ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದ ಮೊದಲೇ ಇದೇನು ಹೇಳಿದ್ರು ಕೇನ್ ವಿಲಿಯಮ್ಸನ್?

Ind Vs NZ Semifinal: ನಮ್ಮ ಹೆಚ್ಚಿನ ಆಟಗಾರರು ಈ ಕ್ರೀಡಾಂಗಣದಲ್ಲಿ ಮತ್ತು ಅಂತಹ ದೊಡ್ಡ ಸಂದರ್ಭದಲ್ಲಿ ಪಂದ್ಯವನ್ನು ಆಡಿಲ್ಲ ಎಂದು ವಿಲಿಯಮ್ಸನ್ ಒಪ್ಪಿಕೊಂಡಿದ್ದಾರೆ. ಇದು ನಮಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ. ಭಾರತ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. (ICC World Cup 2023 News In Kannada)  

Written by - Nitin Tabib | Last Updated : Nov 14, 2023, 06:25 PM IST
  • ರಚಿನ್ ರವೀಂದ್ರ ಕುರಿತು ಮಾತನಾಡಿ ರಚಿನ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ.
  • ಅವರು ಸ್ಕೋರ್ ಮಾಡುತ್ತಿರುವ ರೀತಿ ಅಸಾಧಾರಣವಾಗಿದೆ.
  • ಏಕದಿನ ಕ್ರಿಕೆಟ್ ಮತ್ತು ವಿಶ್ವಕಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದ ಮೊದಲೇ ಇದೇನು ಹೇಳಿದ್ರು ಕೇನ್ ವಿಲಿಯಮ್ಸನ್? title=

ICC World Cup 2023 First Semifinal: 2023ರ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನವೆಂಬರ್ 15 ರಂದು ನಡೆಯಲಿದೆ. ಈ ಪಂದ್ಯವು ಎರಡೂ ತಂಡಗಳಿಗೆ ಅತ್ಯಂತ ಅತ್ಯಂತ ಮಹತ್ವದ ಪಂದ್ಯವಾಗಿರಲಿದೆ, ಏಕೆಂದರೆ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ ಪ್ರವೇಶಿಸಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗುತ್ತದೆ ಎಂದು ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಭಾರತ ತಂಡ ಅತ್ಯಂತ ಬಲಿಷ್ಠ ತಂಡವಾಗಿದ್ದು, ಹಲವು ಅನುಭವಿ ಆಟಗಾರರನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಆಟವಾಡಲು ಪ್ರಯತ್ನಿಸಬೇಕು ಎಂದು ಅವರು ಹೇಳಿದ್ದಾರೆ. ಇದಲ್ಲದೇ ಇನ್ನೂ ಹಲವು ಸಂಗತಿಗಳನ್ನು ಅವರು ಮುಂದಿಟ್ಟಿದ್ದಾರೆ. (ICC World Cup 2023 News In Kannada)

'ದೊಡ್ಡ ಸವಾಲಾಗಲಿದೆ'
ಭಾರತವನ್ನು ಸೆಮಿಫೈನಲ್ ನಲ್ಲಿ ಎದುರಿಸುವುದು ಒಂದು ದೊಡ್ಡ ಸವಾಲಾಗಿದೆ ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪಂದ್ಯದ ಮೊದಲು ಸುದ್ದಿಗೋಷ್ಠಿಯಲ್ಲಿ ಹೇಳಿದಾರೆ. ಹಲವು ಆಟಗಾರರನ್ನು ಪ್ರಸ್ತಾಪಿಸಿದ ಅವರು, ಸೂರ್ಯಕುಮಾರ್ ಯಾದವ್ ಓರ್ವ ಅತ್ಯುತ್ತಮ ಆಟಗಾರರಾಗಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ, ಸೂರ್ಯ ಹಲವು ವಿಧದ ಶಾಟ್ ಗಳನ್ನು ಆಡುವ ಕೌಶಲ್ಯ ಹೊಂದಿದ್ದಾರೆ. ಆದರೆ ನಮ್ಮ ತಂಡದಲ್ಲಿ ಎಲ್ಲರೂ ಫಿಟ್ ಆಗಿದ್ದಾರೆ ಎಂದೂ ಹೇಳಿದ್ದಾರೆ. ಎರಡೂ ತಂಡಗಳ ಹೋಲಿಕೆಯಲ್ಲಿ, ನಾವು ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದೇವೆ ಆದರೆ ಭಾರತ ಅಸಾಧಾರಣವಾಗಿದೆ ಎಂದು ಹೇಳಿದ್ದಾರೆ. ಇದೀಗ ನಮಗೆ ಅವಕಾಶವಿದೆ. ನಾವು ಅನೇಕ ಬಾರಿ ಹತ್ತಿರ ಬಂದಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ-ನಿಮ್ಮ ಫೋನ್ ಗೆ ಈ 7 ಸಂದೇಶಗಳು ಬಂದರೆ, ಮರೆತೂ ಓಪನ್ ಮಾಡ್ಬೇಡಿ, ಇಲ್ದಿದ್ರೆ... ಖಾತೆ ಖಾಲಿ ಗ್ಯಾರಂಟಿ!

