IPL 2023: ಅಂಪೈರ್ ಜೊತೆ ಮೈದಾನದಲ್ಲೇ ಕಿತ್ತಾಡಿದ ನಿತೀಶ್ ರಾಣಾ! ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ!

Nitish Rana: ನಿತೀಶ್ ರಾಣಾ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ ನಡೆಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಅಂಪೈರ್ ಜೊತೆ ಜಗಳವಾಡಲು ಹೋಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ ನ 19 ನೇ ಓವರ್‌ ನಲ್ಲಿ ನಡೆದ ಗೊಂದಲದಿಂದ ಈ ಘಟನೆ ಎದುರಾಗಿದ್ದು, ನಿತೀಶ್ ರಾಣಾ ಮತ್ತು ಅಂಪೈರ್ ನಡುವೆ ವಾಗ್ವಾದ ನಡೆದಿದೆ.

Written by - Bhavishya Shetty | Last Updated : May 15, 2023, 12:02 PM IST
    • ನಿತೀಶ್ ರಾಣಾ ಅವರು ಬೀಚ್ ಗ್ರೌಂಡ್‌ ನಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.
    • ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
    • ನಿತೀಶ್ ರಾಣಾ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ ನಡೆಸಿದೆ.
IPL 2023: ಅಂಪೈರ್ ಜೊತೆ ಮೈದಾನದಲ್ಲೇ ಕಿತ್ತಾಡಿದ ನಿತೀಶ್ ರಾಣಾ! ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ! title=
Nitish Rana Fight

IPL 2023: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್‌ ಗಳ ಸೋಲು ಅನುಭವಿಸಿದೆ. ಈ ಪಂದ್ಯದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಅವರು ಬೀಚ್ ಗ್ರೌಂಡ್‌ ನಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: Cricket: ಕ್ರಿಕೆಟ್ ಫ್ಯಾನ್ಸ್’ಗೆ ಆಘಾತಕಾರಿ ಸುದ್ದಿ! ಗಾಯದ ಕಾರಣ ಈ ಆಟಗಾರ ತಂಡದಿಂದ ಔಟ್

ನಿತೀಶ್ ರಾಣಾ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ ನಡೆಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಅಂಪೈರ್ ಜೊತೆ ಜಗಳವಾಡಲು ಹೋಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ ನ 19 ನೇ ಓವರ್‌ ನಲ್ಲಿ ನಡೆದ ಗೊಂದಲದಿಂದ ಈ ಘಟನೆ ಎದುರಾಗಿದ್ದು, ನಿತೀಶ್ ರಾಣಾ ಮತ್ತು ಅಂಪೈರ್ ನಡುವೆ ವಾಗ್ವಾದ ನಡೆದಿದೆ.

ನಿತೀಶ್ ರಾಣಾ ವಿರುದ್ಧ ಕ್ರಮ ಕೈಗೊಳ್ಳಲು ಬಿಸಿಸಿಐ ಸಿದ್ಧತೆ!

