Tulsi Remedies: ಮನೆಯಲ್ಲಿ ತುಳಸಿಯ ಜೊತೆಗೆ ಈ 2 ಗಿಡಗಳನ್ನು ನೆಟ್ಟರೆ ಮಂಗಳಕರ

Tulsi Remedies: ತುಳಸಿ ಗಿಡದಲ್ಲಿ ತಾಯಿ ಮಹಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ತುಳಸಿಯ ಜೊತೆಗೆ ಇನ್ನೆರಡು ಗಿಡಗಳನ್ನು ನೆಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆ ಎರಡು ಸಸ್ಯಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Jun 30, 2022, 08:41 AM IST
  • ಧರ್ಮಗ್ರಂಥಗಳ ಪ್ರಕಾರ, ತುಳಸಿ ಸಸ್ಯವು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ
  • ನೀವು ತುಳಸಿಯೊಂದಿಗೆ ಕೆಲವು ವಿಶೇಷ ಸಸ್ಯಗಳನ್ನು ನೆಟ್ಟರೆ ಅದರ ಶಕ್ತಿ ದ್ವಿಗುಣಗೊಳ್ಳುತ್ತದೆ
  • ಮನೆಯಲ್ಲಿ ತುಳಸಿಯೊಂದಿಗೆ 2 ವಿಶೇಷ ಸಸ್ಯಗಳನ್ನು ನೆಟ್ಟರೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದು ಮಾತ್ರವಲ್ಲ ಪಿತೃ ದೋಷವೂ ನಿವಾರಣೆ ಆಗುತ್ತದೆ.
Tulsi Remedies: ಮನೆಯಲ್ಲಿ ತುಳಸಿಯ ಜೊತೆಗೆ ಈ 2 ಗಿಡಗಳನ್ನು ನೆಟ್ಟರೆ ಮಂಗಳಕರ title=
Auspicious plants with tulsi

ತುಳಸಿ ಉಪಾಯ: ಭಾರತೀಯ ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿ ಸಸ್ಯವನ್ನು ಪವಿತ್ರ ಸಸ್ಯ ಎಂದು ಪರಿಗಣಿಸಲಾಗುತ್ತದೆ. ತುಳಸಿ ಗಿಡದಲ್ಲಿ ತಾಯಿ ಮಹಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಹಾಗಾಗಿ, ಕುಟುಂಬದಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಪ್ರತಿ ಹಿಂದೂಗಳ ಮನೆಯಲ್ಲಿ ತುಳಸಿಯನ್ನು ಕಾಣಬಹುದು. ಮನೆಯಲ್ಲಿ ತುಳಸಿ ಸಸ್ಯ ಇದ್ದರೆ ಅಂತಹ ಮನೆಯಲ್ಲಿ ಹಣದ ಮಳೆ ಆಗುತ್ತದೆ, ಸಂಪತ್ತು ಹೆಚ್ಚಾಗುತ್ತದೆ ಎಂಬುದು ನಂಬಿಕೆ. ಆದರೆ, ಮನೆಯಲ್ಲಿ ತುಳಸಿ ಸಸ್ಯದ ಜೊತೆಗೆ ಇನ್ನೆರಡು ವಿಶೇಷ ಸಸ್ಯಗಳನ್ನು ಇಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ದೊರೆಯುತ್ತದೆ. ಅಂತಹ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.

ತುಳಸಿಯು ಆಯುರ್ವೇದ ಗುಣಗಳಿಂದ ಸಮೃದ್ಧವಾಗಿದೆ:
ಧರ್ಮಗ್ರಂಥಗಳ ಪ್ರಕಾರ, ತುಳಸಿ ಸಸ್ಯವು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ತುಳಸಿ ಸಸ್ಯವು ಅನೇಕ ಆಯುರ್ವೇದ ಗುಣಗಳನ್ನು ಹೊಂದಿದೆ, ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ನೀವು ತುಳಸಿಯೊಂದಿಗೆ ಕೆಲವು ವಿಶೇಷ ಸಸ್ಯಗಳನ್ನು ನೆಟ್ಟರೆ ಅದರ ಶಕ್ತಿ ದ್ವಿಗುಣಗೊಳ್ಳುತ್ತದೆ ಎಂದು ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇದನ್ನು ಮಾಡುವುದರಿಂದ, ತಾಯಿ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ ಮತ್ತು ಮನೆಯಲ್ಲಿ ತನ್ನ ಆಶೀರ್ವಾದವನ್ನು ಸುರಿಸುತ್ತಾಳೆ ಮತ್ತು ಭಗವಾನ್ ವಿಷ್ಣುವಿನ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.  ಆ ಎರಡು ಸಸ್ಯಗಳು ಯಾವುವು ಎಂದು ತಿಳಿಯೋಣ...

