ಸಿರಾಜ್‌ ಬದಲಿಗೆ ರೋಹಿತ್ ತಿಲಕ್ ವರ್ಮಾ ಕೈಗೆ ಏಷ್ಯಾ ಕಪ್ ನೀಡಿದ್ದು ಏಕೆ ಗೊತ್ತೆ..?

Asia cup 2023 trophy : ಏಷ್ಯಾಕಪ್ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣವಾದ ವೇಗಿ ಮೊಹಮ್ಮದ್ ಸಿರಾಜ್ ಬದಲಿಗೆ ರೋಹಿತ್ ಶರ್ಮಾ ತಿಲಕ್ ವರ್ಮಾಗೆ ಟ್ರೋಫಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತ ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ..

Written by - Krishna N K | Last Updated : Sep 19, 2023, 12:38 PM IST
  • ಏಷ್ಯಾಕಪ್ ಟ್ರೋಫಿ ಗೆಲುವಿಗೆ ಮೊಹಮ್ಮದ್‌ ಸಿರಾಜ್‌ ಪ್ರಮುಖ ಕಾರಣ.
  • ಸಿರಾಜ್ ಬದಲಿಗೆ ರೋಹಿತ್ ಶರ್ಮಾ ತಿಲಕ್ ವರ್ಮಾಗೆ ಟ್ರೋಫಿ ನೀಡಿದ್ದರು.
  • ರೋಹಿತ್ ಶರ್ಮಾ ತಿಲಕ್ ವರ್ಮಾಗೆ ಟ್ರೋಫಿ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಸಿರಾಜ್‌ ಬದಲಿಗೆ ರೋಹಿತ್ ತಿಲಕ್ ವರ್ಮಾ ಕೈಗೆ ಏಷ್ಯಾ ಕಪ್ ನೀಡಿದ್ದು ಏಕೆ ಗೊತ್ತೆ..? title=

Mohammed siraj : ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿದ ಭಾರತ ಏಷ್ಯಾಕಪ್ ಗೆದ್ದುಕೊಂಡಿತು. ಭಾರತದ ಯಶಸ್ಸಿನಲ್ಲಿ ಮೊಹಮ್ಮದ್ ಸಿರಾಜ್‌ಗೆ ಸಿಂಹಪಾಲಿದೆ. ಈ ಪಂದ್ಯದಲ್ಲಿ ಸಿರಾಜ್‌ 6 ವಿಕೆಟ್ ಪಡೆದು ಭಾರತದ ಗೆಲುವನ್ನು ಸುಗಮಗೊಳಿಸಿದರು. ಆದರೆ ಏಷ್ಯಾಕಪ್ ಟ್ರೋಫಿ ಗೆಲುವಿಗೆ ಪ್ರಮುಖ ಕಾರಣರಾದ ಸಿರಾಜ್ ಗೆ ಟ್ರೋಫಿ ನೀಡಲಿಲ್ಲ. ಬದಲಾಗಿ ರೋಹಿತ್ ಶರ್ಮಾ ತಿಲಕ್ ವರ್ಮಾ ಅವರಿಗೆ ನೀಡಿದರು. ರೋಹಿತ್ ಯಾಕೆ ಹೀಗೆ ಮಾಡಿದ್ದಾನೆ ಅನ್ನೋದು ಈಗ ಬೆಳಕಿಗೆ ಬಂದಿದೆ.

ಭಾರತ ಪಂದ್ಯ ಗೆದ್ದ ನಂತರ ಬಹುಮಾನ ವಿತರಣೆ ಆರಂಭವಾಯಿತು. ಮೊದಲಿಗೆ ಅತ್ಯುತ್ತಮ ಕ್ಯಾಚ್‌ಗಾಗಿ ರವೀಂದ್ರ ಜಡೇಜಾ ಅವರಿಗೆ ಪ್ರಶಸ್ತಿ ನೀಡಲಾಯಿತು. ನಂತರ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಸರಣಿಯಲ್ಲಿ ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿ ಪಡೆದರು. 

ಇದನ್ನೂ ಓದಿ: ವಿರಾಟ್ ನಡೆಯೋದು ಹೀಗಂತೆ… ಕೊಹ್ಲಿ ಇಮಿಟೇಟ್ ಮಾಡಿ ಹೊಟ್ಟೆಹುಣ್ಣಾಗುವಂತೆ ನಗಿಸಿದ ಇಶಾನ್! ವಿಡಿಯೋ

ಆ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಕರೆಸಲಾಯಿತು. ರೋಹಿತ್‌ಗೆ ಪಂದ್ಯಾವಳಿಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆ ರೋಹಿತ್ ಉತ್ತರವನ್ನೂ ನೀಡಿದರು. ನಂತರ ಈ ಟೂರ್ನಿಯ ಟ್ರೋಫಿಯನ್ನು ರೋಹಿತ್ ಶರ್ಮಾ ಅವರಿಗೆ ನೀಡಲಾಯಿತು. ರೋಹಿತ್ ಖುಷಿಯಿಂದ ಟ್ರೋಫಿ ಸ್ವೀಕರಿಸಿದರು. ನಂತರ ರೋಹಿತ್ ತಿಲಕ್ ವರ್ಮಾ ಅವರಿಗೆ ಟ್ರೋಫಿ ಹಸ್ತಾಂತರಿಸಿದರು.

ಯುವ ಆಟಗಾರ ತಿಲಕ್ ವರ್ಮಾ ಅವರು ತಮ್ಮ ಸಹ ಆಟಗಾರರಿಗೆ ಟ್ರೋಫಿಯನ್ನು ಮೊದಲ ಬಾರಿಗೆ ನೀಡಿದರು. ಅಲ್ಲದೆ, ಇದೀಗ ಭಾರತ ತಂಡಕ್ಕೆ ಪ್ರವೇಶ ಪಡೆದಿರುವ ಯುವ ಆಟಗಾರನಾಗಿರುವ ಅವರನ್ನು ಪ್ರೋತ್ಸಾಹಿಸಲು ನಾಯಕ ರೋಹಿತ್ ಶರ್ಮಾ ಈ ರೀತಿ ಮಾಡಿದ್ದಾಗಿ ತಿಳಿದು ಬಂದಿದೆ. ಸಾಮಾನ್ಯವಾಗಿ ಭಾರತ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲು ನಾಯಕ ರೋಹಿತ್ ಶರ್ಮಾ ಹೆಚ್ಚು ಆಸಕ್ತಿ ವಹಿಸುತ್ತಾರೆ. ಅದಕ್ಕೆ ರೋಹಿತ್ ಟ್ರೋಪಿಯನ್ನು ವರ್ಮಾಗೆ ನೀಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News