ಆಗಸ್ಟ್ ಅಂತ್ಯದೊಳಗೆ ಮುಗಿಸಿಕೊಳ್ಳಿ ಈ ನಾಲ್ಕು ಕೆಲಸ ಇಲ್ಲವಾದರೆ ಆಗುವುದು ನಷ್ಟ

ನೀವು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಅಥವಾ ಆದಾಯ ತೆರಿಗೆ ರಿಟರ್ನ್ ಅನ್ನು ತಡವಾಗಿ ಸಲ್ಲಿಸಿದ್ದರೆ ಮತ್ತು ಇನ್ನೂ ಪರಿಶೀಲಿಸದಿದ್ದರೆ, ಆಗಸ್ಟ್ 31 ರ ಗಡುವು ನಿಮಗೆ ಮುಖ್ಯವಾಗಿರುತ್ತದೆ.

 ಬೆಂಗಳೂರು : ಈಗ ಆಗಸ್ಟ್ ತಿಂಗಳ ಅಂತ್ಯಕ್ಕೆ  ಕೆಲವೇ ಕೆಲವು ದಿನಗಳು ಮಾತ್ರ ಉಳಿದಿವೆ. ಈ ಮಧ್ಯೆ ಈ ತಿಂಗಳ ಒಳಗೆ ಪೂರೈಸಲೇ ಬೇಕಾದ ಕೆಲವು ಕೆಲಸಗಳಿವೆ. ಅಂದರೆ ಆಗಸ್ಟ್‌  31 ರ ಒಳಗೆ  ಈ ಕೆಲಸವನ್ನು ಮುಗಿಸಲೇ ಬೇಕಾಗುತ್ತದೆ. ಇಲ್ಲವಾದರೆ ನಷ್ಟ ಅನುಭವಿಸಬೇಕಾಗುತ್ತದೆ.  ಹಾಗಿದ್ದರೆ ಆ ಕೆಲಸಗಳು ಯಾವುವು ನೋಡೋಣ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ನೀವು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಅಥವಾ ಆದಾಯ ತೆರಿಗೆ ರಿಟರ್ನ್ ಅನ್ನು ತಡವಾಗಿ ಸಲ್ಲಿಸಿದ್ದರೆ ಮತ್ತು ಇನ್ನೂ ಪರಿಶೀಲಿಸದಿದ್ದರೆ, ಆಗಸ್ಟ್ 31 ರ ಗಡುವು ನಿಮಗೆ ಮುಖ್ಯವಾಗಿರುತ್ತದೆ. ಇವುಗಳನ್ನು ಸಕಾಲದಲ್ಲಿ ಮಾಡದಿದ್ದರೆ ಆರ್ಥಿಕವಾಗಿ ನಷ್ಟವನ್ನು ಎದುರಿಸಬೇಕಾಗುತ್ತದೆ.  

2 /4

ನೀವು ಪಿಎಂ ಕಿಸಾನ್‌ನ ಫಲಾನುಭವಿಯಾಗಿದ್ದರೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಅಪ್‌ಡೇಟ್ ಆಗಿರುವುದು ಮುಖ್ಯ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈಗ ಇಕೆವೈಸಿ ಗಡುವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಈ ಗಡುವನ್ನು ಜುಲೈ 31 ಎಂದು ನಿಗದಿ ಮಾಡಲಾಗಿತ್ತು. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12 ನೇ ಕಂತು ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಈ ಯೋಜನೆಯಡಿ, ನೋಂದಾಯಿತ ರೈತರು 2 ಸಾವಿರ ರೂಪಾಯಿಗಳಂತೆ ವರ್ಷಕ್ಕೆ 6 ಸಾವಿರ ರೂಪಾಯಿಗಳನ್ನು   ಪಡೆಯುತ್ತಾರೆ. ಆದರೆ ಮುಂದಿನ ಕಂತಿನ ಲಾಭ ಪಡೆಯಲು KYC ಮಾಡಿಸುವುದು ಅನಿವಾರ್ಯವಾಗಿರುತ್ತದೆ.  

3 /4

ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್  ಗ್ರಾಹಕರಾಗಿದ್ದರೆ, ಆಗಸ್ಟ್ 31 ರೊಳಗೆ KYC ಅನ್ನು ಪೂರ್ಣಗೊಳಿಸಬೇಕು. ಈ ಬಾರಿ  KYC ಅನ್ನು ಗಡುವಿನೊಳಗೆ ಪೂರ್ಣಗೊಳಿಸದಿದ್ದರೆ, ಖಾತೆಯನ್ನು ತಡೆಹಿಡಿಯಬಹುದು ಎಂದು ಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ. ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರ KYC ಅನ್ನು 31 ಮಾರ್ಚ್ 2022 ರೊಳಗೆ ಪೂರ್ಣಗೊಳಿಸದಿದ್ದರೆ, ಅವರು ಆಗಸ್ಟ್ 31 ರೊಳಗೆ ಶಾಖೆಗೆ ಭೇಟಿ ನೀಡಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು.  

4 /4

ನೀವು ತೆರಿಗೆ ಪಾವತಿದಾರರಾಗಿದ್ದರೆ, ಆಗಸ್ಟ್ 31 ರ ಮೊದಲು ಪರಿಶೀಲನೆ  ನಡೆಸುವುದು ಅಗತ್ಯ. ಸರ್ಕಾರದ ಆದೇಶದ ಪ್ರಕಾರ, ತೆರಿಗೆದಾರರು ಜುಲೈ 31 ರ ನಂತರ ರಿಟರ್ನ್ ಸಲ್ಲಿಸಿದರೆ, ಅವರು ಪರಿಶೀಲನೆಗೆ ಕೇವಲ 30 ದಿನಗಳನ್ನು  ಮಾತ್ರ ಪಡೆಯುತ್ತಾರೆ. ಆದರೆ ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸುವವರಿಗೆ ಮೊದಲಿನಂತೆ 120 ದಿನಗಳ ಪರಿಶೀಲನೆಗೆ ಅವಕಾಶವಿದೆ.