ತ್ರಿಗ್ರಹಿ ಯೋಗದಿಂದ ಈ ರಾಶಿಯವರ ಜೀವನದಲ್ಲಿ ಧನವೃಷ್ಟಿ! ನನಸಾಗುವುದು ಹೊಸ ಮನೆಯ ಕನಸು

ಬುಧ, ಶುಕ್ರ, ಮಂಗಳ ಗ್ರಹಗಳು ಸೇರಿ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ಉಂಟಾಗುತ್ತಿದೆ. ಈ 4 ರಾಶಿಯವರ ಸಮಯವು ಅತ್ಯುತ್ತಮವಾಗಿರುತ್ತದೆ. 

Written by - Ranjitha R K | Last Updated : Aug 3, 2023, 02:09 PM IST
  • ಮೂರು ಗ್ರಹಗಳ ಸಂಯೋಜನೆ
  • ಮೂರು ಗ್ರಹಗಳು ಸೇರಿ ತ್ರಿಗ್ರಹಿ ಯೋಗ
  • ನಾಲ್ಕು ರಾಶಿಯವರಿಗೆ ಅದೃಷ್ಟ
ತ್ರಿಗ್ರಹಿ ಯೋಗದಿಂದ ಈ ರಾಶಿಯವರ ಜೀವನದಲ್ಲಿ ಧನವೃಷ್ಟಿ! ನನಸಾಗುವುದು ಹೊಸ ಮನೆಯ ಕನಸು  title=

ಬೆಂಗಳೂರು : ಗ್ರಹಗಳ ಚಲನೆ, ಸ್ಥಾನ ಬದಲಾವಣೆ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದು ಮಾನವ ಜೀವನ ಮತ್ತು ಭೂಮಿಯ ಮೇಲೆ ಪರಿಣಾಮ ಬೀರುತ್ತದೆ. ಇದೇ ವೇಳೆ ಬುಧ, ಶುಕ್ರ, ಮಂಗಳ ಗ್ರಹಗಳು ಸೇರಿ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ಉಂಟಾಗುತ್ತಿದೆ. ಇದರ ಪರಿಣಾಮವು 4 ರಾಶಿಯವರ ಮೇಲೆ ಬಹಳವಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ, ಈ 4 ರಾಶಿಯವರ ಸಮಯವು ಅತ್ಯುತ್ತಮವಾಗಿರುತ್ತದೆ. 

ಕುಂಭ ರಾಶಿ : 
ಕುಂಭ ರಾಶಿಯವರಿಗೆ ಮಂಗಳ, ಸಿಂಹ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಂಡ ತ್ರಿಗ್ರಹಿ ಯೋಗವು ಫಲಕಾರಿಯಾಗಿ ಕಂಡು ಬರಲಿದೆ. ಇದ್ದಕ್ಕಿದ್ದಂತೆ ಹಣದ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ಮಾಡುವ  ಈ ರಾಶಿಯವರಿಗೆ ಲಾಭವಾಗುವುದು. ಆದಾಯ ಹೆಚ್ಚಾಗಬಹುದು. ಇದಲ್ಲದೇ ನಿಮ್ಮ ಜಾತಕದಲ್ಲಿ ಶಶ ಮತ್ತು ಕೇಂದ್ರ ತ್ರಿಕೋನ ರಾಜಯೋಗವೂ ನಿರ್ಮಾಣವಾಗುತ್ತಿದ್ದು, ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಗೆಲುವು ಸಾಧಿಸುವುದು ಸಾಧ್ಯವಾಗುತ್ತದೆ.  

ಇದನ್ನೂ ಓದಿ : ಆಗಸ್ಟ್ 7 ರಂದು ನಿರ್ಮಾಣಗೊಳ್ಳಲಿದೆ ಗಜಕೇಸರಿ ರಾಜಯೋಗ, ಈ ಜನರಿಗೆ ಅಪಾರ ಧನ ವೃದ್ಧಿಯೋಗ!

ವೃಷಭ ರಾಶಿ : 
ಅದೃಷ್ಟ ವೃಷಭ ರಾಶಿಯವರ ಕೈ ಹಿಡಿಯಲಿದೆ. ಸಮಯ ಇವರ ಪರವಾಗಿರುತ್ತದೆ. ಜೀವನದ ಸೌಕರ್ಯಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗವನ್ನು ಪಡೆಯಬಹುದು. ಕಚೇರಿ ಕಾರ್ಯಗಳಲ್ಲಿಯೂ  ಯಶಸ್ಸು ಸಿಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ನೀವು ಆಸ್ತಿ ಮತ್ತು ವಾಹನವನ್ನು ಖರೀದಿಸಬಹುದು. 

ಸಿಂಹ ರಾಶಿ : 
ಶುಕ್ರ, ಮಂಗಳ ಮತ್ತು ಬುಧದ ಸಂಯೋಜನೆಯು ಸಿಂಹ ರಾಶಿಯವರಿಗೆ ಅನುಕೂಲಕರವಾಗಿ ಇರಲಿದೆ. ನಿಮ್ಮ ರಾಶಿಯಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಇದಲ್ಲದೆ ಲಾಭ ಮತ್ತು ಸಂಪತ್ತಿನ ಅಧಿಪತಿ ಶುಕ್ರ ನಿಮ್ಮ ರಾಶಿಯಲ್ಲಿದ್ದಾನೆ. ಮತ್ತೊಂದೆಡೆ, ಸಂತೋಷದ ಅಧಿಪತಿಯಾದ ಮಂಗಳ ಕೂಡಾ ನಿಮ್ಮದೇ ರಾಶಿಯಲ್ಲಿದ್ದಾನೆ. ಇದರಿಂದಾಗಿ ವಾಹನ ಮತ್ತು ಆಸ್ತಿ ಖರೀದಿಸಬಹುದು. 

ಇದನ್ನೂ ಓದಿ : ಈ ರಾಶಿಯಲ್ಲಿ ಭದ್ರ ರಾಜಯೋಗ ! ಕಷ್ಟಗಳೆಲ್ಲಾ ಕಳೆದು ಸಂತಸದ ಹೊನಲು ಹರಿಯುವ ಸಮಯ

ತುಲಾ ರಾಶಿ :
ತುಲಾ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಗೌರವ ಮತ್ತು ಸ್ಥಾನಮಾನವು ಹೆಚ್ಚಾಗುತ್ತದೆ. ಕಾನೂನು ವಿಷಯಗಳಲ್ಲಿ ಜಯ ಗಳಿಸುತ್ತೀರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲಸ ಮಾಡುವವರು ಬಡ್ತಿ ಪಡೆಯಬಹುದು. ಸ್ವಂತ ಮನೆಯ ನಿಮ್ಮ ಕನಸು ಈ ಬಾರಿ ನನಸಾಗುವ ಸಾಧ್ಯತೆ ಹೆಚ್ಚಾಗಿದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News