'ಭಾರತದ ವಿರುದ್ಧ ಆಡುವುದು ವಿಶೇಷ'
ಹಾರ್ದಿಕ್ ಗಾಯಗೊಂಡ ನಂತರ ಭಾರತದ ಸಮತೋಲನ ಬದಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ರಚಿನ್ ರವೀಂದ್ರ ಕುರಿತು ಮಾತನಾಡಿ ರಚಿನ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಅವರು ಸ್ಕೋರ್ ಮಾಡುತ್ತಿರುವ ರೀತಿ ಅಸಾಧಾರಣವಾಗಿದೆ. ಏಕದಿನ ಕ್ರಿಕೆಟ್ ಮತ್ತು ವಿಶ್ವಕಪ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಕದಿನ ಪಂದ್ಯದ ಭವಿಷ್ಯವನ್ನು ನಾವು ಊಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಜನ ಏನನ್ನು ನೋಡಬೇಕೋ ಅದನ್ನು ಮಾತ್ರ ನೋಡಬೇಕು. ಇದೀಗ ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಆಡುತ್ತಿರುವುದು ವಿಶೇಷ ಎಂದು ಕೇನ್ ಹೇಳಿದ್ದಾರೆ.

ಇದನ್ನೂ ಓದಿ-ಹತ್ತು ವರ್ಷಗಳ ಬಳಿಕ ಕೇತು-ಶುಕ್ರರ ಶುಭ ಸಂಯೋಜನೆ, ಶುಕ್ರದೆಸೆಯಿಂದ ಈ ಜನರಿಗೆ ಸಿಗಲಿದೆ ಅಪಾರ ಧನ-ಸಂಪತ್ತು!

ಟೀಂ ಇಂಡಿಯಾ ಇನ್ನೂ ಅಜೇಯ
ನಮ್ಮ ಹೆಚ್ಚಿನ ಆಟಗಾರರು ಈ ಕ್ರೀಡಾಂಗಣದಲ್ಲಿ ಮತ್ತು ದೊಡ್ಡ ಸಂದರ್ಭದಲ್ಲಿ ಪಂದ್ಯವನ್ನು ಆಡಿಲ್ಲ ಎಂದು ವಿಲಿಯಮ್ಸನ್ ಒಪ್ಪಿಕೊಂಡಿದ್ದಾರೆ. ಇದು ನಮಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ. ಭಾರತ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. 2019 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ, ಭಾರತ ತಂಡವನ್ನು ನ್ಯೂಜಿಲೆಂಡ್ ತಂಡವು 18 ರನ್‌ಗಳಿಂದ ಸೋಲಿಸಿತ್ತು ಮತ್ತು ಟೀಮ್ ಇಂಡಿಯಾ ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಬಿದ್ದಿತ್ತು. ಪ್ರಸ್ತುತ, ಭಾರತ ತಂಡವು 2023 ರ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇದುವರೆಗೆ ಅಜೇಯ ತಂಡವಾಗಿ ಹೊರಹೊಮ್ಮಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News