ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ಕಂಗನಾ ರಣಾವತ್..! ಫೋಟೋಸ್‌ ಇಲ್ಲಿವೆ

Kangana Ranaut visit Ayodhya : ಬಹುನಿರೀಕ್ಷಿತ ತೇಜಸ್‌ ಸಿನಿಮಾ ಬಿಡುಗಡೆ ಹಿನ್ನಲೆ ನಟಿ ಕಂಗನಾ ರಣಾವತ್‌ ರಾಮಜನ್ಮಭೂಮಿ ಆಯೋಧ್ಯೆಗೆ ಭೇಟಿ ನೀಡಿ ಭಗವಾನ್‌ ಶ್ರೀರಾಮನ ದರ್ಶನ ಪಡೆದರು. ತೇಜಸ್‌ ಸಿನಿಮಾ ನಾಳೆ ಅಂದ್ರೆ ಅಕ್ಟೋಬರ್‌ 27 ರಂದು ತೆರೆ ಕಾಣಲಿದೆ. ಈ ಕುರಿತ ಫೋಟೋಸ್‌ ಇಲ್ಲಿವೆ.

1 /7

ಬಹುನಿರೀಕ್ಷಿತ ಹಿಂದಿ ಸಿನಿಮಾ 'ತೇಜಸ್' ಬಿಡುಗಡೆ ಹಿನ್ನೆಲೆ ಆಯೋಧ್ಯೆ ಶ್ರೀರಾಮನ ದರ್ಶನ ಪಡೆದ ನಟಿ ಕಂಗನಾ ರಣಾವತ್. 

2 /7

ರಾಮಜನ್ಮಭೂಮಿಗೆ ಭೇಟಿ ಕೊಟ್ಟಿರುವ ನಟಿ ಕಂಗನಾ ಈ ಕುರಿತು ಫೋಟೋಗಳುನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

3 /7

ಫೋಟೋಗಳಲ್ಲಿ ಕಂಗನಾ ಕಸೂತಿ ಬಾರ್ಡರ್ ಮತ್ತು ಪಲ್ಲು ಹೊಂದಿರುವ ಕೇಸರಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಜೈ ಶ್ರೀರಾಮ್‌ ಎಂದು ಬರೆದಿರುವ ಶಾಲ್‌ ಹೊದ್ದಿದ್ದಾಳೆ.

4 /7

“ವಾವ್! ನಾನು ಶ್ರೀ ಹರಿವಿಷ್ಣುವಿನ ಆರ್ಶೀವಾದ ಪಡೆದೆ, ನಾನು ಅವನ ಪರಮ ಭಕ್ತೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಭೂಮಿಯ ದರ್ಶನವನ್ನು ಪಡೆದಿದ್ದೇನೆ ಎಂದು ಕಂಗನಾ ಧನ್ಯತಾಭಾವ ಮೆರೆದಿದ್ದಾರೆ

5 /7

ಸುದ್ದಿಗಾರರೊಂದಿಗೆ ಮಾತನಾಡಿ, "ಅಂತಿಮವಾಗಿ ರಾಮಲಲ್ಲಾ ಮಂದಿರವನ್ನು ನಿರ್ಮಿಸಲಾಗಿದೆ, ಇದು ಹಿಂದೂಗಳ ಶತಮಾನಗಳ ಹೋರಾಟವಾಗಿದೆ ಮತ್ತು ನಮ್ಮ ಪೀಳಿಗೆಯು ಈ ದಿನವನ್ನು ನೋಡಲು ಸಾಧ್ಯವಾಗುತ್ತಿದೆ, ನಾನು ಅಯೋಧ್ಯೆಯ ಬಗ್ಗೆ ಸ್ಕ್ರಿಪ್ಟ್ ಬರೆದಿದ್ದೇನೆ ಮತ್ತು ಸಂಶೋಧನೆ ಕೂಡ ಮಾಡಿದ್ದೇನೆ. .ಇದು 600 ವರ್ಷಗಳ ಸುದೀರ್ಘ ಹೋರಾಟವಾಗಿದ್ದು, ಮೋದಿ ಸರ್ಕಾರ ಮತ್ತು ಸಿಎಂ ಯೋಗಿ ಆದಿತ್ಯನಾಥ್‌ನಿಂದಾಗಿ ಈ ದಿನ ಸಾಧ್ಯವಾಗುತ್ತಿದೆ ಎಂದಿದ್ದಾರೆ.

6 /7

ಕ್ರಿಶ್ಚಿಯನ್ನರಿಗೆ ವ್ಯಾಟಿಕನ್ ಇರುವಂತಹ ಹಿಂದೂಗಳಿಗೆ ಇದು ಅತಿದೊಡ್ಡ ಯಾತ್ರಾಸ್ಥಳವಾಗಿದೆ... ಇದು ಪ್ರಪಂಚದ ಮುಂದೆ ದೇಶ ಮತ್ತು ಸನಾತನ ಸಂಸ್ಕೃತಿಯ ಭವ್ಯವಾದ ಸಂಕೇತವಾಗಲಿದೆ. ನಮ್ಮ ತೇಜಸ್ ಚಲನಚಿತ್ರದಲ್ಲಿ ರಾಮ ಮಂದಿರವು ಸಹ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ.

7 /7

ಆರ್‌ಎಸ್‌ವಿಪಿ ನಿರ್ಮಾಣದ 'ತೇಜಸ್' ಸಿನಿಮಾದಲ್ಲಿ ನಟಿ ಕಂಗನಾ ಭಾರತೀಯ ವಾಯುಪಡೆಯ ಅಧಿಕಾರಿ ತೇಜಸ್ ಗಿಲ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಅಕ್ಟೊಬರ್‌ 27ರಂದು ಈ ಸಿನಿಮಾ ತೆರೆಕಾಣಲಿದೆ.