/kannada/photo-gallery/after-90-years-special-yoga-on-rakshabandhan-day-lucky-zodiac-sign-232334 90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆ 90 ವರ್ಷಗಳ ನಂತರ ರಕ್ಷಾ ಬಂಧನದ ದಿನ ಈ ರಾಶಿಯಲ್ಲಿ ಅಪರೂಪದ ರಾಜಯೋಗ! ಕೈಯ್ಯಲ್ಲಿ ನಲಿದಾಡುವಳು ಧನಲಕ್ಷ್ಮೀ !ಹರಿದು ಬರುವುದು ಸಂಪತ್ತಿನ ಸುಧೆ 232334

Virat Kohli vs Gautham Gambir: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿಗಾಗಿ ದೀರ್ಘಕಾಲ ಆಡಿದ ಏಕೈಕ ಆಟಗಾರ. ಅವರು ತಮ್ಮ ಐಪಿಎಲ್‌ ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಪ್ರಾರಂಭಿಸಿದ್ದು,   ಈಗಲೂ ಅದೇ ತಂಡದಲ್ಲಿದ್ದಾರೆ. ಐಪಿಎಲ್ 2011ರಿಂದ ಈಗಿನ ವರೆಗೂ ಮೆಗಾ ಹರಾಜಿನಲ್ಲಿ  ಆರ್‌ಸಿಬಿ ಉಳಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ ಮಾತ್ರ.

2013ರಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ 2021ರವರೆಗೆ ನಾಯಕರಾಗಿ ಮುಂದುವರಿದಿದ್ದಾರೆ. ಆರ್‌ಸಿಬಿ ತಂಡ ಕೊಹ್ಲಿ ಅವರ ನಾಯಕತ್ವದಲ್ಲಿ ಕೇವಲ ಒಂದೇ ಒಂದು ಬಾರಿ ಮಾತ್ರ ಫೈನಲ್ ತಲುಪಿದ್ದು, ಈವರೆಗೂ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಐಪಿಎಲ್ 2016 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅಲ್ಪ ಅಂತರದಲ್ಲಿ ಪ್ರಶಸ್ತಿಯನ್ನು ಕಳೆದುಕೊಂಡಿತು.

ಇದನ್ನೂ ಓದಿ: IND vs ZIM: ಜಿಂಬಾಬ್ವೆ ವಿರುದ್ಧ ಐದನೇ ಟಿ20 ಆಡಲಿರುವ ಅಂತಿಮ ಪ್ಲೇಯಿಂಗ್‌ XI

ಐಪಿಎಲ್ 2020 ಸೀಸನ್‌ನಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾ ಗಂಭೀರ್ ಕಟುವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆರ್‌ಸಿಬಿ ನಾಯಕತ್ವದ ಜವಾಬ್ದಾರಿಯಿಂದ ಕೊಹ್ಲಿಯನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದ್ದಾರೆ. ಈ ಕಾಮೆಂಟ್‌ಗಳು ಇಷ್ಟು ದಿನ ಸೈಲೆಂಟ್‌ ಆಗಿದ್ದು, ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗುತ್ತಿದ್ದಂತೆ ಮತ್ತೆ ಚರ್ಚೆಗೆ ಎಡೆಮಾಡಿ ಕೊಟ್ಟಿವೆ.

