ಶ್ರಾವಣದಲ್ಲಿ ಈ ವಸ್ತುಗಳನ್ನು ಅರ್ಪಿಸಿದರೆ ಪ್ರಾಪ್ತಿಯಾಗುತ್ತದೆ ಶಂಕರನ ವಿಶೇಷ ಕೃಪೆ

 ಶ್ರಾವಣ ಮಾಸದಲ್ಲಿ ಶಿವನಿಗೆ ಈ ವಸ್ತುಗಳನ್ನು ಅರ್ಪಿಸುವುದರಿಂದ  ಶಿವ ಶಂಕರ ಸಂತೋಷಗೊಳ್ಳುತ್ತಾನೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. 
 

ಬೆಂಗಳೂರು : ಆಷಾಢ ಮಾಸದ ನಂತರ ಶ್ರಾವಣ ಆರಂಭವಾಗಲಿದೆ. ಜುಲೈ 14 ರಿಂದ  ಶ್ರಾವಣ ಮಾಸ ಆರಂಭವಾಗಲಿದೆ.  ಈ ಮಾಸದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ಮಾಸದಲ್ಲಿ ನಡೆಯುವ ವಿಶೇಷ ಪೂಜೆಯಿಂದ ಶಿವನು ಸಂತುಷ್ಟನಾಗಿ ಭಕ್ತರ ಮೇಲೆ ಕೃಪೆ ಹರಿಸುತ್ತಾನೆ.  ಶ್ರಾವಣ ಮಾಸದಲ್ಲಿ ಶಿವನಿಗೆ ಈ ವಸ್ತುಗಳನ್ನು ಅರ್ಪಿಸುವುದರಿಂದ  ಶಿವ ಶಂಕರ ಸಂತೋಷಗೊಳ್ಳುತ್ತಾನೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಶ್ರಾವಣ ಮಾಸದಲ್ಲಿ ಕ್ರಮಬದ್ಧವಾಗಿ ಪೂಜೆ ಮಾಡುವುದರಿಂದ ಮಹಾಶಿವನ ಅನುಗ್ರಹ ದೊರೆಯುತ್ತದೆ. ಪೂಜೆಯ ಸಮಯದಲ್ಲಿ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಬೇಕು.  ಈಶ್ವರನ ಆರಾಧನೆಯಲ್ಲಿ ಬಿಲ್ವ ಪತ್ರ ಮತ್ತು ಅಭಿಷೇಕಕ್ಕೆ ವಿಶೇಷ ಒತ್ತು ನೀಡಲಾಗಿದೆ.  ಈ ಮಾಸದಲ್ಲಿ ಶಿವಲಿಂಗಕ್ಕೆ ನಿಯಮಿತವಾಗಿ ಬಿಲ್ವಪತ್ರೆಯನ್ನು ಅರ್ಪಿಸುವವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.  

2 /5

ಕುಂಕುಮ-  ಶ್ರಾವಣ ಮಾಸವು ಶಿವನನ್ನು ಪೂಜಿಸಲು ಮತ್ತು ಆತನ ಆಶೀರ್ವಾದವನ್ನು ಪಡೆಯಲು ವಿಶೇಷವಾಗಿದೆ. ಶಿವಲಿಂಗದ ಮೇಲೆ ಕುಂಕುಮವನ್ನು ಅರ್ಪಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ.  ಶಿವನಿಗೆ ಸಕ್ಕರೆಯ ಅಭಿಷೇಕ ಮಾಡುವುದರಿಂದ ಸಂತೋಷ ಸಮೃದ್ಧಿ ಸಿಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಿಂದ ಬಡತನ ನಾಶವಾಗುತ್ತದೆ.   

3 /5

ಶಮಿ ಎಲೆಗಳು- ಉಪವಾಸ ಮತ್ತು  ಶ್ರಾವಣ ಪೂಜೆಯಿಂದ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತವೆ . ಈ ಮಾಸದಲ್ಲಿ ಶಿವನಿಗೆ ಶಮಿ ಎಲೆಗಳನ್ನು ಅರ್ಪಿಸಬಹುದು. ಶಮಿ ಎಲೆಗಳು ಶಿವನಿಗೆ ತುಂಬಾ ಪ್ರಿಯವಾದದ್ದು. ಆದ್ದರಿಂದ, ಇಡೀ ತಿಂಗಳು ಶಿವಲಿಂಗದ ಮೇಲೆ ಶಮಿ ಎಲೆಗಳನ್ನು  ಅರ್ಪಿಸಬೇಕು. ಇದರಿಂದ ಶಿವನ ವಿಶೇಷ ಕೃಪೆ ಲಭಿಸುತ್ತದೆ. 

4 /5

ಹಾಲಿನೊಂದಿಗೆ ಅಭಿಷೇಕ :  ಶ್ರಾವಣದಲ್ಲಿ ಸೋಮವಾರದ ವ್ರತವನ್ನು ಆಚರಿಸುವುದರಿಂದ ಅವಿವಾಹಿತ ಹುಡುಗಿಯರು ಸೂಕ್ತ ವರ ಸಿಗುತ್ತಾನೆ ಎಂದು ಹೇಳಲಾಗುತ್ತದೆ.  ಈ ಮಾಸದಲ್ಲಿ ಹಾಲು ಮತ್ತು ಗಂಗಾಜಲದಿಂದ ಶಿವನಿಗೆ  ಅಭಿಷೇಕ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಹಾಲು ಮತ್ತು ಗಂಗಾಜಲದಿಂದ ಅಭಿಷೇಕ ಮಾಡುವುದನ್ನು ಶಿವನು ಇಷ್ಟಪಡುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ, ಮಹಾದೇವನ ಆಶೀರ್ವಾದವನ್ನು ಪಡೆಯಲು, ನಿಯಮಿತವಾಗಿ ನೀರನ್ನು ಅರ್ಪಿಸಿ. 

5 /5

ಪರಿಮಳಯುಕ್ತ ಮತ್ತು ತಾಜಾ ಹೂವುಗಳು : ಶಿವನನ್ನು ಮಹಾದೇವ ಎಂದೂ ಕರೆಯುತ್ತಾರೆ. ಎಲ್ಲಾ ದೇವರುಗಳಲ್ಲಿ ಶಿವನು ಅತ್ಯುನ್ನತ ಸ್ಥಾನವನ್ನು ಹೊಂದಿದ್ದಾನೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ, ಶಿವನಿಗೆ ಕನ್ನೆರ್ ಹೂವುಗಳೆಂದರೆ ತುಂಬಾ ಇಷ್ಟ. ಅಂತಹ ಪರಿಸ್ಥಿತಿಯಲ್ಲಿ ಶಿವನಿಗೆ ಪೂಜೆಯ ಸಮಯದಲ್ಲಿ ಕನ್ನರ್ ಹೂವುಗಳನ್ನು ಅರ್ಪಿಸಿ. ಇದರೊಂದಿಗೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.