Dhanteras 2023: ಧನ ತ್ರಯೋದಶಿಯಲ್ಲಿ ಚಿನ್ನ-ಬೆಳ್ಳಿ ಸೇರಿ ಏನು ಖರೀದಿಸುವುದು ಶುಭಕರ?  

cಯಲ್ಲಿ ಏನು ಖರೀದಿಸಬೇಕು?: ಧನ ತ್ರಯೋದಶಿ ಶಾಪಿಂಗ್‌ಗೆ ಅತ್ಯಂತ ಮಂಗಳಕರ ದಿನವಾಗಿದೆ. ಚಿನ್ನ ಮತ್ತು ಬೆಳ್ಳಿಯ ಹೊರತಾಗಿ ಇತರ ಕೆಲವು ವಸ್ತುಗಳನ್ನು ಖರೀದಿಸುವುದು ಕೂಡ ಧಂತೇರಸ್‌ನಲ್ಲಿ ಬಹಳ ಮಂಗಳಕರವಾಗಿದೆ.

Written by - Puttaraj K Alur | Last Updated : Nov 5, 2023, 06:15 PM IST
  • ಧನ ತ್ರಯೋದಶಿ ದಿನದಂದು ಪೊರಕೆ ಕೊಳ್ಳುವುದು ತುಂಬಾ ಮಂಗಳಕರವೆಂದು ನಂಬಲಾಗಿದೆ
  • ಧನ ತ್ರಯೋದಶಿ ದಿನದಂದು ಕೊತ್ತಂಬರಿ ಬೀಜಗಳನ್ನು ಖರೀದಿಸುವುದು ಸಹ ಮಂಗಳಕರ
  • ಧನ ತ್ರಯೋದಶಿ ದಿನದಂದು ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸುವುದು ತುಂಬಾ ಮಂಗಳಕರ
Dhanteras 2023: ಧನ ತ್ರಯೋದಶಿಯಲ್ಲಿ ಚಿನ್ನ-ಬೆಳ್ಳಿ ಸೇರಿ ಏನು ಖರೀದಿಸುವುದು ಶುಭಕರ?   title=
ಧನ ತ್ರಯೋದಶಿಯಲ್ಲಿ ಏನು ಖರೀದಿಸಬೇಕು?

ಧನ ತ್ರಯೋದಶಿಯಲ್ಲಿ ಏನು ಖರೀದಿಸಬೇಕು?: ದೀಪಗಳ ಹಬ್ಬ ಧನ ತ್ರಯೋದಶಿ(Dhanteras) ಯೊಂದಿಗೆ ಪ್ರಾರಂಭವಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ ತ್ರಯೋದಶಿ ಆಚರಿಸಲಾಗುತ್ತದೆ. ಈ ವರ್ಷ ಧನ ತ್ರಯೋದಶಿಅನ್ನು ನವೆಂಬರ್ 10ರ ಶುಕ್ರವಾರ ಆಚರಿಸಲಾಗುತ್ತದೆ. ಧನ ತ್ರಯೋದಶಿ ದಿನವು ಶಾಪಿಂಗ್ ಮಾಡಲು ಬಹಳ ಮಂಗಳಕರವಾಗಿದೆ. ಧನ ತ್ರಯೋದಶಿಯಲ್ಲಿ ಖರೀದಿಸಿದ ವಸ್ತುಗಳು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ. ಅಲ್ಲದೆ ದೀರ್ಘಕಾಲ ಬಾಳಿಕೆ ಬರುತ್ತದೆ.

ಸಾಮಾನ್ಯವಾಗಿ ಜನರು ಧನ ತ್ರಯೋದಶಿ ದಿನದಂದು ಚಿನ್ನ, ಬೆಳ್ಳಿ, ಪಾತ್ರೆಗಳು ಮತ್ತು ಕಾರುಗಳಂತಹ ದುಬಾರಿ ವಸ್ತುಗಳನ್ನು ಮಾತ್ರ ಖರೀದಿಸುತ್ತಾರೆ. ಇದರ ಹೊರತಾಗಿ ಅನೇಕ ಅಗ್ಗದ ವಸ್ತುಗಳನ್ನು ಸಹ ನೀವು ಖರೀದಿಸಬಹುದು. ಇವುಗಳನ್ನು ಧನ ತ್ರಯೋದಶಿ ದಿನದಂದು ಖರೀದಿಸುವುದು ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.

