Dina Bhavishya: ಇಂದು ಈ ಜನ್ಮರಾಶಿಗಳಿಗೆ ಭಾಗ್ಯೋದಯ.. ಕಷ್ಟ ಕಳೆದು ಸುಖ ಬರುವ ಸಮಯ!

Today Horoscope 26 May 2024 : ಶನಿವಾರ ಜೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ. ಈ ದಿನ ಸಂಕಷ್ಟಿ ಚತುರ್ಥಿ ಉಪವಾಸವನ್ನು ಸಹ ಆಚರಿಸಲಾಗುತ್ತದೆ.

Written by - Chetana Devarmani | Last Updated : May 26, 2024, 07:04 AM IST
  • ಇಂದು ಸಂಕಷ್ಟಿ ಚತುರ್ಥಿ ಉಪವಾಸ
  • ಈ ದಿನ ಕೆಲವರಿಗೆ ಕಷ್ಟದ ಪರಿಸ್ಥಿತಿ
  • ದ್ವಾದಶ ರಾಶಿಗಳ ದಿನ ಭವಿಷ್ಯ ಹೀಗಿದೆ
Dina Bhavishya: ಇಂದು ಈ ಜನ್ಮರಾಶಿಗಳಿಗೆ ಭಾಗ್ಯೋದಯ.. ಕಷ್ಟ ಕಳೆದು ಸುಖ ಬರುವ ಸಮಯ!  title=

Daily Horoscope: ಇಂದಿನ ಕ್ಯಾಲೆಂಡರ್ ದಿನಾಂಕ ಮೇ 26, ದಿನ ಭಾನುವಾರ. ಶನಿವಾರ ಜೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ. ಈ ದಿನ ಸಂಕಷ್ಟಿ ಚತುರ್ಥಿ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಸೂರ್ಯೋದಯ: ಬೆಳಗ್ಗೆ 5:25. ಸೂರ್ಯಾಸ್ತ: ಸಂಜೆ 7:11ಕ್ಕೆ. ರಾಹುಕಾಲವು ಸಂಜೆ 5:26 ರಿಂದ 7:09 ರವರೆಗೆ ಇರುತ್ತದೆ. 

ಮೇಷ ರಾಶಿ 
ನೀವು ಅಪಾಯಕಾರಿ ಪರಿಸ್ಥಿತಿಯ ಮೂಲಕ ಸಾಗುತ್ತಿದ್ದೀರಿ. ಅತ್ಯಂತ ಸುರಕ್ಷಿತವಾಗಿ ಈ ದಿನವನ್ನು ದಾಟಿ. ಆರೋಗ್ಯ ಸರಿಯಿಲ್ಲ. ಪ್ರೀತಿಯ ಪರಿಸ್ಥಿತಿ ಚೆನ್ನಾಗಿಲ್ಲ. ವ್ಯಾಪಾರದ ದೃಷ್ಟಿಯಿಂದಲೂ ಇದು ಸರಿಯಾದ ಸಮಯವಲ್ಲ.

ವೃಷಭ ರಾಶಿ
ಇಂದು ಸ್ವಲ್ಪ ಕಷ್ಟದ ಪರಿಸ್ಥಿತಿ ಎದುರಾಗಬಹುದು. ಕೆಲವು ತೊಂದರೆಗೆ ಸಿಲುಕಬಹುದು. ನಿಮ್ಮ ಸಂಗಾತಿಗೂ ಇದು ಒಳ್ಳೆಯ ಸಮಯವಲ್ಲ. ವ್ಯಾಪಾರದ ಪರಿಸ್ಥಿತಿಯೂ ಸ್ವಲ್ಪ ನಷ್ಟವಾಗಬಹುದು. 

ಮಿಥುನ ರಾಶಿ
ಇಂದು ವಿವಿಧ ದಿಕ್ಕಿನಿಂದ ಹಣ ಹರಿದು ಬರುವುದು. ಹೊಸ ಸ್ನೇಹಿತರನ್ನು ಭೇಟಿಯಾಗುವಿರಿ. ಸಾಹಿತ್ಯ, ಪತ್ರಿಕೋದ್ಯಮ, ಸಂಘ ಮತ್ತು ರಾಜಕೀಯದಲ್ಲಿ ಪ್ರೋತ್ಸಾಹ ಮಂದುವರೆಯುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

ಇದನ್ನೂ ಓದಿ:  ಗುರು ಉದಯ.. 12 ವರ್ಷದ ಬಳಿಕ 3 ರಾಶಿಗಳಿಗೆ ಗುರುಬಲ, ಕೈ ಹಿಡಿಯುವುದು ಅದೃಷ್ಟ.. ಹೆಜ್ಜೆ ಹೆಜ್ಜೆಗೂ ವಿಜಯ, ಸಂಪತ್ತಿನ ಸುರಿಮಳೆ ಲಕ್‌ ಜೊತೆ ಲೈಫೂ ಚೇಂಜ್!

