IND vs SA: ರೋಹಿತ್ ಶರ್ಮಾ ನಿರೀಕ್ಷೆ ಹುಸಿಯಾಗಿಸಿದ ಆಟಗಾರ ! ಟೀಂ ಇಂಡಿಯಾ ಸೋಲಿನಲ್ಲಿ ಇವರದ್ದೇ ಮುಖ್ಯ ಪಾತ್ರ !

IND vs SA 1st Test:ಈ ಆಟಗಾರನ ಮೇಲೆ ನಾಯಕ ರೋಹಿತ್ ಶರ್ಮಾ  ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ  ನಿರೀಕ್ಷೆಯನ್ನು ತಲುಪುವುದು ಸಾಧ್ಯವಾಗಿಲ್ಲ.   

Written by - Ranjitha R K | Last Updated : Dec 29, 2023, 08:42 AM IST
  • ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು
  • ರೋಹಿತ್ ನಿರೀಕ್ಷೆ ಹುಸಿಯಾಗಿಸಿದ ಆಟಗಾರ
  • ಎರಡೂ ಇನ್ನಿಂಗ್ಸ್‌ಗಳಲ್ಲಿ ಫ್ಲಾಪ್ ಶೋ
IND vs SA: ರೋಹಿತ್ ಶರ್ಮಾ ನಿರೀಕ್ಷೆ ಹುಸಿಯಾಗಿಸಿದ ಆಟಗಾರ ! ಟೀಂ ಇಂಡಿಯಾ ಸೋಲಿನಲ್ಲಿ ಇವರದ್ದೇ ಮುಖ್ಯ ಪಾತ್ರ ! title=

IND vs SA 1st Test : ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 32 ರನ್‌ಗಳ ಸೋಲು ಕಂಡಿದೆ. ಈ ಟೆಸ್ಟ್ ಪಂದ್ಯದಲ್ಲಿ ಭಾರತದ ಸಂಪೂರ್ಣ ಬ್ಯಾಟಿಂಗ್ ಯೂನಿಟ್ ವಿಫಲವಾಗಿದ್ದರೂ, ಒಬ್ಬ ಬ್ಯಾಟ್ಸ್‌ಮನ್‌ನ ಕಳಪೆ ಪ್ರದರ್ಶನ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಆಟಗಾರನ ಮೇಲೆ ನಾಯಕ ರೋಹಿತ್ ಶರ್ಮಾ  ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ  ನಿರೀಕ್ಷೆಯನ್ನು ತಲುಪುವುದು ಸಾಧ್ಯವಾಗಿಲ್ಲ. 

ರೋಹಿತ್ ನಿರೀಕ್ಷೆ ಹುಸಿಯಾಗಿಸಿದ ಆಟಗಾರ : 
ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ವಿಫಲ ಪ್ರದರ್ಶನ ನೀಡಿದ್ದಾರೆ. ಸೆಂಚುರಿಯನ್‌ನ ಬೌನ್ಸಿ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ  ಫಾಸ್ಟ್ ಬೌಲರ್‌ಗಳ ವಿರುದ್ಧ ಶ್ರೇಯಸ್ ಅಯ್ಯರ್ ಮಂಡಿಯೂರಿದ್ದಾರೆ. ಸೆಂಚುರಿಯನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಕೇವಲ 31 ರನ್ ಗಳಿಸಿ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಫಾಸ್ಟ್ ಬೌಲರ್ ಕಗಿಸೊ ರಬಾಡ ಅವರು ಶ್ರೇಯಸ್ ಅಯ್ಯರ್ ಅವರನ್ನು  ಕ್ಲೀನ್ ಬೌಲ್ಡ್  ಮಾಡುವಲ್ಲಿ ಯಶಸ್ವಿಯಾದರು. 

ಇದನ್ನೂ ಓದಿ : ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಗೆ ಇನಿಂಗ್ಸ್ ಸಹಿತ 32 ರನ್ಗಳ ಸೋಲು 

ಎರಡನೇ ಇನ್ನಿಂಗ್ಸ್‌ನಲ್ಲೂ ಸಂಪೂರ್ಣ ವಿಫಲ : 
ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನುವ ವಿಶ್ವಾಸ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನದ್ದಾಗಿತ್ತು. ಆದರೆ ಈ ವಿಶ್ವಾಸ ಹುಸಿಯಾಗಿದೆ. ಶ್ರೇಯಸ್ ಅಯ್ಯರ್ ಎರಡನೇ ಇನ್ನಿಂಗ್ಸ್‌ನಲ್ಲಿ 12 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲಿ, ಶ್ರೇಯಸ್ ಅಯ್ಯರ್ ದಕ್ಷಿಣ ಆಫ್ರಿಕಾದ ಫಾಸ್ಟ್ ಬೌಲರ್ ಮಾರ್ಕೊ ಜಾನ್ಸೆನ್ ಗೆ ತನ್ನ ವಿಕೆಟ್ ಒಪ್ಪಿಸಿದರು.  

ಎರಡೂ ಇನ್ನಿಂಗ್ಸ್‌ಗಳಲ್ಲಿ ಫ್ಲಾಪ್ ಶೋ : 
ಸೆಂಚುರಿಯನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶ್ರೇಯಸ್ ಅಯ್ಯರ್ ನೀಡಿದ್ದು ಫ್ಲಾಪ್ ಶೋ. ಇದೀಗ ಟೆಸ್ಟ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ.  ಟೀಂ ಇಂಡಿಯಾ ಈ ಆಟಗಾರನ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ ಈ ಎಲ್ಲಾ ನಿರೀಕ್ಷೆಗಳನ್ನು ಪ್ರತಿ  ಹಂತದಲ್ಲೂ ಶ್ರೇಯಸ್ ಹುಸಿಯಾಗಿಸಿದ್ದಾರೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್‌ಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಲಾಯಿತು. ಆದರೆ ಅವರು ವಿಫಲ ಪ್ರದರ್ಶನ ನೀಡುವ ಮೂಲಕ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಆಡಳಿತ ಮಂಡಳಿಯ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. 

ಇದನ್ನೂ ಓದಿ : 9 ವಿಕೇಟ್‌ಗಳಿಗೆ ಡಿಕ್ಲೇರ್‌ ನೀಡಿದ ದಕ್ಷಿಣ ಆಫ್ರಿಕಾ! ಭಾರತಕ್ಕೆ 163 ರನ್‌ ಗಳ ಹಿನ್ನಡೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News