ಇತ್ತೀಚೆಗೆ, ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯಲ್ಲಿ ಉಂಟಾದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಹಿಂಸಾಚಾರ ಹುಟ್ಟುಹಾಕಿದ ಮಾಸ್ಟರ್ ಮೈಂಡ್ ಯಾರು? ಈ ಪ್ರಕರಣದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಅಂದರೆ PFI ಇರುವ ಶಂಕೆ ದಟ್ಟವಾಗಿದೆ.
ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ಶುಕ್ರವಾರ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದ ದೀದಿ, ಕಾಯ್ದೆಯ ಅನುಷ್ಠಾನದ ಕುರಿತು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಮತ್ತು ಈಗಾಗಲೇ ಹಲವು ಜನರ ಸಾವಿಗೆ ಕಾರಣವಾದ ಪ್ರತಿಭಟನೆಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ರಾಮಲೀಲಾ ಮೈದಾನದಿಂದ ಜನರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, NRC ಹಾಗೂ CAA ಕುರಿತು ಹಬ್ಬಿಸಲಾಗಿರುವ ವದಂತಿಗಳನ್ನು ಅಲ್ಲಗಳೆದಿದ್ದು, ಇವುಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳ ಮೇಲೂ ಕೂಡ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಪ್ರಶಾಂತ್ ಕಿಶೋರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರು ಶುಕ್ರವಾರ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹರಿಬಿಟ್ಟ ವೀಡಿಯೊ ಸಂದೇಶಕ್ಕೆ ರೀಟ್ವೀಟ್ ಮಾಡಿರುವ ಅವರು ಸೋನಿಯಾ ಗಾಂಧಿ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ.
ರಜನಿಕಾಂತ್ ಅವರ ಹೇಳಿಕೆಯನ್ನು ವಿರೋಧಿಸುವವರು ಈ ಟ್ವೀಟ್ನಲ್ಲಿ ನಾಗರಿಕರ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸಿಲ್ಲ ಎಂದು ತಿಳಿದಿರಬೇಕು ಎಂದು ಸೌಮಯ ಬರೆದಿದ್ದಾರೆ. ನಾಗರಿಕನಂತೆ ಅವರು ಹಿಂಸಾಚಾರದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಬರೆದಿದ್ದಾರೆ.
ಪೌರತ್ವ ಮಸೂದೆಯನ್ನು ದೇಶದ ಸಂಸತ್ತು ಅಂಗೀಕರಿಸಿದೆ. ಅವರ ರಾಷ್ಟ್ರಪತಿಗಳ ಸಹಿಯೊಂದಿಗೆ, ಅದು ಈಗ ದೇಶದ ಕಾನೂನಾಗಿ ಮಾರ್ಪಟ್ಟಿದೆ. ಸಂಸತ್ತಿನಲ್ಲಿನ ಸೋಲನ್ನು ಮರೆಮಾಚುವ ಸಲುವಾಗಿ ಕೆಲವು ರಾಜಕೀಯ ಪಕ್ಷಗಳು ತಮ್ಮ ಕ್ಷೀಣಿಸುತ್ತಿರುವ ಮತ ಬ್ಯಾಂಕ್ ಮತ್ತು ಸರ್ಕಾರದೊಂದಿಗೆ ಜನರನ್ನು ಗೊಂದಲಗೊಳಿಸುವ ಮೂಲಕ ದೇಶದಲ್ಲಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸಾರ್ವಜನಿಕರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಪ್ರಧಾನಿ, " ಇದು ಶಾಂತಿ, ಐಕ್ಯತೆ ಹಾಗೂ ಬಾಂಧವ್ಯ ಕಾಪಾಡುವ ಸಮಯವಾಗಿದ್ದು, ಯಾವುದೇ ರೀತಿಯ ವದಂತಿ ಹಾಗೂ ಸುಳ್ಳು ಹೇಳಿಕೆಗಳಿಂದ ದೂರವಿರುವಂತೆ ನನ್ನ ಮನವಿ" ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.