ಕಟಕ ರಾಶಿ 
ಆರೋಗ್ಯ, ಪ್ರೀತಿ, ವ್ಯಾಪಾರ ಈ ಮೂರರ ಮೇಲೆ ಪರಿಣಾಮ ಬೀರುತ್ತದೆ. ಇಂದು ತಪ್ಪದೇ ಶಿವನನ್ನು ಆರಾಧಿಸಿ. 

ಸಿಂಹ ರಾಶಿ 
ಕೆಲವು ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಸುತ್ತುತ್ತದೆ. ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ದಿಢೀರ್‌ ಧನಲಾಭವಾಗಲಿದೆ. 

ಕನ್ಯಾ ರಾಶಿ
 ಸಾಮಾಜಿಕ ಸ್ಥಾನಮಾನ ಹೆಚ್ಚಲಿದೆ. ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೂಗು, ಕಿವಿ ಮತ್ತು ಗಂಟಲಿನ ಸಮಸ್ಯೆಗಳಿರಬಹುದು. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುವುದು.

ತುಲಾ ರಾಶಿ
ಕುಟುಂಬದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸಕ್ಕೆ ಬಾಸ್‌ ಮೆಚ್ಚುಗೆ ದೊರೆಯಲಿದೆ. ಶನಿ ದೇವರನ್ನು ಪೂಜಿಸುತ್ತಾ ಇರಿ.

ಇದನ್ನೂ ಓದಿ:  ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಮಹಾದೆಸೆ.. ಬಯಸಿದ್ದೆಲ್ಲ ಸಿಗುವ ಅದೃಷ್ಟದ ಸಮಯ, ಕೀರ್ತಿ ಗೌರವದ ಜೊತೆ ಧನ ಸಂಪತ್ತು ವೃದ್ಧಿ!

ವೃಶ್ಚಿಕ ರಾಶಿ
ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ವ್ಯವಹಾರದಲ್ಲಿ ಲಾಭ. ವ್ಯಾಪರ ಚೆನ್ನಾಗಿ ಸಾಗುವುದು. ಇಂದು ಅಂದುಕೊಂಡ ಕೆಲಸ ಈಡೇರುವುದು.

ಧನು ರಾಶಿ
ಆಸ್ತಿ ಖರೀದಿಸುತ್ತೀರಿ. ವ್ಯಾಪಾರವು ಬೆಳೆಯುತ್ತದೆ. ಹಿಂದೆಂದೂ ನೋಡಿರದ ಲಾಭವನ್ನು ಪಡೆಯುತ್ತೀರಿ. 

ಮಕರ ರಾಶಿ
ಹಣಕಾಸಿನ ವಿಚಾರಗಳು ಬಗೆಹರಿಯಲಿವೆ. ಖ್ಯಾತಿ ಗಳಿಸುವಿರಿ. ನಿಮ್ಮ ವೃತ್ತಿಜೀವನವು ಅನಿರೀಕ್ಷಿತ ತಿರುವು ಪಡೆಯುತ್ತಿದೆ.  

ಕುಂಭ ರಾಶಿ
ಉದ್ಯೋಗಿಗಳಿಗೆ ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯುವ ಸೂಚನೆಗಳಿವೆ. ಐಷಾರಾಮಿ ಕಾರು ಅಥವಾ ಬೈಕು ಖರೀದಿಸುವ ಸಾಧ್ಯತೆಯಿದೆ. 

ಮೀನ ರಾಶಿ
ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುತ್ತೀರಿ. ವೃತ್ತಿ ಜೀವನದಲ್ಲಿ ನೀವು ಬಯಸಿದ ಮಟ್ಟಕ್ಕೆ ಹೋಗುತ್ತೀರಿ. ಶಿವನನ್ನು ಆರಾಧಿಸುತ್ತಲೇ ಇರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News