Rishabh Pant ಜೊತೆ ವಿವಾಹದ ಕುರಿತು ಈ ಖ್ಯಾತ ಬಾಲಿವುಡ್ ನಟಿ ಹೇಳಿದ್ದೇನು?

Urvashi Rautela On Marriage With Rishabh Pant: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಜೊತೆಗೆ ವಿವಾಹದ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಊರ್ವಶಿ ಮತ್ತು ರಿಷಬ್ ಪಂತ್ ಈ ಹಿಂದೆ ಪರಸ್ಪರರಿಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.  

Written by - Nitin Tabib | Last Updated : May 4, 2024, 09:54 PM IST
  • ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ.
  • ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತದ ನಂತರ ಅವರು ಮೊದಲ ಬಾರಿಗೆ IPL 2024 ರ ಭಾಗವಾಗಿದ್ದಾರೆ.
  • ಈ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿದ್ದಾರೆ.
Rishabh Pant ಜೊತೆ ವಿವಾಹದ ಕುರಿತು ಈ ಖ್ಯಾತ ಬಾಲಿವುಡ್ ನಟಿ ಹೇಳಿದ್ದೇನು? title=

Urvashi Rautela On Rishabh Pant: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಈ ಹಿಂದೆ ಸಾಕಷ್ಟು ಸುದ್ದಿಯಲ್ಲಿದ್ದರು. ಒಂದು ಕಾಲದಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಕೂಡ ಪ್ರಕಟಗೊಂಡಿದ್ದವು. ಇದಾದ ಬಳಿಕ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಪ್ರಕಟಗೊಂಡಿತು. ಆದರೆ, ಊರ್ವಶಿ ಹಲವು ಸಂದರ್ಭಗಳಲ್ಲಿ ರಿಷಬ್ ಪಂತ್ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಏತನ್ಮಧ್ಯೆ, ಈ ಬಾಲಿವುಡ್ ನಟಿಗೆ ರಿಷಬ್ ಪಂತ್ ಜೊತೆಗಿನ ಮದುವೆಯ ಬಗ್ಗೆ ಪ್ರಶ್ನೆ ಕೇಳಿದಾಗ, ಆಕೆ ನೀಡಿದ ಉತ್ತರವೇನು ತಿಳಿದುಕೊಳ್ಳೋಣ ಬನ್ನಿ, 

ಇದನ್ನೂ ಓದಿ-IPL 2024: SRH ಗೆಲುವಿನ ಬಳಿಕ ಹುಚ್ಚೆದ್ದು ಕುಣಿದ Kavya Maran, ಪಂದ್ಯದ ಬಳಿಕ ಪಾರ್ಟಿ ಮಾಡಿದ ಆಟಗಾರರು!

ಊರ್ವಶಿ ಕೊಟ್ಟ ಉತ್ತರವೇನು?
ಪಾಡ್‌ಕಾಸ್ಟ್‌ನಲ್ಲಿ ಊರ್ವಶಿ ರೌಟೇಲಾ ಅವರಿಗೆ ರಿಷಬ್ ಪಂತ್ ಅವರ ಜೊತೆ ಮದುವೆಯಾಗುವ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ವಾಸ್ತವದಲ್ಲಿ, ಈ ಪಾಡ್‌ಕ್ಯಾಸ್ಟ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಈ ಕುರಿತು ಬರೆದುಕೊಂಡ ಬಳಕೆದಾರರು, 'ರಿಷಬ್ ಪಂತ್ ನನ್ನು ಮರೆಯಬೇಡಿ ಮೇಡಂ. ಅವನು ನಿಮ್ಮನ್ನು ತುಂಬಾ ಗೌರವಿಸುತ್ತಾನೆ. ಅವನು ನಿಮ್ಮನ್ನು ತುಂಬಾ ಸಂತೋಷದಿಂದ ಇಡುತ್ತಾನೆ. ನೀವು ಅವರನ್ನು ಮದುವೆಯಾದರೆ ನಮಗೆ ಸಾಕಷ್ಟು ಖುಷಿಯಾಗುತ್ತದೆ' ಎಂದು. ಪೋಡ್‌ಕ್ಯಾಸ್ಟ್‌ನ ಹೋಸ್ಟ್ ಊರ್ವಶಿ ಅವರನ್ನು ಕೇಳಿದಾಗ, ಸ್ವಲ್ಪ ನಿಂತು ಉತ್ತರ ನೀಡಿದ ನಟಿ 'ನೋ ಕಾಮೆಂಟ್ಸ್' ಎಂದು ಉತ್ತರಿಸಿದ್ದಾಳೆ.

ಇದನ್ನೂ ಓದಿ-Mahendra Singh Dhoni ತಂಡದ ದಿಗ್ಗಜ ಆಟಗಾರನ ಹೃದಯ ಕದ್ದ ಈ ಸುಂದರಿ ಯಾರು?

ಮೈದಾನಕ್ಕೆ ಮರಳಿದ ಪಂತ್
ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ. ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತದ ನಂತರ ಅವರು ಮೊದಲ ಬಾರಿಗೆ IPL 2024 ರ ಭಾಗವಾಗಿದ್ದಾರೆ. ಈ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿದ್ದಾರೆ. ಇದುವರೆಗೆ ಋತುವಿನಲ್ಲಿ ಅವರ ಬ್ಯಾಟ್ ಹಲವು ಬಾರಿ ಅಬ್ಬರಿಸಿದೆ. ಬ್ಯಾಟ್ ಮಾತ್ರವಲ್ಲದೆ ವಿಕೆಟ್ ಹಿಂದೆಯೂ ಅತ್ಯುತ್ತಮ ಗ್ಲೌಸ್ ವರ್ಕ್ ಪ್ರದರ್ಶಿಸಿದ್ದಾರೆ. ಅವರ ಫಿಟ್ನೆಸ್ ಮತ್ತು ಪ್ರದರ್ಶನವನ್ನು ಪರಿಗಣಿಸಿ ಬಿಸಿಸಿಐ ಜೂನ್ 1 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್‌ನಲ್ಲಿ ತಂಡದಲ್ಲಿ ಅವರನ್ನು ಶಾಮೀಲುಗೊಳಿಸಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News