ಭಾರತ-ಪಾಕ್ ಏಷ್ಯಾಕಪ್ ಪಂದ್ಯಕ್ಕೆ ಮಳೆ ಅಡ್ಡಿ! ರದ್ದಾಗುತ್ತಾ ಹೈವೋಲ್ಟೇಜ್ ಪಂದ್ಯ?

Pallekele Weather Report: ಪಲ್ಲೆಕೆಲೆಯ ಹವಾಮಾನ ವರದಿಯನ್ನು ನೋಡುವುದಾದರೆ, ಮಳೆಯ ಸಾಧ್ಯತೆಗಳು ಇದ್ದಕ್ಕಿದ್ದಂತೆ ಗಣನೀಯವಾಗಿ ಕಡಿಮೆಯಾಗಿದೆ. ನಾಲ್ಕು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಏಕದಿನ ಪಂದ್ಯಕ್ಕೆ ಸಿದ್ಧವಾಗಿವೆ.

Written by - Bhavishya Shetty | Last Updated : Sep 2, 2023, 11:50 AM IST
    • ಭಾರತ ಮತ್ತು ಪಾಕಿಸ್ತಾನ ಪಂದ್ಯದ ದಿನ ಪಲ್ಲೆಕೆಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!
    • ಈ ಮಧ್ಯೆ ಅಭಿಮಾನಿಗಳಿಗಾಗಿ ಹೊಸ ಹವಾಮಾನ ಅಪ್ಡೇಟ್ ಹೊರಬಂದಿದೆ
    • ಟಾಸ್ ಸಮಯದಲ್ಲಿ ಮಳೆಯ ಸಾಧ್ಯತೆ 65% ಕಡಿಮೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖ
ಭಾರತ-ಪಾಕ್ ಏಷ್ಯಾಕಪ್ ಪಂದ್ಯಕ್ಕೆ ಮಳೆ ಅಡ್ಡಿ! ರದ್ದಾಗುತ್ತಾ ಹೈವೋಲ್ಟೇಜ್ ಪಂದ್ಯ?  title=
India vs Pakistan

Pallekele Internatioan Cricket Stadium weather Update: ಏಷ್ಯಾಕಪ್‌’ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಅಮೋಘ ಪಂದ್ಯ ನಡೆಯಲಿದೆ. ಉಭಯ ತಂಡಗಳು ಈ ಪಂದ್ಯಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಇತ್ತೀಚೆಗಷ್ಟೇ ಭಾರತ ಮತ್ತು ಪಾಕಿಸ್ತಾನ ಪಂದ್ಯದ ದಿನ ಪಲ್ಲೆಕೆಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿತ್ತು. ಇದು ಪಂದ್ಯದ ಮೇಲೂ ಪರಿಣಾಮ ಬೀರಬಹುದು. ಈ ಮಧ್ಯೆ ಅಭಿಮಾನಿಗಳಿಗಾಗಿ ಹೊಸ ಹವಾಮಾನ ಅಪ್ಡೇಟ್ ಹೊರಬಂದಿದ್ದು, ಸಂತಸ ನೀಡಲಿದೆ.

ಇದನ್ನೂ ಓದಿ:  ಕ್ರಿಕೆಟ್ ಇತಿಹಾಸದಲ್ಲೇ ಮೊದಲು… ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ಮಂಗಳಮುಖಿ

ಪಲ್ಲೆಕೆಲೆಯ ಹವಾಮಾನ ವರದಿಯನ್ನು ನೋಡುವುದಾದರೆ, ಮಳೆಯ ಸಾಧ್ಯತೆಗಳು ಇದ್ದಕ್ಕಿದ್ದಂತೆ ಗಣನೀಯವಾಗಿ ಕಡಿಮೆಯಾಗಿದೆ. ನಾಲ್ಕು ವರ್ಷಗಳ ನಂತರ ಭಾರತ ಮತ್ತು ಪಾಕಿಸ್ತಾನ ಏಕದಿನ ಪಂದ್ಯಕ್ಕೆ ಸಿದ್ಧವಾಗಿವೆ. ಈ ಪಂದ್ಯವನ್ನು ನೋಡಲೆಂದು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ.

ಪಾಕಿಸ್ತಾನವು ಮುಲ್ತಾನ್‌’ನಲ್ಲಿ ನೇಪಾಳವನ್ನು 238 ರನ್‌’ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸಿತು, ಆದರೆ ತಮ್ಮ ಎರಡನೇ ಮತ್ತು ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಪ್ರಬಲ ಭಾರತೀಯ ತಂಡವನ್ನು ಎದುರಿಸಲಿದೆ.

ಮಳೆಯು ಆಟಕ್ಕೆ ಅಡ್ಡಿಯಾಗಬಹುದೇ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ. ಆದರೆ, ಗೂಗಲ್ ಹವಾಮಾನದ ಪ್ರಕಾರ, ಟಾಸ್ ಸಮಯದಲ್ಲಿ ಮಳೆಯ ಸಾಧ್ಯತೆ 65% ಕಡಿಮೆಯಾಗಲಿದೆ. ಜೊತೆಗೆ ಪಂದ್ಯದ ಮೊದಲ ಇನ್ನಿಂಗ್ಸ್‌’ನಲ್ಲಿ ಸುಮಾರು 20% ರಿಂದ 23% ಇಳಿಕೆಯಾಗಲಿದೆ. ಪಂದ್ಯ ಮುಗಿಯುವ ವೇಳೆಗೆ ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಡಿಎಲ್‌ಎಸ್ ನಿಯಮಗಳ ಪ್ರಕಾರ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಪ್ಲೇಯಿಂಗ್ 11: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಸಲ್ಮಾನ್ ಅಲಿ ಆಗಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ನವಾಜ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಹ್ಯಾರಿಸ್ ರವೂಫ್.

ಇದನ್ನೂ ಓದಿ:  ಇಲ್ಲಿಯವರೆಗೆ ಪಾಕಿಸ್ತಾನವನ್ನು ಭಾರತ ಕ್ರಿಕೆಟ್ ನಲ್ಲಿ ಎಷ್ಟು ಬಾರಿ ಮಣಿಸಿದೆ ಗೊತ್ತಾ ? 

ಏಷ್ಯಾಕಪ್‌’ಗೆ ಟೀಂ ಇಂಡಿಯಾ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News