US Presidential Elections 2024: ನಿಕ್ಕಿ ಹ್ಯಾಲಿ ಈ ರೇಸ್ನಲ್ಲಿ ಭಾಗವಹಿಸಲು ತನ್ನ ಹೆಸರನ್ನು ಘೋಷಿಸಿದ್ದಾರೆ. ಮತ್ತೊಂದೆಡೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಇದೇ ರೀತಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಮೂಲದ ಇಬ್ಬರು ಒಂದೇ ರೇಸ್ನಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿದೆ. ಕಮಲಾ ಹ್ಯಾರಿಸ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ನ ಉಪಾಧ್ಯಕ್ಷರಾಗಿದ್ದರೆ, ನಿಕ್ಕಿ ಹ್ಯಾಲೆ ದಕ್ಷಿಣ ಕೆರೊಲಿನಾದ ಗವರ್ನರ್ ಆಗಿದ್ದಾರೆ.
ದೆಹಲಿ:ಬಹುಕೋಟಿ ಡಾಲರ್ ಮೌಲ್ಯದ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಏರ್ಬಸ್ ಮತ್ತು ಬೋಯಿಂಗ್ನೊಂದಿಗೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಈ ಓಪ್ಪಂದಕ್ಕೆ ಯುಕೆ ಪ್ರಧಾನಿ ರಿಷಿ ಸುನಕ್ ಅಭಿನಂದಿಸಿದ್ದಾರೆ.
ಪ್ರಸ್ತುತ ವೀಸಾ ಕಚೇರಿ ಚೆನ್ನೈನಲ್ಲಿರುವುದರಿಂದ ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ವಿದೇಶಿಗರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನ ಅಮೆರಿಕಾಕ್ಕೆ ಪ್ರಯಾಣ ಬೆಳೆಸುವುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ವೀಸಾ ಕಚೇರಿಯನ್ನು ತೆರೆಯುವಂತೆ ಆಗ್ರಹಿಸಿದರು.
Turkey Earthquake 2023 Latest News: ಮಾಧ್ಯಮ ವರದಿಗಳ ಪ್ರಕಾರ, ಸೋಮವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದಾಗಿ, ಟರ್ಕಿಯ ಜನರಲ್ಲಿ ಮತ್ತೆ ಭಯ ಆವರಿಸಿದೆ. ಜನರು ತಮ್ಮ ಮನೆಗಳನ್ನು ತೊರೆದು ಬಯಲಿನತ್ತ ಓಡಲಾರಂಭಿಸಿದ್ದಾರೆ. ಪ್ರಬಲ ಭೂಕಂಪದಿಂದಾಗಿ ಕಟ್ಟಡಗಳು ಮತ್ತೆ ನಡುಗಲಾರಂಭಿಸಿವೆ.
ಕಾರ್ಮಿಕ ಶೋಷಣೆ ತಡೆಗಾಗಿ ಸ್ಥಾಪಿತವಾಗಿರುವ ಲಂಡನ್ ನ ಗುಪ್ತಚರ ಮತ್ತು ಕಾರ್ಮಿಕ ಶೋಷಣೆಯ ತನಿಖಾ ಸಂಸ್ಥೆಯಾದ Gangmasters and Labour Abuse Authority (GLAA) ಕಾರ್ಮಿಕ ನಿಂದನೆ ಸಂಬಂಧ ವರದಿ ಪ್ರಕಟಿಸಿ ನ್ಯಾಯಾಲಯದಿಂದ ಆದೇಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು.
NRI Investors: ಈ ಸಕಾರಾತ್ಮಕ ಬದಲಾವಣೆಗೆ ಹಲವಾರು ಕಾರಣಗಳಿವೆ. ಕೆಲವು ಅಂಶಗಳು ಎರಡನೇ ಮನೆ, ಹೂಡಿಕೆ ಮತ್ತು ಉದಯೋನ್ಮುಖ ಮಾರುಕಟ್ಟೆ ಕಲ್ಪನೆಗಳಂತಹ ಅಂಶಗಳಿಗೆ ಕಾರಣವಾಗಿವೆ. ಒಟ್ಟಾರೆ ಭಾರತೀಯ ಮಾರುಕಟ್ಟೆ ಸಂಪೂರ್ಣ ಬದಲಾಗಿದೆ. ಹೊಸ ಮತ್ತು ಉದಯೋನ್ಮುಖ ವಸತಿ ನಿರ್ಮಾಣಗಳ ಸಮೃದ್ಧವಾಗಿದೆ.
