ASTRO TIPS: ಶನಿವಾರ ಯಾವ ವಸ್ತುಗಳನ್ನು ಮನೆಗೆ ತರಬಾರದು..?

God of Justice: ಶನಿದೇವನ ಕೃಪೆಗೆ ಪಾತ್ರರಾದರೆ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಶನಿ ಸಾಡೇಸಾತಿ ಮತ್ತು ಶನಿ ದೋಷಗಳೆಲ್ಲಾ ದೂರವಾಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

Written by - Puttaraj K Alur | Last Updated : Sep 2, 2023, 08:50 AM IST
  • ಶನಿವಾರ ಬಡವರಿಗೆ ನೋವುಂಟು ಮಾಡಿದರೆ ಶನಿದೇವರು ಕ್ಷಮಿಸಲ್ಲ
  • ಶನಿವಾರ ಯಾರಿಗೂ ಎಣ್ಣೆ ದಾನ ಮಾಡಬಾರದು ಅಥವಾ ಎಣ್ಣೆ ಖರೀದಿಸಬಾರದು
  • ಶನಿವಾರ ಕಬ್ಬಿಣ ಅಥವಾ ಕಬ್ಬಿಣದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು
ASTRO TIPS: ಶನಿವಾರ ಯಾವ ವಸ್ತುಗಳನ್ನು ಮನೆಗೆ ತರಬಾರದು..?  title=
ಶನಿವಾರ ಏನು ಮಾಡಬಾರದು..?

ನವದೆಹಲಿ: ಹಿಂದೂ ಧರ್ಮದ ಪ್ರಕಾರ ಶನಿವಾರವು ಶನಿದೇವನಿಗೆ ಸಮರ್ಪಿಸಲಾಗಿದೆ. ಶನಿದೇವರನ್ನು ನ್ಯಾಯದ ದೇವರೆಂದು ಕರೆಯಲಾಗುತ್ತದೆ. ಶನಿದೇವನ ಕೋಪಕ್ಕೆ ತುತ್ತಾದ ವ್ಯಕ್ತಿಗೆ ಉಳಿಗಾಲವಿರಲ್ಲ, ಅದೇ ರೀತಿ ಶನಿದೇವನ ಕೃಪೆಗೆ ಪಾತ್ರರಾದರೆ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಶನಿ ಸಾಡೇಸಾತಿ ಮತ್ತು ಶನಿ ದೋಷಗಳೆಲ್ಲಾ ದೂರವಾಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ಶನಿವಾರದ ದಿನ ಶನಿದೇವರಿಗೆ ಕೋಪ ತರಿಸುವ ಅಥವಾ ಇಷ್ಟವಾಗದ ಯಾವುದೇ ಕೆಲಸ ಮಾಡಬಾರದು. ಒಂದು ವೇಳೆ ಮಾಡಿದ್ರೆ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆಂದು ಹೇಳಲಾಗುವುದು. ಹೀಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿವಾರ ಏನು ಮಾಡಬಾರದು ಮತ್ತು ಏನು ಮಾಡಬೇಕು ಅನ್ನೋದರ ಬಗ್ಗೆ ತಿಳಿಸಲಾಗಿದೆ.

ಇದನ್ನೂ ಓದಿ: ಬಿಳಿ ಕೂದಲುಗಳು ತಕ್ಷಣ ನೈಸರ್ಗಿಕವಾಗಿ ಕಪ್ಪಾಗುತ್ತವೆ, ಗೋರಂಟಿಯಲ್ಲಿ ಈ ಒಂದು ವಸ್ತು ಬೆರೆಸಿ ಉಪಯೋಗಿಸಿ ನೋಡಿ!

ಶನಿವಾರ ಏನು ಮಾಡಬಾರದು..?

  • ಈ ದಿನ ಬಡವರಿಗೆ ನೋವುಂಟು ಮಾಡಿದರೆ ಶನಿ ದೇವ ಕ್ಷಮಿಸಲ್ಲ
  • ಶನಿವಾರ ಯಾರಿಗೂ ಎಣ್ಣೆ ದಾನ ಮಾಡಬಾರದು ಅಥವಾ ಎಣ್ಣೆ ಖದೀದಿ ಮಾಡಬಾರದು  
  • ಶನಿವಾರ ಯಾರಿಂದಲೂ ಚಪ್ಪಲಿ, ಶೂ ಗಿಫ್ಟ್‌ ಆಗಿ ಪಡೆಯಬಾರದು ಮತ್ತು ಗಿಫ್ಟ್ ನೀಡಲೂಬಾರದು  

ಶನಿವಾರ ಯಾವ ವಸ್ತುಗಳನ್ನು ಖರೀದಿಸಬಾರದು?

  • ಶನಿವಾರ ಕಬ್ಬಿಣ ಅಥವಾ ಕಬ್ಬಿಣದ ವಸ್ತು ಖರೀದಿಸಬಾರದು ಮತ್ತು ಕಬ್ಬಣದಿಂದ ಮಾಡಿದಂಥ ವಸ್ತುಗಳನ್ನು ಮನೆಗೆ ತರಬಾರದು
  • ಶನಿವಾರ ಎಣ್ಣೆಯನ್ನು ಖರೀದಿ ಮಾಡಬಾರದು. ಒಂದು ವೇಳೆ ಖರೀದಿಸಿದರೆ ಆರೋಗ್ಯ ಸಮಸ್ಯೆ, ಹಲವಾರು ಸಮಸ್ಯೆಗಳು ಎದುರಾಗುತ್ತವೆ
  • ಉಪ್ಪು ತಂದರೆ ಸಾಲ ಹೆಚ್ಚುತ್ತದೆ
  • ಕತ್ತರಿ ಖರೀದಿಸಿದರೆ ಜಗಳವಾಗುವುದು  
  • ಪೊರಕೆ ತಂದರೆ ಸಾಲ ಹೆಚ್ಚುವುದು
  • ಇಂಕ್ ಖರೀದಿಸುವುದರಿಂದ ಬದುಕಿನಲ್ಲಿ ಸೋಲಾಗುವುದು

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಕೆಂಪು ಚಹಾ ಸೇವಿಸಿ, ಸಿಗುತ್ತವೆ 5 ಜಬರ್ದಸ್ತ್ ಲಾಭಗಳು!

ಶನಿವಾರ ಏನು ಮಾಡಬೇಕು..?

  • ಹನುಮಂತನ ಗುಡಿಗೆ ಹೋಗಿ ದೀಪ ಹಚ್ಚಬೇಕು
  • ಶನಿವಾರದಂದು ಅರಳಿ ಮರಕ್ಕೆ ನೀರು ಹಾಕಿ ಪೂಜಿಸಬೇಕು
  • ಶನಿವಾರ ಕಪ್ಪು ವಸ್ತ್ರ, ನೀಲಿ ವಸ್ತ್ರ ಅಥವಾ ಕಪ್ಪು ಎಳ್ಳು ದಾನ ಮಾಡಬೇಕು

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News