8 ವರ್ಷದ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಒಂದು ಭಾರಿಯೂ ಪ್ರಶಸ್ತಿ ಗೆದ್ದಿಲ್ಲ. ಬೇರೆ ಯಾವ ನಾಯಕನಿಗೆ ಇಷ್ಟು ಸಮಯ ಸಿಕ್ಕಿದೆ? ಕನಿಷ್ಠ ಯಾವ ಆಟಗಾರನಿಗೆ ಅಂತಹ ಅವಕಾಶ ಸಿಕ್ಕಿದೆ? ಹಾಗಾಗಿ ಈ ವೈಫಲ್ಯಕ್ಕೆ ವಿರಾಟ್ ಕೊಹ್ಲಿಯೇ ಹೊಣೆಯಾಗಬೇಕು. ನಾನು ಕೇವಲ ಈ ಒಂದು ವರ್ಷದ ಬಗ್ಗೆ ಮಾತನಾಡುತ್ತಿಲ್ಲ,  8 ವರ್ಷಗಳ ಈ ಸುದೀರ್ಘ ಸಮಯದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ವಿರಾಟ್ ಕೊಹ್ಲಿ ವಿರುದ್ಧ ಅಲ್ಲ. ಆದರೆ ಆರ್‌ಸಿಬಿ ಸೋಲಿಗೆ ನಾನೇ ಹೊಣೆ ಎಂದು ನಾಯಕತ್ವದಿಂದ ಕೆಳಗಿಳಿಯಬೇಕು' ಎಂದು ಗಂಭೀರ್ ಹೇಳಿದ್ದಾರೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಸ್ಥಾನದಿಂದ ರಿಕಿ ಪಾಂಟಿಂಗ್‌ ಹೊರಬೀಳಲು ಕಾರಣ ಸೌರವ್‌ ಗಂಗೂಲಿಯ ಅದೊಂದು ಹೇಳಿಕೆ..!

ಮುಂದಿನ ವರ್ಷವೇ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿದರು. ಆ ಬಳಿಕ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆಡಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡ ಬೆನ್ನಲ್ಲೇ, ಕೊಹ್ಲಿ ಬಗ್ಗೆ ಅವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಗಂಭೀರ್ ಕೋಚ್ ಆಗಿ ಕೊಹ್ಲಿ ಆಟದಲ್ಲಿ ಉಳಿಯುತ್ತಾರಾ? ಅಥವಾ ಮಧ್ಯದಲ್ಲಿ ವಿದಾಯ ಹೇಳುತ್ತಾರ? ಎನ್ನುವ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Section: 
English Title: 
Gautam Gambhir Criticizes Virat Kohli Sparks Debate Over RCB's IPL Leadership
News Source: 
Home Title: 

ಕೊಹ್ಲಿ ವಿರುದ್ದ ಗೌತಮ್‌ ಗಂಭೀರ್‌ ಟೀಕೆ..! ಕಿಂಗ್‌ ಇವರ ಟಾರ್ಗೆಟ್‌ ಆಗಿದ್ದು ಏಕೆ..?

ಕೊಹ್ಲಿ ವಿರುದ್ದ ಗೌತಮ್‌ ಗಂಭೀರ್‌ ಟೀಕೆ..! ಕಿಂಗ್‌ ಇವರ ಟಾರ್ಗೆಟ್‌ ಆಗಿದ್ದು ಏಕೆ..?
Yes
Is Blog?: 
No
Tags: 
Facebook Instant Article: 
Yes
Highlights: 

ಐಪಿಎಲ್ 2020 ಸೀಸನ್‌ನಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡುತ್ತಾ ಗಂಭೀರ್ ಕಟುವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಆರ್‌ಸಿಬಿ ನಾಯಕತ್ವದ ಜವಾಬ್ದಾರಿಯಿಂದ ಕೊಹ್ಲಿಯನ್ನು ತೆಗೆದುಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ನಾನು ವಿರಾಟ್ ಕೊಹ್ಲಿ ವಿರುದ್ಧ ಅಲ್ಲ. ಆದರೆ ಆರ್‌ಸಿಬಿ ಸೋಲಿಗೆ ನಾನೇ ಹೊಣೆ ಎಂದು ನಾಯಕತ್ವದಿಂದ ಕೆಳಗಿಳಿಯಬೇಕು' ಎಂದು ಗಂಭೀರ್ ಹೇಳಿದ್ದಾರೆ.

 

Mobile Title: 
ಕೊಹ್ಲಿ ವಿರುದ್ದ ಗೌತಮ್‌ ಗಂಭೀರ್‌ ಟೀಕೆ..! ಕಿಂಗ್‌ ಇವರ ಟಾರ್ಗೆಟ್‌ ಆಗಿದ್ದು ಏಕೆ..?
Zee Kannada News Desk
Publish Later: 
No
Publish At: 
Sunday, July 14, 2024 - 12:31
Created By: 
Deepa A
Updated By: 
Deepa A
Published By: 
Deepa A
Request Count: 
1
Is Breaking News: 
No
Word Count: 
293