ಮುಂದಿನ ಅಕ್ಟೋಬರ್ ವರೆಗೆ ಈ ರಾಶಿಯವರನ್ನು ಸೋಲಲು ಬಿಡುವುದೇ ಇಲ್ಲ ಶನಿದೇವ! ಕೇಳಿದ್ದೆಲ್ಲಾ ಕರುಣಿಸುತ್ತಾನೆ ಛಾಯಾಸುತ

ರಾಹುವಿನ ನಕ್ಷತ್ರವಾದ ಶತಭಿಷಾಕ್ಕೆ ಶನಿಯ ಪ್ರವೇಶವು ಎಲ್ಲರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ ಶನಿಯು 5  ರಾಶಿಯವರಿಗೆ ಮಾತ್ರ ವಿಪರೀತ ಅದೃಷ್ಟ ಕರುಣಿಸುತ್ತಾನೆ. 

ಬೆಂಗಳೂರು : ನ್ಯಾಯದಾತ ಶನಿದೇವ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಈ ಗ್ರಹ ತನ್ನ ಸ್ಥಾನ ಪರಿವರ್ತನೆಗೆ ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. 30 ವರ್ಷಗಳ ಬಳಿಕ ರಾಶಿ ಬದಲಾಯಿಸಿ ತನ್ನ ಸ್ವ ರಾಶಿಗೆ ಬಂದಿರುವ ಶನಿ, ಇದೀಗ ತನ್ನ ನಕ್ಷತ್ರ ಕೂಡಾ ಬದಲಾಯಿಸಿದ್ದಾನೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಶನಿ ಮಹಾತ್ಮ, ಮಾರ್ಚ್ 15 ರಂದು ನಕ್ಷತ್ರ  ಬದಲಾಯಿಸಿ, ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಮುಂದಿನ ಅಕ್ಟೋಬರ್ 17, 2023 ರವರೆಗೆ ಶನಿ ಶತಭಿಷಾ ನಕ್ಷತ್ರದಲ್ಲಿಯೇ ಇರುತ್ತಾನೆ. ಇದಾದ ನಂತರ ಶನಿಯ ಪ್ರವೇಶ ಧನಿಷ್ಟ ನಕ್ಷತ್ರಕ್ಕೆ ಆಗುತ್ತದೆ. ರಾಹುವಿನ ನಕ್ಷತ್ರವಾದ ಶತಭಿಷಾಕ್ಕೆ ಶನಿಯ ಪ್ರವೇಶವು ಎಲ್ಲರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.  ಅದರಲ್ಲೂ 5  ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸುತ್ತಾನೆ.

2 /6

ಮೇಷ ರಾಶಿ- ಶನಿಯ  ನಕ್ಷತ್ರ ಬದಲಾವಣೆ ಮೇಷ ರಾಶಿಯವರ ಅದೃಷ್ಟವನ್ನೇ ಬದಲಾಯಿಸುತ್ತಿದೆ. ಆರ್ಥಿಕ ಲಾಭ ಹೆಚ್ಚುತ್ತದೆ.  ಏನೇ ಕೆಲಸ ಮಾಡಿದರೂ ಶನಿಯ ಆಶೀರ್ವಾದದಿಂದ ಕೆಲಸ ಸರಾಗವಾಗಿ ಪೂರ್ಣಗೊಳ್ಳುತ್ತದೆ. ಮಾತ್ರವಲ್ಲ ಅದರಲ್ಲಿ ಯಶಸ್ಸು ಕೂಡಾ ಸಿಗುತ್ತದೆ. ನಿರೀಕ್ಷೆಯಂತೆ ಆದಾಯ ಹೆಚ್ಚುತ್ತದೆ. 

3 /6

ಮಿಥುನ ರಾಶಿ - ಮಿಥುನ ರಾಶಿಯವರ ಕನಸು ಈ ಸಂದರ್ಭದಲ್ಲಿ ಈಡೇರಲಿದೆ. ಯಾವ ಕೆಲಸದಲ್ಲಿಯೂ ಸೋಲಲು ಬಿಡುವುದಿಲ್ಲ ಶನಿ ಮಹಾತ್ಮ.  ಶನಿಯ ನಕ್ಷತ್ರ ಬದಲಾವಣೆಯಿಂದಾಗಿ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು  ಸಿಗುತ್ತದೆ. ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಜಯ ಗಳಿಸಬಹುದು. 

4 /6

 ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಬಹಳ ಸಮಯದಿಂದ ಕಾಯುತ್ತಿರುವ ಯಶಸ್ಸು ನಿಮ್ಮ ಪಾಲಿನದ್ದಾಗಲಿದೆ. ಉದ್ಯೋಗ ಬದಲಾಯಿಸುವುದಾದರೆ ಒಳ್ಳೆಯ ಅವಕಾಶಗಳೇ ಎದುರಾಗಲಿವೆ.  ಈ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ ತಪ್ಪಾಗುವುದಿಲ್ಲ. 

5 /6

ತುಲಾ ರಾಶಿ-  ತುಲಾ ರಾಶಿಯ ಜನರ ವೃತ್ತಿ ಜೀವನದಲ್ಲಿ ಪ್ರಗತಿಯ ಬಾಗಿಲು ತೆರೆದಿದೆಎಂದರೆ ತಪ್ಪಾಗದು. ಹೊಸ ಕೆಲಸಕ್ಕೆ ಸೇರಲು ಒಳ್ಳೆಯ ಕಾಲ  ಎದುರಾಗಲಿದೆ. ದೊಡ್ಡ ಮಟ್ಟದ ಧನಲಾಭವಾಗುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.  ಇನ್ನು ಆರು ತಿಂಗಳು ನಿಮ್ಮ ಜೀವನದಲ್ಲಿ ಸಂತೋಷವೇ ಎಲ್ಲಾ.   

6 /6

ಧನು ರಾಶಿ-  ಶನಿಯ ಸಂಕ್ರಮಣವು ಧನು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು  ಸಿಗಲಿದೆ. ನೀವು ಬಯಸಿದ ಕೆಲಸ ಈ ಬಾರಿ ಸಿಗಲಿದೆ. ಏನೇ ಕೆಲಸಕ್ಕ ಕೈ ಹಾಕಿದರೂ ಜಯ ಖಂಡಿತಾ.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)