ದಸರಾದಲ್ಲಿ ಮಂಗಳಕರ ಯೋಗ: ಈ ವಿಶೇಷ ಕೆಲಸ ಮತ್ತು ಪೂಜೆ ಮಾಡಿದ್ರೆ ನೀವು ಶ್ರೀಮಂತರಾಗುತ್ತೀರಿ!

ಜ್ಯೋತಿಷ್ಯ ಮತ್ತು ಪಂಚಾಂಗದ ಪ್ರಕಾರ ದಸರಾದಲ್ಲಿ ಅತ್ಯಂತ ಮಂಗಳಕರ ಯೋಗ ಇರುತ್ತದೆ. ಈ ಸಮಯದಲ್ಲಿ ಮಾಡುವ ಪೂಜೆ ಮತ್ತು ಪರಿಹಾರಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ.

Written by - Puttaraj K Alur | Last Updated : Sep 14, 2022, 03:27 PM IST
  • ದಸರಾ ದಿನದಂದು ಶಮೀ ವೃಕ್ಷ ಪೂಜಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ
  • ದೀಪ ಬೆಳಗಿಸಿ ಪೂಜೆ ಮಾಡುವುದರಿಂದ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ
  • ದಸರಾ ದಿನದಂದು ನೀಲಕಂಠ ಪಕ್ಷಿಯ ದರ್ಶನ ಮಾಡಿ ವೀಳ್ಯದೆಲೆ ತಿನ್ನುವುದರಿಂದ ಅದೃಷ್ಟ ಬರುತ್ತದೆ
ದಸರಾದಲ್ಲಿ ಮಂಗಳಕರ ಯೋಗ: ಈ ವಿಶೇಷ ಕೆಲಸ ಮತ್ತು ಪೂಜೆ ಮಾಡಿದ್ರೆ ನೀವು ಶ್ರೀಮಂತರಾಗುತ್ತೀರಿ! title=
Dussehra 2022 Auspicious Yoga

ನವದೆಹಲಿ: ಶಾರದೀಯ ನವರಾತ್ರಿಯ 9 ದಿನಗಳ ನಂತರ ದಸರಾ ಅಂದರೆ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ರಾವಣನ ಪ್ರತಿಕೃತಿಯನ್ನು ದುಷ್ಟರ ಸಂಕೇತವಾಗಿ ಸುಡಲಾಗುತ್ತದೆ. ರಾಕ್ಷಸ ಮಹಿಷಾಸುರನ ಮೇಲೆ ದುರ್ಗಾ ದೇವಿಯ ವಿಜಯದ ದಿನದ ನೆನಪಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹಿಂದೂ ಪುರಾಣದಲ್ಲಿ ತಿಳಿಸಲಾಗಿದೆ.

ಈ ವಿಶೇಷ ದಿನದಂದು ಹೊಸ ಕೆಲಸ ಪ್ರಾರಂಭಿಸಲು, ಶಾಪಿಂಗ್ ಮಾಡಲು, ವಾಹನಗಳು ಮತ್ತು ಆಯುಧಗಳನ್ನು ಪೂಜಿಸಲು ದಸರಾ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವರ್ಷ ದಸರಾದಂದು ಮಾಡಲಾಗುತ್ತಿರುವ ಮಂಗಳಕರ ಯೋಗಗಳು ಇದನ್ನು ಮತ್ತಷ್ಟು ವಿಶೇಷಗೊಳಿಸುತ್ತಿವೆ. ಈ ಯೋಗಗಳಲ್ಲಿ ಪೂಜೆ ಮತ್ತು ಶುಭ ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಬಹಳಷ್ಟು ಪ್ರಯೋಜನವಿದೆ. 

