ದೆಹಲಿ ಬಳಿ ಪ್ರತಿಭಟನೆ ನಡೆಸುತ್ತಿರುವ ರೈತರು ನಗರವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ದೆಹಲಿ ಗಡಿ ಪ್ರದೇಶಗಳಿಂದ ಪ್ರತಿಭಟನಾ ನಿರತ ರೈತರನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಕೋರ್ಟ್ ಈ ರೀತಿ ಹೇಳಿದೆ.
ಕೊರೊನಾ ಇರುವ ಮನೆಗಳ ಹೊರಗೆ ಪೋಸ್ಟರ್ಗಳನ್ನು ಅಂಟಿಸುವುದರಿಂದ ಅಂತಹ ರೋಗಿಗಳನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಟೀಕಿಸಿದ್ದು, ಈ ಅಭ್ಯಾಸವನ್ನು ನಿಷೇಧಿಸುವಂತೆ ಹೇಳಿದೆ. ಈ ಕುರಿತಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಕೋವಿಡ್ -19ನ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದೆ. ಜೊತೆಗೆ ಕೇವಲ ಮಾರ್ಗಸೂಚಿಗಳನ್ನು ಮಾಡುವುದರಿಂದ ಏನೂ ಆಗಲ್ಲ, ಅವುಗಳನ್ನು ಪಾಲಿಸುವಂತೆ ಮಾಡುವುದು ಕೂಡ ಅವಶ್ಯಕವಾಗಿದೆ ಎಂದಿದೆ.
ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಎಂಟರ್ಪ್ರೈಸಸ್ಗೆ ಗುತ್ತಿಗೆ ನೀಡುವ ಕೇಂದ್ರದ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಕೇರಳದ ಎಡಪಂಥೀಯ ಸರ್ಕಾರವು ಪ್ರಶ್ನಿಸಿ ಅದಕ್ಕೆ ತಡೆ ನೀಡುವಂತೆ ಕೋರಿದೆ.
ಕೊರೊನಾ ವೈರಸ್ ಪ್ರಕೋಪ ದೇಶಾದ್ಯಂತ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ, ಕರೋನಾ ವೈರಸ್ ಪರೀಕ್ಷೆಗೆ ನಡೆಸಲಾಗುವೆ ಆರ್ಟಿ-ಪಿಸಿಆರ್ ಟೆಸ್ಟ್ ದರವನ್ನು ನಿರ್ಧರಿಸಲು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬಡೆ (SA Bobde) ಅವರನ್ನು ಒಳಗೊಂಡಿರುವ ತ್ರಿಸದಸ್ಯ ಪೀಠವು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ. ತ್ರಿಸದಸ್ಯ ಪೀಠವು ನವೆಂಬರ್ 18ರಂದು ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಕಾದಿರಿಸಿತ್ತು.
ಅನ್ವಾಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ (ಎಸ್ಸಿ) ಬುಧವಾರ (ನವೆಂಬರ್ 11) ಆಲಿಸಿ ಗೋಸ್ವಾಮಿ ಮತ್ತು ಇತರ ಸಹ ಆರೋಪಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ.
ಬಾಕಿ ಸಾಲ ಮರುಪಾವತಿಯಾಗದ ಹಿನ್ನಲೆಯಲ್ಲಿ ವಿಜಯ ಮಲ್ಯ ಒಡೆತನದ ಯುನೈಟೆಡ್ ಬ್ರಿವರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ (UBHL) ಕಂಪನಿಯ ವ್ಯವಹಾರ ಸ್ಥಗಿತಗೊಳಿಸಿ ಬಾಕಿ ವಸೂಲಿ ಮಾಡುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ಅದೇಶಿಸಿತ್ತು. ಈ ಆದೇಶವನ್ನು ಸೋಮವಾರ ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೃಷಿ ಬೆಂಕಿಯ ಬಗ್ಗೆ ನಿಗಾ ಇಡಲು ಸುಪ್ರೀಂ ಕೋರ್ಟ್ ತನ್ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಏಕ ಸದಸ್ಯರ ಸಮಿತಿಯನ್ನು ಶುಕ್ರವಾರ ರಚಿಸಿತು.ದಸರಾ ರಜೆಯ ನಂತರ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ನ ಆದೇಶದ ಆಧಾರದ ಮೇಲೆ ಡಿಜಿಸಿಎ ಪ್ರಯಾಣಿಕರನ್ನು ಮೂರು ವಿಭಾಗಗಳಾಗಿ ವಿಂಗಡಿಸಿದೆ. ಮಾರ್ಚ್ 25 ರಿಂದ ಮೇ 24 ರವರೆಗಿನ ಇದೇ ಪ್ರಯಾಣದ ಟಿಕೆಟ್ಗಳನ್ನು ಖರೀದಿಸಿದ ಪ್ರಥಮ ದರ್ಜೆಯಲ್ಲಿ ಪ್ರಯಾಣಿಕರಿದ್ದಾರೆ.
ಝೀ ನ್ಯೂಸ್ ಅಭಿಯಾನದ ಮೇಲೆ ಇಂದು ತನ್ನ ಮೊಹರು ಒತ್ತಿರುವ ಸುಪ್ರೀಂ ಕೋರ್ಟ್ ಶಾಹೀನ್ ಬಾಗ್ ನಲ್ಲಿ ರಸ್ತೆ ತಡೆ ನಡೆಸಿರುವ ಘಟನೆಯನ್ನು ತಪ್ಪು ಎಂದು ಹೇಳಿದೆ. ಜೊತೆಗೆ ಯಾವುದೇ ಸಾರ್ವಜನಿಕ ಸ್ಥಳವನ್ನು ಅನಿರ್ಧಿಷ್ಟ ಕಾಲದ ಬರೆಗೆ ಬ್ಲಾಕ್ ಮಾಡಬಾರದು ಎಂದು ಹೇಳಿದೆ.
ಕರೋನಾ ಬಿಕ್ಕಟ್ಟಿನಲ್ಲಿ ಸಾಲ ಪಡೆದವರಿಗೆ ಕೇಂದ್ರ ಸರ್ಕಾರ ಭಾರಿ ನೆಮ್ಮದಿ ನೀಡಿದೆ. 2 ಕೋಟಿ ರೂ.ವರೆಗಿನ ಸಾಲಗಳ ಮೇಲಿನ ಸಂಯುಕ್ತ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಇದರೊಂದಿಗೆ ಗೃಹ ಸಾಲ, ವೈಯಕ್ತಿಕ ಸಾಲ, ಎಂಎಸ್ಎಂಇ ಸಾಲ ಪಡೆದವರಿಗೆ ದೊಡ್ಡ ಲಾಭ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.