ಕನೇರಿ ಹೂವಿನ ಈ ಉಪಾಯ ಅನುಸರಿಸಿದರೆ, ಹಣದ ಸುರಿಮಳೆ ಗ್ಯಾರಂಟಿ!

Vastu Remedy Related To Kaneri Flower: ಜ್ಯೋತಿಷ್ಯ ಶಾಸ್ತ್ರದಂತೆ, ವಾಸ್ತು ಶಾಸ್ತ್ರದಲ್ಲಿಯೂ ಕೂಡ ಕನೆರ್ ಸಸ್ಯವನ್ನು ಅತ್ಯಂತ ಮಂಗಳಕರ ಸಸ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಅದರ ಹೂವನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅದನ್ನು ಹೇಗೆ ಬಳಸಬೇಕು ಎಂಬುದು ತುಳಿಯುವುದು ತುಂಬಾ ಮುಖ್ಯವಾಗುತ್ತದೆ.(Spiritual News In Kannada)   

Written by - Nitin Tabib | Last Updated : Oct 4, 2023, 01:06 PM IST
  • ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಕಣೇರ್ ಹೂವಿನ ಮಾಲೆ ತುಂಬಾ ಪ್ರಿಯ.
  • ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಕನೆರ್ ಹೂವುಗಳನ್ನು ಅರ್ಪಿಸುವುದರಿಂದ ಅವಳು ತುಂಬಾ ಪ್ರಸನ್ನಳಾಗುತ್ತಾಳೆ ಎಂದು ಹಿಂದೂ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
  • ಇದಲ್ಲದೇ ವಿಷ್ಣುವಿಗೂ ಕೂಡ ಕನೇರಿ ಹೂ ಎಂದರೆ ತುಂಬಾ ಇಷ್ಟ.
  • ವಿಷ್ಣುವಿಗೆಈ ಹೂವನ್ನು ಅರ್ಪಿಸುವುದರಿಂದ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಇದರೊಂದಿಗೆ ಸಂಪತ್ತು, ಧನ-ಧಾನ್ಯ ಪ್ರಾಪ್ತಿಯಾಗುತ್ತದೆ.
ಕನೇರಿ ಹೂವಿನ ಈ ಉಪಾಯ ಅನುಸರಿಸಿದರೆ, ಹಣದ ಸುರಿಮಳೆ ಗ್ಯಾರಂಟಿ! title=

ಬೆಂಗಳೂರು: ಹಿಂದೂ ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಹಲವಾರು ಸಸ್ಯಗಳಿವೆ. ವ್ಯಕ್ತಿಯ ಜಾತಕ ದೋಷಗಳನ್ನು ಮತ್ತು ವಾಸ್ತು ದೋಷಗಳನ್ನು ತೆಗೆದುಹಾಕಲು ಸಹಾಯ ಮಾಡುವ ಹಲವಾರು ಸಸ್ಯಗಳಿವೆ. ಈ ಗಿಡಗಳಲ್ಲಿ ಕನೇರಿ ಗಿಡ ಕೂಡ ಒಂದು, ಇದನ್ನು ಸನಾತನ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಕನೆರ್ ಹೂವನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಪ್ರಸನ್ನಳಾಗಿ, ಆಶೀರ್ವಾದವನ್ನೂ ನೀಡುತ್ತಾಳೆ ಎನ್ನಲಾಗುತ್ತದೆ. ನೋಟದಲ್ಲಿ ಈ ಹೂವು ಜನರನ್ನು ಸಾಕಷ್ಟು ಆಕರ್ಷಿಸುತಡೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನೇರ್ ಗಿಡವನ್ನು ನೆಡುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ(Vastu Tips In Kannada).

