ ಹೇಳಿರುವ ರೈತನೊಬ್ಬ ವಿನೂತನ ಐಡಿಯಾ ಒಂದನ್ನು ಮಾಡಿದ್ದಾನೆ. 

ಇದನ್ನೂ ಓದಿ- Viral Video: ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗಿದ್ದ ಪತ್ನಿ, ಬ್ಯಾಟ್‌ನಿಂದ ಥಳಿಸಿದ ಪತಿ..! 

ಹೌದು, ಈ ಕಾರ್ಟೂನ್ ಪ್ರಪಂಚದಲ್ಲಿ ಬಿದುರು ಗೊಂಬೆಗಳನ್ನು (Bidiru Gombe) ಯಾರೂ ನೋಡುವುದಿಲ್ಲ ಎಂದು ತಿಳಿದಿರುವ ರೈತ ಈಗಿನ ಕಾಲಕ್ಕೆ ತಕ್ಕಂತೆ ವಿಚಿತ್ರವಾಗಿ ಸ್ಟಾರ್ ಹೀರೋಯಿನ್ ಗಳ ದೊಡ್ಡ ದೊಡ್ಡ ಫೋಟೋವನ್ನು ತನ್ನ ಜಾಮೀನಿನ ಮಧ್ಯೆ ಮಧ್ಯೆ ಕಡ್ಡಿಗೆ ನೇತು ಹಾಕಿದ್ದಾನೆ. 

ನಾವು ಬೆಳೆದ ಬೆಳೆಗೆ ಕೆಟ್ಟ ದೃಷ್ಟಿ ಬೀಳುತ್ತೆ ಎಂದು ಚಿಕ್ಕಬಳ್ಳಾಪುರ (Chikkaballpur) ಜಿಲ್ಲೆಯ ವೀರರಾವುತನಹಳ್ಳಿ ಗ್ರಾಮದ ಕಾಮಣ್ಣ ಎಂಬುವ ರೈತ ವಿಚಿತ್ರವಾಗಿ ಸ್ಟಾರ್ ಹೀರೋಯಿನ್ ಗಳಾದ ಕೃತಿ ಶೆಟ್ಟಿ, ರಶ್ಮಿಕಾ ಮಂದಣ್ಣ ಫೋಟೋಗಳನ್ನು ದೊಡ್ಡದಾಗಿ ಕಟ್ಟಿದ್ದಾರೆ. 

ಇದನ್ನೂ ಓದಿ- BMTC: 'ಚೇಂಜ್ ಇಲ್ಲ' ಎಂದು 5 ರೂ. ಹಿಂದಿರುಗಿಸದ ಬಿಎಂಟಿಸಿ ಕಂಡಕ್ಟರ್, ಮುಂದೆ ಆಗಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತ ಕಾಮಣ್ಣ, ಜಮೀನಿನಲ್ಲಿ ಈ ರೀತಿ ಖ್ಯಾತ ನಟಿಯರ ದೊಡ್ಡ ದೊಡ್ಡ ಫೋಟೋಗಳನ್ನು ಕಟ್ಟುವುದರಿಂದ ದಾರಿಯಲ್ಲಿ ಹೋಗುವ ಜನರು ಹೀರೋಯಿನ್ ನೋಡಿಕೊಂಡು ಹೋಗುತ್ತಾರೆ. ಆದರೆ ನಾನು ಬೆಳೆದ ಬೆಳೆಯನ್ನು ನೋಡುವುದಿಲ್ಲ, ಹೀಗಾಗಿ ಬೆಳೆಗೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News