ಇದನ್ನೂ ಓದಿ: ಈ ನಾಲ್ಕು ರಾಶಿಯವರು ಚಿನ್ನದ ಉಂಗುರ ಹಾಕಿದರೆ ಕೂಡಿ ಬರುವುದು ಅದೃಷ್ಟ

ದಸರಾ ದಿನಾಂಕ ಮತ್ತು ಮಂಗಳಕರ ಸಮಯ

ಪಂಚಾಂಗದ ಪ್ರಕಾರ ಅಶ್ವಿನ ಮಾಸದ ಶುಕ್ಲ ಪಕ್ಷದ 10ನೇ ದಿನದಂದು ದಸರಾವನ್ನು ಆಚರಿಸಲಾಗುತ್ತದೆ. ಈ ವರ್ಷ ಅಶ್ವಿನ ಮಾಸದ ದಶಮಿ ದಿನಾಂಕವು ಅಕ್ಟೋಬರ್ 4, 2022ರಂದು ಮಧ್ಯಾಹ್ನ 02.21ರಿಂದ ಅಕ್ಟೋಬರ್ 5, 2022ರಂದು ಮಧ್ಯಾಹ್ನ 12ರವರೆಗೆ ಪ್ರಾರಂಭವಾಗಲಿದೆ. ಉದಯತಿಥಿಯ ಆಧಾರದ ಮೇಲೆ ಅಕ್ಟೋಬರ್ 5ರಂದು ವಿಜಯದಶಮಿ ಆಚರಿಸಲಾಗುತ್ತದೆ. ಈ ದಿನ ವಿಜಯ, ಅಮೃತ ಕಾಲ ಮತ್ತು ದುರ್ಮೂರ್ತದಂತಹ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಈ ಮಂಗಳಕರ ಯೋಗಗಳನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Pitru Paksha: ಪಿತೃ ಪಕ್ಷದಲ್ಲಿ ಮಗುವಿನ ಜನನ ನೀಡುತ್ತೆ ಈ ಸೂಚನೆ.!

ದಸರಾ ದಿನದಂದು ಈ ವಿಶೇಷ ಪೂಜೆ & ಶುಭ ಕಾರ್ಯ ಮಾಡಿ

  • ನೀವು ಶ್ರೀಮಂತರಾಗಲು ಬಯಸಿದರೆ ದಸರಾ ದಿನದಂದು ಜ್ಯೋತಿಷ್ಯ ಮತ್ತು ಧರ್ಮದಲ್ಲಿ ಉಲ್ಲೇಖಿಸಲಾದ ಕೆಲವು ಶುಭ ಕಾರ್ಯಗಳನ್ನು ಮಾಡಬೇಕು. ಈ ವಿಶೇಷ ಕೆಲಸ ಮಾಡುವುದರಿಂದ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯು ನಿಮಗೆ ಸಿಗುತ್ತದೆ.  
  • ದಸರಾ ದಿನದಂದು ಶಮೀ ವೃಕ್ಷವನ್ನು ಪೂಜಿಸಿ. ಹಾಗೆಯೇ ದೀಪವನ್ನು ಬೆಳಗಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.
  • ನೀವು ಶತ್ರುಗಳಿಂದ ರಕ್ಷಣೆ ಸಿಗಬೇಕಾದರೆ ದಸರಾ ದಿನದಂದು ಆಯುಧಗಳನ್ನು ಪೂಜಿಸಬೇಕು.
  • ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಲು ಬಯಸಿದರೆ ದಸರಾ ದಿನದಂದು ‘ಓಂ ವಿಜಯಾಯೈ ನಮಃ’ ಮಂತ್ರವನ್ನು ಪಠಿಸಿ. ಇದರ ನಂತರ ತಾಯಿ ದುರ್ಗೆಗೆ 10 ಹಣ್ಣುಗಳನ್ನು ಅರ್ಪಿಸಬೇಕು. ಅಲ್ಲದೆ ಪೊರಕೆ ಖರೀದಿಸಿ ದೇವಸ್ಥಾನಕ್ಕೆ ದಾನ ಮಾಡಿ. ಇದರಿಂದ ಲಕ್ಷ್ಮಿದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ಸಾಕಷ್ಟು ಸಂಪತ್ತನ್ನು ನೀಡುತ್ತಾಳೆ.
  • ದಸರಾ ದಿನದಂದು ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಮತ್ತು ಅವಳ ಆಶೀರ್ವಾದ ಪಡೆಯಲು ಮನೆಯ ಈಶಾನ್ಯ ದಿಕ್ಕಿನಲ್ಲಿ ಕುಂಕುಮ ಅಥವಾ ಕೆಂಪು ಬಣ್ಣದ ಹೂವುಗಳಿಂದ ಅಷ್ಟಕಮಲದ ಆಕಾರ ಮಾಡಿ. ಅಲ್ಲದೆ ಲಕ್ಷ್ಮಿದೇವಿಗೆ ಸಂಪತ್ತು ನೀಡುವಂತೆ ಪ್ರಾರ್ಥಿಸಿ.
  • ದಸರಾ ದಿನದಂದು ನೀಲಕಂಠ ಪಕ್ಷಿಯ ದರ್ಶನ ಮಾಡಿ ವೀಳ್ಯದೆಲೆ ತಿನ್ನಿ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಅದೃಷ್ಟ ಬರುತ್ತದೆ. ಒಳ್ಳೆಯ ಸಂಗತಿಗಳು ನಡೆಯುತ್ತವೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News