ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್‌ ಸ್ಟಾರ್ಸ್‌..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..?

IND VS ZIM: ಟೀಂ ಇಂಡಿಯಾದ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ಐದು ಟಿ20 ಸರಣಿಳ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಭಾರತೀಯ ಇಶಾನ್‌ ಕಿಶನ್‌ ಅವರಂತಹ ಆಟಗಾರರ ಬದಲಿಗೆ ಐಪಿಎಲ್‌ ನಲ್ಲಿ ಮಿಂಚಿದ್ದ ಈ ಮೂವರು ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಈ ಮೂವರು ಆಟಗಾರರು ನಿರಾಸೆ ಮೂಡಿಸಿದ್ದಾರೆ.  

Written by - Zee Kannada News Desk | Last Updated : Jul 7, 2024, 08:28 AM IST
  • ಟೀಂ ಇಂಡಿಯಾದ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ.
  • ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 0 ಅಂಕಗಳೊಂದಿಗೆ ಡಕ್‌ ಔಟ್‌ ಆಗಿ ಫೀಲ್ಡ್‌ನಿಂದ ಹೊರ ನಡೆದರು.
  • ಬ್ರಿಯಾನ್ ಬೆನೆಟ್ ಎಸೆದ ಮೊದಲ ಓವರ್ ನಲ್ಲಿ ಅಭಿಷೇಕ್ ಶರ್ಮಾ ವೆಲ್ಲಿಂಗ್ಟನ್ ಮಸಕಡ್ಜಗೆ ಕ್ಯಾಚ್ ನೀಡಿ ಫೀಲ್ಡ್‌ನಿಂದ ಹೊರ ನಡೆದರು.
ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್‌ ಸ್ಟಾರ್ಸ್‌..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..? title=

IND VS ZIM: ಟೀಂ ಇಂಡಿಯಾದ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ಐದು ಟಿ20 ಸರಣಿಳ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಭಾರತೀಯ ಇಶಾನ್‌ ಕಿಶನ್‌ ಅವರಂತಹ ಆಟಗಾರರ ಬದಲಿಗೆ ಐಪಿಎಲ್‌ ನಲ್ಲಿ ಮಿಂಚಿದ್ದ ಈ ಮೂವರು ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಈ ಮೂವರು ಆಟಗಾರರು ನಿರಾಸೆ ಮೂಡಿಸಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 0 ಅಂಕಗಳೊಂದಿಗೆ ಡಕ್‌ ಔಟ್‌ ಆಗಿ ಫೀಲ್ಡ್‌ನಿಂದ ಹೊರ ನಡೆದರು. ರಿಯಾನ್ ಪರಾಗ್ 2 ರನ್‌ ಗಳಿಸ ರನ್ ಗಳಿಸಿ ಹಿಂತಿರುಗಿದರೆ, ಧ್ರುವ್ ಜುರೆಲ್ 7 ರನ್‌ ಗಳಿಸುವ ಮೂಲಕ ನಿರಾಸೆ ಮೂಡಿಸಿದರು.

116 ರನ್ ಗಳ ಅಲ್ಪ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾಗೆ ಅಭಿಷೇಕ್ ಶರ್ಮಾ ಡಕ್ ಆಗುವ ಮೂಲಕ ದೊಡ್ಡ ಆಘಾತ ನೀಡಿದರು. ಬ್ರಿಯಾನ್ ಬೆನೆಟ್ ಎಸೆದ ಮೊದಲ ಓವರ್ ನಲ್ಲಿ ಅಭಿಷೇಕ್ ಶರ್ಮಾ ವೆಲ್ಲಿಂಗ್ಟನ್ ಮಸಕಡ್ಜಗೆ ಕ್ಯಾಚ್ ನೀಡಿ ಫೀಲ್ಡ್‌ನಿಂದ ಹೊರ ನಡೆದರು. 

ಇದನ್ನೂ ಓದಿ:  IND VS ZIM Playing XI: ಭಾರತ ತಂಡದಲ್ಲಿ ಮಹತ್ವ ಬದಲಾವಣೆ..? ಎರಡನೇ ಪಂದ್ಯಕ್ಕೆ ರೆಡಿಯಾಯ್ತು ಆಟಗಾರರ ಪಟ್ಟಿ...

ಇನ್ನೂ, ನಂತರ ಕ್ರೀಸ್‌ಗೆ ಎಂಟ್ರಿ ಕೊಟ್ಟ ರುತುರಾಜ್ ಗಾಯಕ್ವಾಡ್ 7 ರನ್‌ ಭಾರಿಸಿ ನಿರಾಸೆ ಮೂಡಿಸಿದರು. ಮುಜರಬಾನಿ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಫೀಲ್ಡ್‌ನಿಂದ ನಿರ್ಗಮಿಸಿದರು. ರಿಯಾನ್ ಪರಾಗ್ ಕ್ರೀಸ್‌ಗೆ ಬಂದಾಗ ಚಟಾರಾ ಎಸೆದ ಐದನೇ ಓವರ್‌ನಲ್ಲಿ ಕ್ಯಾಚಿತ್ತು ಔಟಾದರು. 

ಅದೇ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ 0 ರನ್‌ ಮೂಲಕ ಡಕ್‌ ಔಟ್‌ ಆದರು. ಟೀಂ ಇಂಡಿಯಾ 22 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ,  ಜಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 115 ರನ್ ಗಳಿಸಿತು. ಅಲ್ಪ ಗುರಿಯಾದರೂ ಭಾರತ ತಂಡದ ಯುವಕರು ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಐಪಿಎಲ್‌ ತಂಡದ ಸ್ಟಾರ್‌ ಯುವ ಪ್ರತಿಭೆಗಳ ಮೇಲೆ ಟೀಂ ಇಂಡಿಯಾ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿತ್ತಾದರು. ಮೂವರು ಆಟಗಾರರು ಅಭಿಮಾನಿಗಳ ನರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಇದೇ ಕಾರಣಕ್ಕೆ ಅಭಿಮಾನಿಗಳ ಕೆಂಗಣ್ಣಿಗೆ ಆಟಗಾರರು ಗುರಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News