ಕೆಕೆಆರ್‌ಗೆ ದಕ್ಷಿಣ ಆಫ್ರಿಕಾದ ಹೊಸ ಕೋಚ್‌ ಎಂಟ್ರಿ..! ಏನಿದು ಶಾರುಖ್‌ ಖಾನ್‌ ಯೋಜನೆ..?

KKR Coach: ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಟಿ20 ವಿಶ್ವಕಪ್‌ನ ನಂತರ ಕೋಚ್‌ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ, ಹೊಸ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ವೇಳೆ ಗೌತಮ್ ಗಂಭೀರ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದರಿಂದ ಗೌತಮ್ ಗಂಭೀರ್ ಕೋಚ್‌ ಆಗಿ ತಂಡವನ್ನು ಹೇಗೆ ಮುನ್ನಡಿಸಿದ್ದಾರೆ ಎನ್ನು ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ.  

Written by - Zee Kannada News Desk | Last Updated : Jul 13, 2024, 07:36 AM IST
  • ಶ್ರೀಲಂಕಾ ಪ್ರವಾಸದ ವೇಳೆ ಗೌತಮ್ ಗಂಭೀರ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
  • ಕೆಕೆಆರ್‌ನ ಮೆಂಟರ್‌ ಸ್ಥಾನಕ್ಕೆ ಗೌತಮ್ ಗಂಭೀರ್ ವಿದಾಯ ಹೇಳಿದ್ದು ಟೀಂ ಇಂಡಿಯಾ ಕೋಚ್‌ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
  • ಕೆಕೆಆರ್ ತಂಡದ ಮಾಜಿ ಆಟಗಾರ ಖಲೀಸ್ ತಂಡಕ್ಕೆ ಸಲಹೆಗಾರರಾಗಿ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೆಕೆಆರ್‌ಗೆ ದಕ್ಷಿಣ ಆಫ್ರಿಕಾದ ಹೊಸ ಕೋಚ್‌ ಎಂಟ್ರಿ..! ಏನಿದು ಶಾರುಖ್‌ ಖಾನ್‌ ಯೋಜನೆ..? title=

KKR Coach: ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಟಿ20 ವಿಶ್ವಕಪ್‌ನ ನಂತರ ಕೋಚ್‌ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ, ಹೊಸ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ವೇಳೆ ಗೌತಮ್ ಗಂಭೀರ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದರಿಂದ ಗೌತಮ್ ಗಂಭೀರ್ ಕೋಚ್‌ ಆಗಿ ತಂಡವನ್ನು ಹೇಗೆ ಮುನ್ನಡಿಸಿದ್ದಾರೆ ಎನ್ನು ಬಗ್ಗೆ ನಿರೀಕ್ಷೆಗಳು ಹೆಚ್ಚಿವೆ.

2012 ಮತ್ತು 2014ರಲ್ಲಿ ಗೌತಮ್ ಗಂಭೀರ್,  ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಕೆಕೆಆರ್ ತಂಡದ ನಾಯಕರಾಗಿದ್ದರು. ಆ ಬಳಿಕ ಕಳೆದ ಐಪಿಎಲ್ ಸರಣಿಯಲ್ಲಿ ಮತ್ತೆ ಕೆಕೆಆರ್ ತಂಡದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದ ಗೌತಮ್ ಗಂಭೀರ್ 3ನೇ ಟ್ರೋಫಿಯನ್ನೂ ಗೆದ್ದುಕೊಂಡಿದ್ದರು. 

ಇದೀಗ ಕೆಕೆಆರ್‌ನ ಮೆಂಟರ್‌ ಸ್ಥಾನಕ್ಕೆ ಗೌತಮ್ ಗಂಭೀರ್ ವಿದಾಯ ಹೇಳಿದ್ದು ಟೀಂ ಇಂಡಿಯಾ ಕೋಚ್‌ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ಕಾರಣದಿಂದಾಗಿ ಇದೀಗ ಕೆಕೆಆರ್ ತಂಡದ ಸಲಹೆಗಾರರ ​​ಹುದ್ದೆ ಖಾಲಿ ಇದೆ. ಇದರಿಂದಾಗಿ ಆ ಸ್ಥಾನಕ್ಕೆ ಕೆಕೆಆರ್ ಟೀಮ್ ಮ್ಯಾನೇಜ್ ಮೆಂಟ್ ಯಾರನ್ನು ತರಲಿದೆ ಎಂಬ ಕುತೂಹಲ ಹಲವರಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ತಂಡದ ಮಾಜಿ ಆಟಗಾರ ಖಲೀಸ್ ತಂಡಕ್ಕೆ ಸಲಹೆಗಾರರಾಗಿ ಬರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Champions Trophy: ಟೀಂ ಇಂಡಿಯಾದ, ಪಾಕಿಸ್ತಾನ ಪ್ರವಾಸದ ಪ್ಲಾನ್‌ ಕ್ಯಾನ್ಸಲ್‌..! ಹಾಗಾದರೆ ಪಂದ್ಯ ನಡೆಯೋದು ಎಲ್ಲಿ..?

ಖಲೀಸ್‌ ಈಗಾಗಲೇ 2012 ಮತ್ತು 2014 ರಲ್ಲಿ KKR ಪ್ರಶಸ್ತಿಯನ್ನು ಗೆದ್ದಾಗ ಆಟಗಾರನಾಗಿ ತಂಡದಲ್ಲಿ ಆಡಿದ್ದಾರೆ. ನಿವೃತ್ತಿಯ ನಂತರ, ಅವರನ್ನು 2015 ರಲ್ಲಿ ಕೆಕೆಆರ್ ತಂಡದ ಆಡಳಿತವು ಸಲಹೆಗಾರರನ್ನಾಗಿ ಕರೆತಂದಿತು,  2019 ರವರೆಗೆ ಕೆಕೆಆರ್‌ ತಂಡಕ್ಕೆ ಖಲೀಸ್‌ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು, ನಂತರ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು. ನಂತರ ಚಂದ್ಯಕಾಂತ್‌ ಹಾಗೂ ಮೆಕಲಮ್‌ ಕೂಡ ತಂಡಕ್ಕೆ ಸಲಹೆಗಾರರಾಗಿ ಕೆಲಸ ಮಾಡಿದರು. ಆದರೆ ಇದು ಯಾವುದು ತಂಡಕ್ಕೆ ಸೂಕ್ತವಾಗಿರಲಿಲ್ಲ. ಆದ ಕಾರಣ ಕೆಕೆಆರ್‌ ತಂಡಕ್ಕೆ ಗೌತಮ್‌ ಗಂಭೀರ್‌ ಅವರನ್ನು ಸಲಹೆಗಾರರನ್ನಾಗಿ ಕರೆತರಲಾಗಿತ್ತು. 

ಖಲೀಸ್‌ ಅವರನ್ನು ಸಲಹೆಗಾರರನ್ನಾಗಿ ಕರೆತಂದರೆ, ಕೆಕೆಆರ್ ಭಾರತದ ಆಟಗಾರರು ಮತ್ತು ವಿದೇಶಿ ಆಟಗಾರರನ್ನು ತಂಡದ ಶೈಲಿಯಲ್ಲಿ ಸುಲಭವಾಗಿ ನಿಭಾಯಿಸುತ್ತದೆ. ಅಲ್ಲದೆ, ದಂತಕಥೆ ಖಲೀಸ್‌ ಅವರ ಶಾಂತ ವರ್ತನೆ ಕೆಕೆಆರ್ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News