Ind vs SA: ರೋಹಿತ್ ಶರ್ಮಾ ನಂತರ ಈ ಆಟಗಾರ ಟೀಮ್ ಇಂಡಿಯಾದ ಉಪನಾಯಕನಾಗುವ ಸಾಧ್ಯತೆ!

India vs South Africa: ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ರೋಹಿತ್ ನಂತರ ಉಪನಾಯಕನ ಜವಾಬ್ದಾರಿಯನ್ನು ನೀಡಬಹುದಾದ ಕ್ರಿಕೆಟಿಗರನ್ನು ಹೆಸರಿಸಿದ್ದಾರೆ.

Written by - Yashaswini V | Last Updated : Dec 15, 2021, 01:38 PM IST
  • ಈ ಆಟಗಾರ ಟೀಂ ಇಂಡಿಯಾ ಉಪನಾಯಕನಾಗಬಹುದು
  • ರೋಹಿತ್ ಶರ್ಮಾ ಏಕದಿನ ನಾಯಕನಾಗಿ ನೇಮಕಗೊಂಡಿದ್ದಾರೆ
  • ರವಿಚಂದ್ರನ್ ಅಶ್ವಿನ್ ಕೂಡ ರೇಸ್‌ನಲ್ಲಿದ್ದರು
Ind vs SA: ರೋಹಿತ್ ಶರ್ಮಾ ನಂತರ ಈ ಆಟಗಾರ ಟೀಮ್ ಇಂಡಿಯಾದ ಉಪನಾಯಕನಾಗುವ ಸಾಧ್ಯತೆ! title=
Ajinkya rahane can become the vice-captain of Team India- Former cricketer Akash Chopra

India vs South Africa: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದೆ.  ಆದರೆ ಇದೀಗ ಭಾರತ ತಂಡದ ಮುಂದೆ ದೊಡ್ಡ ಬಿಕ್ಕಟ್ಟು ಉದ್ಭವಿಸಿದೆ. ಬಿರುಸಿನ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬೆರಳಿನ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ದೊಡ್ಡ ಭವಿಷ್ಯ ನುಡಿದಿದ್ದಾರೆ. ಉಪನಾಯಕನಾಗಬಲ್ಲ ಆಟಗಾರರ ಹೆಸರನ್ನು ಅವರು ನೀಡಿದ್ದಾರೆ. 

ರೋಹಿತ್ ಶರ್ಮಾ (Rohit Sharma) ಅವರು ದಕ್ಷಿಣ ಆಫ್ರಿಕಾ ಸರಣಿಗಾಗಿ ಮುಂಬೈನಲ್ಲಿ ಅನೇಕ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ನೆಟ್ಸ್ ನಲ್ಲಿ ಚೆಂಡು ರೋಹಿತ್ ಬೆರಳಿಗೆ ಬಡಿಯಿತು. ವರದಿಯ ಪ್ರಕಾರ, ಥ್ರೋ-ಡೌನ್ ಸಮಯದಲ್ಲಿ, ಚೆಂಡು ನೇರವಾಗಿ ರೋಹಿತ್ ಶರ್ಮಾ ಅವರ ಕೈಗವಸುಗಳಿಗೆ ಹೋಯಿತು, ನಂತರ ಅವರು ನೋವಿನಿಂದ ನರಳುತ್ತಿರುವುದು ಕಂಡುಬಂದಿತು. ಇತ್ತೀಚೆಗೆ ಈ ಸ್ಟಾರ್ ಆಟಗಾರ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಘೋಷಿಸಲಾಯಿತು.

ಇದನ್ನೂ ಓದಿ- ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ Virat Kohli, ಮೂರನೇ ಕ್ರಮಾಂಕದಲ್ಲಿ ಆಡಲಿರುವ ಆಟಗಾರ ಇವರು

ಈ ಆಟಗಾರ ಉಪನಾಯಕನಾಗಬಹುದು :
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, 'ಅಜಿಂಕ್ಯ ರಹಾನೆ (Ajinkya Rahane) ಅವರನ್ನು ಉಪನಾಯಕರನ್ನಾಗಿ ಮಾಡಲಾಗುತ್ತದೆಯೇ? ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಅದೇ ಸಮಯದಲ್ಲಿ, ಎರಡನೇ ಟೆಸ್ಟ್‌ನಲ್ಲಿ, ಅವರನ್ನು ಪ್ಲೇಯಿಂಗ್ XI ನಿಂದ ಹೊರಗಿಡಲಾಯಿತು, ಆದ್ದರಿಂದ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅವರನ್ನು ಉಪನಾಯಕರನ್ನಾಗಿ ಮಾಡಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಉಪನಾಯಕನನ್ನು ಘೋಷಿಸದಿರಬಹುದು :
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತವು ಉಪನಾಯಕನನ್ನು ಘೋಷಿಸದಿರಬಹುದು, ಏಕೆಂದರೆ ಅಜಿಂಕ್ಯ ರಹಾನೆಯನ್ನು ಒಂದು ಪಂದ್ಯಕ್ಕೆ ಉಪನಾಯಕನನ್ನಾಗಿ ಮಾಡಬಾರದು ಮತ್ತು ಎರಡನೇ ಪಂದ್ಯದಲ್ಲಿ ತಂಡದಿಂದ ಹೊರಬರುವ ಮಾರ್ಗವನ್ನು ತೋರಿಸಲಾಗುತ್ತದೆ ಎಂದು ಹೇಳಿದರು. ಮತ್ತೊಂದೆಡೆ, ಭಾರತವು ರವಿಚಂದ್ರನ್ ಅಶ್ವಿನ್ ಅಥವಾ ಜಸ್ಪ್ರೀತ್ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಬಹುದು ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ-  ಆಟಕ್ಕಿಂತ ದೊಡ್ಡದು ಯಾವುದೂ ಇಲ್ಲ, ರೋಹಿತ್ ಶರ್ಮಾ ಮನಸ್ಥಾಪದ ಬಗ್ಗೆ ಕೊಹ್ಲಿಗೆ ಸಿಕ್ಕ ಎಚ್ಚರಿಕೆ

ಮಹತ್ವದ ನಿರ್ಧಾರ ಕೈಗೊಂಡಿರುವ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಬದಲಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿದೆ. ರೋಹಿತ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದಾರೆ, ಅವರ ನಾಯಕತ್ವದಲ್ಲಿ ಮುಂಬೈ ತಂಡ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಅದೇ ಸಮಯದಲ್ಲಿ, ಅವರು ಟೀಮ್ ಇಂಡಿಯಾಗೆ 10 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ, ಅದರಲ್ಲಿ ಅವರು 8 ಪಂದ್ಯಗಳಲ್ಲಿ ಗೆದ್ದಿದ್ದಾರೆ ಮತ್ತು ಎರಡು ಪಂದ್ಯಗಳಲ್ಲಿ ಸೋತಿದ್ದಾರೆ. ಈ ಮೂಲಕ ಅವರು ಉತ್ತಮ ನಾಯಕನಾಗಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News