IND-BAN ಪಂದ್ಯಕ್ಕೆ ಮಳೆ ಅಡ್ಡಿ ಭೀತಿ : ಏನು ಹೇಳುತ್ತದೆ ಹವಾಮಾನ ವರದಿ

IND vs BAN, Latest Weather Updates:ಬಾಂಗ್ಲಾದೇಶ-ಭಾರತ ಪಂದ್ಯದ ಮೇಲೆ ಮಳೆಯ ಛಾಯೆ ಆವರಿಸಿದೆ. ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ಇಲ್ಲಿ ಮಳೆಯಾಗಿದೆ.

Written by - Ranjitha R K | Last Updated : Oct 19, 2023, 10:32 AM IST
  • ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ
  • ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ ಪಂದ್ಯ
  • ಪಂದ್ಯಕ್ಕೆ ಅಡ್ಡಿಯಾಗುವನೆ ವರುಣ ?
IND-BAN ಪಂದ್ಯಕ್ಕೆ ಮಳೆ ಅಡ್ಡಿ ಭೀತಿ :  ಏನು ಹೇಳುತ್ತದೆ ಹವಾಮಾನ ವರದಿ  title=

IND vs BAN, Latest Weather Updates : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ.  ಪಂದ್ಯ ಆರಂಭಕ್ಕೂ, ಮುನ್ನವೇ ಇಲ್ಲಿ ಮಳೆಯಾಗಿದೆ. ಬುಧವಾರ ನಡೆದ ಇತ್ತಂಡಗಳ ಅಭ್ಯಾಸದ ವೇಳೆ  ವರುಣ ಅಡ್ಡಿ ಪಡಿಸಿದ್ದಾನೆ. ಹೀಗಿರುವಾಗ ಪಂದ್ಯದ ವೇಳೆಯೂ ಮಳೆ ಅಡ್ಡಿಪಡಿಸುವುದೇ ಎನ್ನುವ ಪ್ರಶ್ನೆ ಎದ್ದಿದೆ. 

ಪಂದ್ಯಕ್ಕೆ ಅಡ್ಡಿಯಾಗುವನೇ ವರುಣ ? : 
ಬಾಂಗ್ಲಾದೇಶ-ಭಾರತ ಪಂದ್ಯದ ಮೇಲೆ ಮಳೆಯ ಛಾಯೆ ಆವರಿಸಿದೆ. ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ಇಲ್ಲಿ ಮಳೆಯಾಗಿದೆ. ಇಂದಿನ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳ  ಆತಂಕವನ್ನು ವರುಣ ಹೆಚ್ಚಿಸಿದ್ದಾನೆ. ಬುಧವಾರ, ಎರಡೂ ತಂಡಗಳ ಅಭ್ಯಾಸದ ಅವಧಿಯಲ್ಲಿ ಮಳೆಯ ಸಿಂಚನವಾಗಿದೆ. ಹೀಗಾಗಿ ಇಂದು ಕೂಡಾ ಮಳೆಯಾದರೆ ಪಂದ್ಯದ ಗತಿ ಏನು ಎನ್ನುವ ಆತಂಕ ಅಭಿಮಾನಿಗಳದ್ದು. 

ಇದನ್ನೂ ಓದಿ : ಬಾಂಗ್ಲಾ ವಿರುದ್ದ ಪಂದ್ಯದಲ್ಲಿ ಈ ಮಾರಕ ಬೌಲರ್ ಎಂಟ್ರಿ ! ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್ 11

ಏನು ಹೇಳುತ್ತದೆ ಇತ್ತೀಚಿನ ಹವಾಮಾನ ವರದಿ : 
ಪಂದ್ಯದ ದಿನದಂದು ಮೋಡಗಳು ಚದುರಿ ಹೋಗುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಾಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ. ಅಲ್ಲದೆ ಇಂದು ತಾಪಮಾನವು ಸುಮಾರು 33 ಡಿಗ್ರಿ ಸೆಲ್ಸಿಯಸ್ ಮತ್ತು ಆರ್ದ್ರತೆಯ ಮಟ್ಟವು ಸುಮಾರು 41% ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ವಿಶ್ವಕಪ್ ಋತುವಿನಲ್ಲಿ ಎರಡು ಲೀಗ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದೆ. ಆಸ್ಟ್ರೇಲಿಯಾ-ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ-ನೆದರ್ಲೆಂಡ್ ನಡುವಿನ ಪಂದ್ಯಗಳಲ್ಲಿ ಮಳೆಯಾಗಿತ್ತು. 

ಇಂದಿನ ಪಂದ್ಯಕ್ಕೆ ಬಾಂಗ್ಲಾದೇಶ ತಂಡ : 
ಶಾಕಿಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ (ಉಪನಾಯಕ), ಲಿಟನ್ ದಾಸ್, ತಂಜೀದ್ ಹಸನ್ ತಮೀಮ್, ತೌಹೀದ್ ಹೃದಯ್, ಮುಶ್ಫಿಕರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೆಹಂದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೆದಿ ಹಸನ್, ತಸ್ಕಿನ್, ತಸ್ಕಿನ್ ಮುಸ್ತಫಿಜುರ್ ರೆಹಮಾನ್. , ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ.

ಇದನ್ನೂ ಓದಿ : ಸಿಸ್ಟೋಬಾಲ್ ಪಂದ್ಯಾವಳಿಗೆ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಆಯ್ಕೆ..!

ಇಂದಿನ ಪಂದ್ಯಕ್ಕೆ ಭಾರತ ತಂಡ :
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಶುಭಮನ್ ಗಿಲ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್ ಶಾರ್ದೂಲ್ ಠಾಕೂರ್/ ಆರ್ ಅಶ್ವಿನ್ ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News