ಬುಧಾದಿತ್ಯ ರಾಜಯೋಗ- ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದಾರೆ ಬುಧ-ಆದಿತ್ಯ

ಬುಧ ಮತ್ತು ಸೂರ್ಯನ ಗ್ರಹದ ಸಂಯೋಜನೆಯಿಂದಾಗಿ, ಕನ್ಯಾರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ, ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ರಾಜಯೋಗವನ್ನು ನೀಡಲಿದೆ. 

Budhaditya Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಗ್ರಹವು ಸಂಕ್ರಮಿಸಿದಾಗ ಅಥವಾ ಸಂಯೋಗವನ್ನು ಮಾಡಿದಾಗ, ಅದು ನೇರವಾಗಿ ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೆಲವರಿಗೆ ಲಾಭವಾದರೆ ಇನ್ನು ಕೆಲವರು ನಷ್ಟ ಅನುಭವಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಬುಧ ಮತ್ತು ಸೂರ್ಯನ ಗ್ರಹದ ಸಂಯೋಜನೆಯಿಂದಾಗಿ, ಕನ್ಯಾರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ, ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ 3 ರಾಶಿಯವರಿಗೆ ಆರ್ಥಿಕ ವೃದ್ಧಿಯನ್ನು ನೀಡಲಿದೆ. ಅವರು ಹಿಡಿತ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ.. 

2 /4

ಬುಧಾದಿತ್ಯ ರಾಜಯೋಗದ ರಚನೆಯು ಸಿಂಹ ರಾಶಿಯ ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಹುದು. ಏಕೆಂದರೆ ಸಿಂಹ ರಾಶಿಯಿಂದ ಎರಡನೇ ಮನೆಯಲ್ಲಿ ಬುಧಾದಿತ್ಯ ರಾಜಯೋಗವು  ರೂಪುಗೊಳ್ಳಲಿದೆ ಮತ್ತು ಇದನ್ನು ಜ್ಯೋತಿಷ್ಯದಲ್ಲಿ ಸಂಪತ್ತಿನ ಮನೆ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಿಂಹ ರಾಶಿಯ ಜನರು ಹಠಾತ್ ವಿತ್ತೀಯ ಲಾಭವನ್ನು ಪಡೆಯಬಹುದು. ಇದಲ್ಲದೆ, ಷೇರು ಮಾರುಕಟ್ಟೆ ಮತ್ತು ಲಾಟರಿಗಳಿಗೆ ಸಂಬಂಧಿಸಿದ ಜನರಿಗೆ ಲಾಭದ ಸಾಧ್ಯತೆಗಳಿವೆ. ಶಿಕ್ಷಣ, ಮಾರ್ಕೆಟಿಂಗ್ ಮತ್ತು ಸಂಗೀತಕ್ಕೆ ಸಂಬಂಧಿಸಿದ ಜನರಿಗೆ ಸಮಯವು ಅನುಕೂಲಕರವಾಗಿರುತ್ತದೆ ಮತ್ತು ವೃತ್ತಿಜೀವನದ ಬೆಳವಣಿಗೆಯನ್ನು ಕಾಣಬಹುದು. ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಸಮಯವು ಉತ್ತಮವಾಗಿದೆ ಎಂದು ಸಾಬೀತು ಪಡಿಸಲಿದೆ.

3 /4

ಬುಧಾದಿತ್ಯ ರಾಜಯೋಗದ ರಚನೆಯೊಂದಿಗೆ, ವೃಶ್ಚಿಕ ರಾಶಿಯವರು ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು. ಏಕೆಂದರೆ ಈ ರಾಜಯೋಗವು 11 ನೇ ಸ್ಥಾನದಲ್ಲಿರಲಿದೆ ಮತ್ತು ಇದನ್ನು ಆದಾಯದ ಮನೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಬುಧಾದಿತ್ಯ ರಾಜಯೋಗದಿಂದ ವೃಶ್ಚಿಕ ರಾಶಿಯವರಿಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಹಣದ ಹರಿವು ಹೆಚ್ಚಾಗಲಿದೆ. ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು. ಇದಲ್ಲದೆ, ಆಸ್ತಿ ಮತ್ತು ವಾಹನ ಖರೀದಿ ಯೋಗವೂ ಇದೆ. 

4 /4

ಬುಧಾದಿತ್ಯ ರಾಜಯೋಗದ ರಚನೆಯೊಂದಿಗೆ, ಧನು ರಾಶಿಯ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು, ಏಕೆಂದರೆ ಸಂಕ್ರಮಣ ಜಾತಕದಿಂದ ಹತ್ತನೇ ಮನೆಯಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳಲಿದೆ ಮತ್ತು ಇದು ಕರ್ಮ ಕ್ಷೇತ್ರದ ಮನೆ ಎಂದು ಪರಿಗಣಿಸಲಾಗಿದೆ. ಬುಧಾದಿತ್ಯ ಯೋಗದಿಂದ ಧನು ರಾಶಿ ಜನರಿಗೆ ಹೊಸ ಉದ್ಯೋಗ ಪ್ರಸ್ತಾಪ ಪಡೆಯುವ ಸಾಧ್ಯತೆ ಇದೆ  ಅಥವಾ ಹಳೆಯ ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ಇದಲ್ಲದೆ, ವ್ಯಾಪಾರ ಮಾಡುವ ಜನರು ಉತ್ತಮ ಹಣವನ್ನು ಪಡೆಯಬಹುದು ಮತ್ತು ವ್ಯಾಪಾರವನ್ನು ವಿಸ್ತರಿಸಬಹುದು. ರಾಜಕೀಯಕ್ಕೆ ಸಂಬಂಧಿಸಿದವರು ಸಹ ಯಶಸ್ಸನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