Renouncing Indian citizenship: ಪೌರತ್ವ ತ್ಯಜಿಸಿದ ಭಾರತೀಯರ ವರ್ಷವಾರು ಸಂಖ್ಯೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ. 2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಆಗಿದ್ದರೆ, 2016 ರಲ್ಲಿ 1,41,603 ಜನರು ಮತ್ತು 2017 ರಲ್ಲಿ 1,33,049 ಜನರು ತ್ಯಜಿಸಿದ್ದಾರೆ ಎಂದು ಜೈಶಂಕರ್ ಹೇಳಿದರು
NRI: ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದೇಶಪಾಂಡೆ ಫೌಂಡೇಶನ್ನ 14ನೇ ಅಭಿವೃದ್ಧಿ ಸಂವಾದ ಸಮ್ಮೇಳನದಲ್ಲಿ ಮಾತನಾಡಿದ ಮೂರ್ತಿ ಅವರು, “ಇಂತಹ ದಿನಗಳನ್ನು 250ಕ್ಕೆ ಹೆಚ್ಚಿಸಿದರೆ ದೇಶದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ ಬದಲಾಗಿ ಭಾರತದಲ್ಲಿನ ಸ್ಟಾರ್ಟ್ಅಪ್ಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಅಮೂಲ್ಯ ವ್ಯಕ್ತಿಗಳೊಂದಿಗೆ ಹೆಚ್ಚು ಸಮಯ ಸೇರಿದಂತೆ ಪ್ರಯೋಜನಗಳನ್ನು ತರುತ್ತದೆ ಎಂದು ಸಲಹೆ ನೀಡಿದರು.
Aadhaar for NRI: ಆಧಾರ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಪ್ಯಾನ್ ಕಾರ್ಡ್ನಿಂದ ಹಿಡಿದು ಬ್ಯಾಂಕ್ ಖಾತೆಯವರೆಗೆ ಎಲ್ಲವೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿರಬೇಕು. ಸರಕಾರ ನೀಡುವ ಹಲವು ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ.
Budget 2023-24 & NRI: ಭಾರತೀಯ ಬಜೆಟ್ನಲ್ಲಿ ಘೋಷಿಸಲಾದ ಬದಲಾವಣೆಗಳಿಂದ ಯುಎಇಯಲ್ಲಿ ವಾಸಿಸುವ ಅನಿವಾಸಿ ಭಾರತೀಯರಿಗೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ನೋಡೋಣ. ಭಾರತ ಸರ್ಕಾರವು ಎನ್ಆರ್ಐಗಳಿಗೆ ತೆರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸುತ್ತಿರುವುದರಿಂದ, 2023-24ರ ಹಣಕಾಸು ವರ್ಷದ ಬಜೆಟ್ನಲ್ಲಿ ಎನ್ಆರ್ಐಗಳಿಗೆ ವಿಶೇಷವಾಗಿ ಹೆಚ್ಚಿನ ಪರಿಹಾರ ನೀಡಿಲ್ಲ.
NRI News: ಮಲಿಕ್ ಮತ್ತು ಈ ಐದು ಮಂದಿ ಸೇರಿ, 2012ರ ಏಪ್ರಿಲ್ನಲ್ಲಿ ಚಂಡೀಗಢದ ಸೆಕ್ಟರ್ 18 ನಲ್ಲಿರುವ ಮನೆಯಿಂದ ಕೆನಡಾದ ನವನೀತ್ ಸಿಂಗ್ ಚಾಥಾ ಎಂಬ ಎನ್ಆರ್ಐ ಅನ್ನು ಅಪಹರಿಸಿದ್ದರು. ಬಳಿಕ ಕುರುಕ್ಷೇತ್ರದ ಫಾರ್ಮ್ಹೌಸ್ನಲ್ಲಿ ಬಂಧಿಸಿ, ಕೆನಡಾದಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಹಣದ ಬೇಡಿಕೆಯಿಡುವಂತೆ ಒತ್ತಾಯಿಸಿದ್ದರು. ಬಳಿಕ ಕೇವಲ 24 ಗಂಟೆಯಲ್ಲಿ ಪೊಲೀಸರು ಚಾಥಾ ಅವರನ್ನು ರಕ್ಷಿಸಿತು.
US Visa Waiting Time: ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್ನಲ್ಲಿರುವ ಕಾನ್ಸುಲೇಟ್ಗಳು ಜನವರಿ 21 ರಂದು 'ವಿಶೇಷ ಶನಿವಾರ ಸಂದರ್ಶನ ದಿನಗಳನ್ನು' ಆಯೋಜಿಸಿವೆ.