ಇದನ್ನೂ ಓದಿ- Vastu Tips for Home: ಮನೆಯಲ್ಲಿ ಮರೆತೂ ಸಹ ತಪ್ಪಾದ ದಿಕ್ಕಿನಲ್ಲಿ ಇವುಗಳನ್ನು ನಿರ್ಮಿಸಬೇಡಿ

ಭೋಲೆ ಶಂಕರನಿಗೆ ಪ್ರಿಯವಾದ ಕಪ್ಪು ದತ್ತೂರ ಸಸ್ಯ:
ಮೊದಲನೆಯದಾಗಿ, ಕಪ್ಪು ದತ್ತೂರ ಸಸ್ಯ. ಈ ಸಸ್ಯವು ಭಗವಾನ್ ಶಂಕರನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಕಪ್ಪು ದತ್ತೂರ ಸಸ್ಯದಲ್ಲಿ ಭೋಲೆನಾಥನು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.  ಹಾಗಾಗಿ ಶಿವನ ಪೂಜೆಯಲ್ಲಿ ಕಪ್ಪು ದತ್ತೂರ ಸಸ್ಯದ ಎಲೆಗಳನ್ನು ಅರ್ಪಿಸುವ ಸಂಪ್ರದಾಯವಿದೆ. ಈ ಸಸ್ಯವನ್ನು ಎಲ್ಲಾ ಶಿವ ದೇವಾಲಯಗಳಲ್ಲಿ ಸುಲಭವಾಗಿ ಕಾಣಬಹುದು. ಆದ್ದರಿಂದ ಮನೆಯಲ್ಲಿ ತುಳಸಿಯ ಜೊತೆಗೆ ಕಪ್ಪು ದತ್ತೂರ ಸಸ್ಯವನ್ನು ನೆಟ್ಟರೆ ತಾಯಿ ಲಕ್ಷ್ಮಿಯ ಜೊತೆಗೆ ಶಿವನ ಆಶೀರ್ವಾದವೂ ಸಿಗುತ್ತದೆ. 

ಶನಿಗೆ ಸಂಬಂಧಿಸಿದ ಶಮಿಯ ಸಸ್ಯ:
ಹಿಂದೂ ನಂಬಿಕೆಗಳ ಪ್ರಕಾರ, ಶಮಿ ಸಸ್ಯವು ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಮನೆಯಲ್ಲಿ ಶಮಿ ಗಿಡವನ್ನು ನೆಡುವುದರಿಂದ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ವ್ಯಾಪಾರ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ತಾನಾಗಿಯೇ ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯ ಸ್ಥಗಿತಗೊಂಡ ಕೆಲಸವೂ ಪೂರ್ಣಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ, ನೀವು ತುಳಸಿ ಗಿಡದ ಜೊತೆಗೆ ಶಮಿ ಗಿಡವನ್ನು ನೆಟ್ಟರೆ, ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಸ್ವಯಂಚಾಲಿತವಾಗಿ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Shani Krupe 2022: ಜುಲೈನಿಂದ ಈ 2 ರಾಶಿಯವರಿಗೆ ಶನಿ ವಕ್ರದೃಷ್ಟಿಯಿಂದ ಮುಕ್ತಿ

ಈ ಎರಡೂ ಸಸ್ಯಗಳಿಂದ ಪಿತೃ ದೋಷವೂ ನಿವಾರಣೆ ಆಗುತ್ತೆ:
ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ತುಳಸಿಯೊಂದಿಗೆ ಕಪ್ಪು ದತ್ತೂರ ಸಸ್ಯ ಮತ್ತು ಶಮಿ ಗಿಡವನ್ನು ನೆಟ್ಟರೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದು ಮಾತ್ರವಲ್ಲ ಪಿತೃ ದೋಷವೂ ನಿವಾರಣೆ ಆಗುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಮನೆಯ ದೇವಸ್ಥಾನದಲ್ಲಿ ಪೂಜೆ ಮಾಡಬೇಕು. ಇದರೊಂದಿಗೆ ತುಳಸಿ, ಶಮಿ, ಕಪ್ಪು  ದತ್ತೂರ ಗಿಡಗಳಿಗೆ ನೀರಿನಲ್ಲಿ ಹಾಲನ್ನು ಬೆರೆಸಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ. ಇದರೊಂದಿಗೆ ವ್ಯಕ್ತಿಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಾರೆ ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News