ಕನೇರ್ ಗಿಡವನ್ನು ತೋಟದಲ್ಲಿ ನೆಡಬಹುದು. ಆದರೆ ನೀವು ನಿಮ್ಮ ಮನೆಯ ಅಂಗಳದಲ್ಲಿ ಕನೇರ್ ಗಿಡವನ್ನು ನೆಡಲು ಬಯಸಿದರೆ, ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮಾತ್ರ ನೀವು ಅದರ ಸರಿಯಾದ ಪ್ರಯೋಜನಗಳನ್ನು ಪಡೆಯುವಿರಿ. ಕೇನರ್ ಸಸ್ಯವನ್ನು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿ ನೆಡಲಾಗುತ್ತದೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ವಾಸ್ತು ದೋಷವಿದ್ದಲ್ಲಿ ಪ್ರತಿ ದಿನ ಕನೇರ್ ಗಿಡಕ್ಕೆ ನೀರು ಹಾಕಬೇಕು ಎಂಬ ಪ್ರತೀತಿ ಇದೆ. ಹೀಗೆ ಮಾಡುವುದರಿಂದ ವಾಸ್ತುದೋಷ ಅಥವಾ ಮಂಗಳದೋಷದಿಂದ ಮುಕ್ತಿ ಪಡೆಯಬಹುದು. ಕೇನರ್ ಗಿಡದ ಇತರ ಪರಿಹಾರಗಳು ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋನ ಬನ್ನಿ, 

ಶತ್ರುಗಳ ನಾಶಕ್ಕೆ ಈ ಉಪಾಯ ಮಾಡಿ 
ಕನೇರ್ ಸಸ್ಯದ ಈ ಪರಿಹಾರಕ್ಕಾಗಿ, ಗುರುವಾರ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಕೆಂಪು ಬಣ್ಣದ ಕನೇರ್ ಕೊಂಬೆಯನ್ನು ತೆಗೆದುಕೊಂಡು ಅದನ್ನು ಏಳು ತುಂಡುಗಳಾಗಿ ಕತ್ತರಿಸಿ ಕರ್ಪೂರದಿಂದ ಸುಡಬೇಕು. ಇದನ್ನು ಮಾಡುವುದರಿಂದ ವ್ಯಕ್ತಿಯ ಎಲ್ಲಾ ಶತ್ರುಗಳು ನಾಶವಾಗುತ್ತಾರೆ.

ಇದನ್ನೂ ಓದಿ-Shukra Gochar In Leo: ಇಂದಿನಿಂದ 32 ದಿನಗಳ ಕಾಲ ಈ ರಾಶಿಗಳ ಜನರ ಸುವರ್ಣಕಾಲ ಆರಂಭ, ಶುಕ್ರದೆಸೆಯಿಂದ ಭಾರಿ ಧನವೃಷ್ಟಿ!

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ಕ್ರಮ ಅನುಸರಿಸಿ
ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಕಣೇರ್ ಹೂವಿನ ಮಾಲೆ ತುಂಬಾ ಪ್ರಿಯ. ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಗೆ ಕನೆರ್ ಹೂವುಗಳನ್ನು ಅರ್ಪಿಸುವುದರಿಂದ ಅವಳು ತುಂಬಾ ಪ್ರಸನ್ನಳಾಗುತ್ತಾಳೆ ಎಂದು ಹಿಂದೂ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ ವಿಷ್ಣುವಿಗೂ ಕೂಡ ಕನೇರಿ ಹೂ ಎಂದರೆ ತುಂಬಾ ಇಷ್ಟ. ಅವರಿಗೆ ಈ ಹೂವನ್ನು ಅರ್ಪಿಸುವುದರಿಂದ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ಇದರೊಂದಿಗೆ ಸಂಪತ್ತು, ಧನ-ಧಾನ್ಯ ಪ್ರಾಪ್ತಿಯಾಗುತ್ತದೆ. 

ಇದನ್ನೂ ಓದಿ-October ತಿಂಗಳು ವಿಶೇಷವಾಗಿರಲಿದೆ, ಸೂರ್ಯ-ಚಂದ್ರಗ್ರಹಣಗಳು 3 ರಾಶಿಗಳ ಜನರ ಭಾಗ್ಯವನ್ನೇ ತೆರೆಯಲಿವೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News