ಐಪಿಎಲ್‌ನ ಎರಡು ಪಂದ್ಯಗಳ ವೇಳಾಪಟ್ಟಿ ಬದಲಾವಣೆ: BCCI ನಿರ್ಧಾರದ ಹಿಂದಿನ ಕಾರಣ ಇದೇ

IPL 2024 Schedule: ಬಿಸಿಸಿಐ ಎರಡು ಪಂದ್ಯಗಳ ದಿನಾಂಕವನ್ನು ಬದಲಾಯಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ. 

Written by - Ranjitha R K | Last Updated : Apr 2, 2024, 04:03 PM IST
  • ಬಿಸಿಸಿಐನಿಂದ ದೊಡ್ಡ ನಿರ್ಧಾರ ಪ್ರಕಟ
  • ಎರಡು ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ
  • ವೇಳಾಪಟ್ಟಿಯಲ್ಲಿ ಏನು ಬದಲಾಗಿದೆ?
ಐಪಿಎಲ್‌ನ ಎರಡು ಪಂದ್ಯಗಳ ವೇಳಾಪಟ್ಟಿ ಬದಲಾವಣೆ: BCCI  ನಿರ್ಧಾರದ ಹಿಂದಿನ ಕಾರಣ ಇದೇ  title=

IPL 2024 Schedule:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಪ್ರಿಲ್ 2 ರಂದು ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಐಪಿಎಲ್‌ನ  ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ.ಬಿಸಿಸಿಐನ ಈ ನಿರ್ಧಾರ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್, ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಒಂದು ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಬಹುದು ಎನ್ನುವ ಸೂಚನೆಗಳು ಸಿಕ್ಕಿತ್ತು. ಆದರೆ ಬಿಸಿಸಿಐ ಎರಡು ಪಂದ್ಯಗಳ ದಿನಾಂಕವನ್ನು ಬದಲಾಯಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ. 

ವೇಳಾಪಟ್ಟಿಯಲ್ಲಿ ಏನು ಬದಲಾಗಿದೆ?: 
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಆರಂಭದಲ್ಲಿ ಏಪ್ರಿಲ್ 17 ರಂದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕು ಎಂದು ನಿಗದಿಯಾಗಿತ್ತು. ಆದರೆ ಈಗ ಇದೇ ಮೈದಾನದಲ್ಲಿ ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 16 ರಂದು ಈ ಪಂದ್ಯ ನಡೆಯಲಿದೆ. ಇದರಿಂದಾಗಿ ಈಗಾಗಲೇ 16ರಂದು ನಿಗದಿಯಾಗಿದ್ದ ಪಂದ್ಯದ ವೇಳಾಪಟ್ಟಿಯನ್ನು ಕೂಡಾ ಬದಲಾಯಿಸಬೇಕಾಯಿತು.ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಪ್ರಿಲ್ 16 ರಂದು ನಡೆಯಲಿರುವ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಈಗ 17 ರಂದು ನಡೆಯಲಿದೆ.

ಇದನ್ನೂ ಓದಿ :IPL 2024, RCB vs LSG: ಆರ್​ಸಿಬಿ vs ಲಕ್ನೋ ಟೈಟ್‌ ಫೈಟ್‌ನಲ್ಲಿ ಗೆಲುವು ಯಾರಿಗೆ..?   

ವೇಳಾಪಟ್ಟಿ ಬದಲಿಸಲು ಕಾರಣ : 
ಐಪಿಎಲ್ 17ನೇ ಸೀಸನ್ ಮಾರ್ಚ್ 22 ರಂದು ಆರಂಭವಾಗಿದ್ದು, ಇಲ್ಲಿಯವರೆಗೆ 14 ಪಂದ್ಯಗಳನ್ನು ಆಯೋಜಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಬಿಸಿಸಿಐ  ಎರಡು ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸಿದೆ. ಏಪ್ರಿಲ್ 17 ರಂದು ರಾಮ ನವಮಿ. ಈ ದಿನ ಕೋಲ್ಕತ್ತಾದಲ್ಲಿ ಕೆಕೆಆರ್ ಮತ್ತು ರಾಜಸ್ಥಾನ ನಡುವೆ ಪಂದ್ಯ ನಡೆಯಬೇಕಿತ್ತು. ರಾಮನವಮಿ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರು ಭದ್ರತೆ ನೀಡಲು ನಿರಾಕರಿಸಿದ್ದಾರೆ.ಇನ್ನೊಂದು ದಿನ ಪಂದ್ಯ ಆಯೋಜಿಸುವಂತೆ ಕೋಲ್ಕತ್ತಾ ಪೊಲೀಸರು ಐಪಿಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಬಿಸಿಸಿಐ ಪಂದ್ಯವನ್ನು ಏಪ್ರಿಲ್ 16 ರಂದು ನಡೆಸಲು ಒಪ್ಪಿಗೆ ನೀಡಿದೆ. ಈ ಕಾರಣಕ್ಕಾಗಿ, ಏಪ್ರಿಲ್ 16 ರಂದು ನಡೆಯಬೇಕಿದ್ದ ಗುಜರಾತ್ ಮತ್ತು ದೆಹಲಿ ನಡುವಿನ ಪಂದ್ಯವನ್ನು ಬಿಸಿಸಿಐ ಒಂದು ದಿನಕ್ಕೆ ಮುಂದೂಡಿದೆ.ಆ ಪ್ರಕಾರ ಈ ಪಂದ್ಯ ಈಗ ಏಪ್ರಿಲ್ 17 ರಂದು ನಡೆಯಲಿದೆ.

ಇದನ್ನೂ ಓದಿ : “ಅವ ಇನ್ನೂ ಮಗು… ಮೊದಲು ಕಿತ್ತೊಗೆಯಿರಿ”- MI ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಆಕ್ರೋಶ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News