ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ ಪ್ರಾಪ್ತಿಯಾಗುವುದು ಶಿವನ ವಿಶೇಷ ಕೃಪೆ

ಶ್ರಾವಣಕ್ಕೆ ವಿಶೇಷ ಮನ್ನಣೆ ಇದೆ. ಈ ಮಾಸವನ್ನು ಶಿವನಿಗೆ ಸಮರ್ಪಿಸಲಾಗುವುದು.

ಬೆಂಗಳೂರು : ಪ್ರತಿ ತಿಂಗಳು ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಅದರಲ್ಲೂ ಶ್ರಾವಣಕ್ಕೆ ವಿಶೇಷ ಮನ್ನಣೆ ಇದೆ. ಈ ಮಾಸವನ್ನು ಶಿವನಿಗೆ ಸಮರ್ಪಿಸಲಾಗುವುದು. ಈ ಮಾಸದಲ್ಲಿ ಮಾಡುವ ಪೂಜೆ ಮತ್ತು ದಾನಗಳು ವಿಶೇಷ ಫಲವನ್ನು ನೀಡುತ್ತದೆ.  ಇದೇ ಕಾರಣಕ್ಕಾಗಿ ಈ ತಿಂಗಳಲ್ಲಿ  ಕೆಲವು ವಸ್ತುಗಳನ್ನು ದಾನ ಮಾಡುವಂತೆ ಸೂಚಿಸಲಾಗುತ್ತದೆ. ಈ ಮಾಸದಲ್ಲಿ ದಾನ ಇತ್ಯಾದಿಗಳನ್ನು ಮಾಡುವುದರಿಂದ ವ್ಯಕ್ತಿ ಸಂಪತ್ತು, ಐಶ್ವರ್ಯ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಹೊಸ ಮತ್ತು ಹಳೆಯ ವಸ್ತ್ರಗಳ ದಾನ: ವಸ್ತ್ರದಾನವೂ ಬಹಳ ಮುಖ್ಯ ದಾನವಗಿದೆ. ಆಯುಷ್ಯವನ್ನು ಹೆಚ್ಚಿಸಲು ವಸ್ತ್ರಗಳನ್ನು ದಾನ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಹೊಸ ಬಟ್ಟೆಗಳನ್ನು ದಾನ ಮಾಡುತ್ತಿದ್ದರೆ, ಜ್ಯೋತಿಷಿಗಳಿಂದ  ಸಲಹೆಯನ್ನು ತೆಗೆದುಕೊಳ್ಳಿ. ಅದೇ ಹಳೆಯ ಬಟ್ಟೆಗಳನ್ನು ದಾನ ಮಾಡುವುದಾದರೆ ಅವುಗಳನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.   

2 /5

ರುದ್ರಾಕ್ಷಿ ದಾನ: ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರಾವಣದಲ್ಲಿ ರುದ್ರಾಕ್ಷಿಯ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಶ್ರಾವಣದಲ್ಲಿ ರುದ್ರಾಕ್ಷಿಯನ್ನು ದಾನ ಮಾಡುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳು ದೂರವಾಗುತ್ತವೆ. 

3 /5

ತುಪ್ಪ ದಾನ: ದಾನದ ಪ್ರಕಾರ ತುಪ್ಪವನ್ನು ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳು ಕಂಡುಬರುತ್ತವೆ. ಶಿವನಿಗೆ ತುಪ್ಪದ ಅಭಿಷೇಕವೂ ಮಂಗಳಕರ ಎಂಬ ನಂಬಿಕೆಯಿದೆ. ತುಪ್ಪವನ್ನು ದಾನ ಮಾಡಿದರೆ ರೋಗಗಳು ದೂರವಾಗುತ್ತವೆ. 

4 /5

ಕಪ್ಪು ಎಳ್ಳು: ಶ್ರಾವಣದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ರಾಹು-ಕೇತು ಮತ್ತು ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಬಹುದು. ವಿಶೇಷವಾಗಿ ಶನಿಯ ಸಾಡೇ ಸಾತಿ , ಧೈಯ್ಯಾದಿಂದ ತೊಂದರೆಗೊಳಗಾದವರು ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಮತ್ತು ಕಪ್ಪು ಎಳ್ಳನ್ನು ಬಡವರಿಗೆ ದಾನ ಮಾಡಿ. 

5 /5

ಉಪ್ಪು: ಹಿಂದೂ ಧರ್ಮದಲ್ಲಿ ಉಪ್ಪಿನ ವಿಶೇಷ ಮಹತ್ವವನ್ನು ಹೇಳಲಾಗಿದೆ. ದಾನದಲ್ಲಿಯೂ ಇದು ವಿಶೇಷ ಮಹತ್ವವನ್ನು ಹೊಂದಿದೆ.ಉಪ್ಪನ್ನು ಧನಾತ್ಮಕ ಶಕ್ತಿಯ ಸಂಕೇತವೆಂದು ನಂಬಲಾಗಿದೆ. ಬಡವರಿಗೆ ಉಪ್ಪು ದಾನ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.