ಈ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಆಲ್‌ ರೌಂಡರ್ ಶಾರ್ದೂಲ್ ಠಾಕೂರ್ ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ ನ 19 ನೇ ಓವರ್‌ ನಲ್ಲಿ ಬೌಲಿಂಗ್ ಮಾಡಲು ಬಂದರು. ಶಾರ್ದೂಲ್ ಠಾಕೂರ್ ಅವರ ಈ ಓವರ್‌ ನ ಐದನೇ ಎಸೆತವನ್ನು ಅಂಪೈರ್‌ ವೈಡ್ ಎಂದು ಘೋಷಿಸಿದರು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಅವರ ಒಪ್ಪಿಗೆಯಿಲ್ಲದೆ, ಅಂಪೈರ್‌ಈ ವೈಡ್ ಬಾಲ್‌ ನ ನಿರ್ಧಾರವನ್ನು ಥರ್ಡ್ ಅಂಪೈರ್‌ ಗೆ ಸೂಚಿಸಿದಾಗ ಗೊಂದಲಮಯ ವಾತಾವರಣ ನಿರ್ಮಾಣವಾಗಿದೆ.  ನಿತೀಶ್ ರಾಣಾ ಅವರು ವೈಡ್ ಬಾಲ್‌ ಗೆ ಡಿಆರ್‌’ಎಸ್‌  ಬೇಡಿಕೆಯಿಟ್ಟಿರಲಿಲ್ಲ. ಹೀಗಾಗಿ ಅಂಪೈರ್ ನಿತೀಶ್ ಒಪ್ಪಿಗೆಯಿಲ್ಲದೆ ನಿರ್ಧಾರವನ್ನು ಥರ್ಡ್ ಅಂಪೈರ್‌ ಗೆ ಹೇಗೆ ರವಾನಿಸಿದರು ಎಂದು ಹೇಳಿ ಕ್ಯಾತೆ ತೆಗೆದಿದ್ದಾರೆ,

 

ಮೈದಾನದಲ್ಲಿ ಅಂಪೈರ್ ಜೊತೆ ಜಗಳ!

ಇನಿಂಗ್ಸ್‌ ನ 20 ನೇ ಓವರ್‌ ನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ನಿಗದಿತ ಸಮಯಕ್ಕಿಂತ ಒಂದು ಓವರ್‌ ಹಿಂದಿತ್ತು. ಈ ಕಾರಣದಿಂದಾಗಿ, ಕೊನೆಯ ಓವರ್‌ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 30-ಯಾರ್ಡ್ ವೃತ್ತದೊಳಗೆ ಹೆಚ್ಚುವರಿ ಫೀಲ್ಡರ್ ಅನ್ನು ಇರಿಸಬೇಕಾಯಿತು. ಇದರಿಂದ ಕೋಪಗೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ, ಬಳಿಕ ಮಧ್ಯಮ ಮೈದಾನದಲ್ಲಿ ಅಂಪೈರ್ ಮೇಲೆ ಆಕ್ರೋಶ ಹೊರಹಾಕಿದರು. ನಿತೀಶ್ ರಾಣಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Asia Cup 2023: ಏಷ್ಯಾಕಪ್’ಗೂ ಮುನ್ನ ಮಹತ್ವದ ಘೋಷಣೆ: ಮುಖ್ಯ ಕೋಚ್ ಆಗಿ ಈ ಅನುಭವಿ ನೇಮಕ!

ಇದಕ್ಕೂ ಮುನ್ನ ಐಪಿಎಲ್ 2023ರ ಋತುವಿನಲ್ಲಿ ನಿತೀಶ್ ರಾಣಾಗೆ ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಹೃತಿಕ್ ಶೋಕಿನ್ ಅವರೊಂದಿಗೆ ವಾದ ಮಾಡಿದ್ದರು. ಬಿಸಿಸಿಐ ನಿತೀಶ್ ರಾಣಾ ಮತ್ತು ಶೋಕೀನ್ ಇಬ್ಬರಿಗೂ ದಂಡ ವಿಧಿಸಿತ್ತು. ರಿವ್ಯೂ ಕೇಳದಿರುವಾಗ ಥರ್ಡ್ ಅಂಪೈರ್‌  ಗೆ ಡಿಆರ್‌ಎಸ್‌ಗೆ ಏಕೆ ಸಿಗ್ನಲ್ ನೀಡುತ್ತಿದ್ದೀರಿ ಎಂದು ನಿತೀಶ್ ರಾಣಾ ಹೇಳಿದ್ದಾರೆ. ಈ ವಿಚಾರವಾಗಿ ಅಂಪೈರ್ ಮತ್ತು ನಿತೀಶ್ ರಾಣಾ ನಡುವೆ ಸಾಕಷ್ಟು ವಾಗ್ವಾದ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ನಂತರ ಬಿಸಿಸಿಐ ನಿತೀಶ್ ರಾಣಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News