ಧನ ತ್ರಯೋದಶಿಯಲ್ಲಿ ಈ ವಸ್ತುಗಳನ್ನು ಖರೀದಿಸಿ

ಧನ ತ್ರಯೋದಶಿ ದಿನದಂದು ಪೊರಕೆ ಕೊಳ್ಳುವುದು ತುಂಬಾ ಮಂಗಳಕರ. ಪೊರಕೆಯು ತಾಯಿ ಲಕ್ಷ್ಮಿದೇವಿಗೆ ಸಂಬಂಧಿಸಿದೆ. ಧನ ತ್ರಯೋದಶಿ ದಿನದಂದು ಪೊರಕೆಯನ್ನು ಖರೀದಿಸಿ ಕುಂಕುಮ, ಅಕ್ಷತೆ ಮತ್ತು ಹೂವುಗಳಿಂದ ಪೂಜಿಸಿದ್ರೆ ತಾಯಿ ಲಕ್ಷ್ಮಿದೇವಿ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಯಾವತ್ತೂ ಹಣದ ಕೊರತೆಯಿರಲ್ಲ.

ಇದನ್ನೂ ಓದಿ: ಬೋಳು ತಲೆ-ಬಿಳಿ ಕೂದಲು ಸಮಸ್ಯೆಗಳಿಗೆ ರಾಮಬಾಣ ಈ ಆಯುರ್ವೇದ ಚಹಾ, ತಯಾರಿಸುವ ವಿಧಾನ ಇಲ್ಲಿದೆ!

ಧನ ತ್ರಯೋದಶಿ ದಿನದಂದು ಕೊತ್ತಂಬರಿ ಬೀಜಗಳನ್ನು ಖರೀದಿಸುವುದು ತುಂಬಾ ಮಂಗಳಕರ. ತಾಯಿ ಲಕ್ಷ್ಮಿದೇವಿಗೆ ಪೂಜೆ ಸಲ್ಲಿಸಿ ಕೊತ್ತಂಬರಿ ಸೊಪ್ಪನ್ನು ಅರ್ಪಿಸುವುದು ಉತ್ತಮ. ಪೂಜೆಯ ನಂತರ ಈ ಬೀಜಗಳನ್ನು ಒಂದು ಪಾತ್ರೆಯಲ್ಲಿ ನೆಡಬೇಕು. ಹೀಗೆ ಮಾಡುವುದರಿಂದ ವ್ಯಾಪಾರವು ವೇಗವಾಗಿ ಬೆಳೆಯುತ್ತದೆ.

ಧನ ತ್ರಯೋದಶಿ ದಿನದಂದು ಪಾತ್ರೆಗಳನ್ನು ಖರೀದಿಸುವುದು ತುಂಬಾ ಮಂಗಳಕರ. ಧನ ತ್ರಯೋದಶಿ ದಿನದಂದು ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸುವುದು ತುಂಬಾ ಮಂಗಳಕರ. ಇದಲ್ಲದೆ ನೀವು ತಾಮ್ರದ ಪಾತ್ರೆಗಳನ್ನು ಸಹ ಖರೀದಿಸಬಹುದು ಆದರೆ ಸ್ಟೀಲ್, ಪ್ಲಾಸ್ಟಿಕ್ ಅಥವಾ ಗಾಜಿನ ಪಾತ್ರೆಗಳನ್ನು ಖರೀದಿಸಬೇಡಿ. ಇವು ಶನಿ ಮತ್ತು ರಾಹುವಿಗೆ ಸಂಬಂಧಿಸಿವೆ. ಧನ್ತೇರಸ್ ದಿನದಂದು ಈ ಅಶುಭ ವಸ್ತುಗಳನ್ನು ಖರೀದಿಸುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ.

ಧನ ತ್ರಯೋದಶಿಯಲ್ಲಿ ಪಾತ್ರೆಗಳನ್ನು ಏಕೆ ಖರೀದಿಸಬೇಕು?

ಧನ ತ್ರಯೋದಶಿಯಲ್ಲಿ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಪಾತ್ರೆಗಳನ್ನು ಖರೀದಿಸುವುದರಿಂದ ತಾಯಿ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ ಕಾರ್ತಿಕ ಕೃಷ್ಣ ಪಕ್ಷದ ತ್ರಯೋದಶಿಯಂದು, ಭಗವಾನ್ ಧನ್ವಂತರಿಯು ಸಮುದ್ರ ಮಂಥನದ ಸಮಯದಲ್ಲಿ ಸಂಪತ್ತು ತುಂಬಿದ ಕಲಶದೊಂದಿಗೆ ಕಾಣಿಸಿಕೊಂಡನು. ಭಗವಾನ್ ಧನ್ವಂತರಿಯ ಕೈಯಲ್ಲಿ ಹಿತ್ತಾಳೆಯ ಪಾತ್ರೆ ಇತ್ತು, ಆದ್ದರಿಂದ ಈ ದಿನ ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯವಿದೆ.

ಇದನ್ನೂ ಓದಿ: ಹನಿ ಹೇರ್ ಮಾಸ್ಕ್.. ಬಿಳಿ ಕೂದಲಿಗೆ ಶಾಶ್ವತ ಪರಿಹಾರ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News