NRI Budget Demand: ಪ್ರತಿ ವರ್ಷದಂತೆ ಯುಎಇಯಲ್ಲಿರುವ ಭಾರತೀಯ ವಲಸಿಗರು ಈ ಬಜೆಟ್ನಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದಾರೆ. ತೆರಿಗೆಗಳನ್ನು ಉಳಿತಾಯ ಮತ್ತು ಹಣ ಸಂಗ್ರಹಣೆಗೆ ಸಹಾಯವಾಗುವಂತಹ ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬರಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
NRI News: ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಈ ದುಷ್ಕೃತ್ಯ ನಡೆದಿದೆ. ಕ್ಯಾನ್ಸರ್ನಿಂದ ಬಳಲುತ್ತಿರುವ ಪತ್ನಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವಂತೆ ಹೇಳಿದ್ದಕ್ಕೆ ಎನ್ಆರ್ಐ ಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪತ್ನಿಗೆ ಚಾಕುವಿನಿಂದ ಇರಿದು ಬಳಿಕ ಈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
SS Rajamouli: ಸೇಥ್ ಮೇಯರ್ಸ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಎಸ್ಎಸ್ ರಾಜಮೌಳಿ, “ನಾವು ವಿಶ್ವದ ಅಗ್ರಸ್ಥಾನದಲ್ಲಿದ್ದೇವೆ. ನಾನು ಭಾರತದಲ್ಲಿನ ಮತ್ತು ಜಗತ್ತಿನಾದ್ಯಂತ ಇರುವ ಭಾರತೀಯರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ. ನಾವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಪಡೆಯಲು ಪ್ರಾರಂಭಿಸಿದಾಗ ನನ್ನ ಮೊದಲ ಆಲೋಚನೆ ಏನಾಗಿತ್ತೆಂದರೆ, ಚಿತ್ರ ವೀಕ್ಷಿಸಲು ಹೋದವರು ಬಹುಶಃ ನಮ್ಮ ಭಾರತೀಯರ ಸ್ನೇಹಿತರಾಗಿರಬೇಕು” ಎಂದು ಭಾವಿಸಿದ್ದೆ ಎಂದಿದ್ದಾರೆ.
Hindu god photo on beer bottle: ಮದ್ಯವನ್ನು ತಯಾರಿಸುವ ಬಿಯೆನ್ ಮಂಗರ್ ಹೆಸರಿನ ಕಂಪನಿಯ ವಿರುದ್ಧ ಇನ್ಸೈಟ್ ಯುಕೆ ಪ್ರತಿಭಟಿಸಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದೆ. ಇನ್ಸೈಟ್ ಯುಕೆ ಈ ವಿಷಯದ ಬಗ್ಗೆ ಬಿಯರ್ ಚಿತ್ರದೊಂದಿಗೆ ಟ್ವೀಟ್ ಮಾಡಿದೆ ಮತ್ತು ಕ್ರಮಕ್ಕೆ ಒತ್ತಾಯಿಸಿದೆ.
UPI service: ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ಪ್ರಕಾರ, UPI ಸೇವೆಯನ್ನು ಭಾರತದ ಹೊರಗೆ ವಿಸ್ತರಿಸಲು ಸಿದ್ಧವಾಗಿದೆ. ಅಂತರರಾಷ್ಟ್ರೀಯ ಮೊಬೈಲ್ ಸೇವೆಗಳನ್ನು ಹೊಂದಿರುವವರಿಗೆ ಭಾರತದ ಹೊರಗಿನ 10 ದೇಶಗಳಲ್ಲಿ ಯುಪಿಐ ಸೇವೆಯನ್ನು ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ.
World Passport Ranking 2023: ಪಾಕಿಸ್ತಾನವು ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಂತಹ ದುರ್ಬಲ ರಾಷ್ಟ್ರಗಳ ಪಾಸ್ಪೋರ್ಟ್ಗಳ ಶ್ರೇಯಾಂಕದ ಸಮೀಪಕ್ಕೆ ಬಂದಿದೆ. ಇನ್ನೊಂದೆಡೆ ಭಾರತದ ಶ್ರೇಯಾಂಕ ಶ್ಲಾಘನೀಯ ಮಟ್ಟದಲ್ಲಿದೆ. ಜಪಾನ್ ನಂಬರ್ ಒನ್ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಲಂಡನ್ ಮೂಲದ ಟ್ರಾವೆಲ್ ಹೆನ್ಲಿ ಮತ್ತು ಪಾರ್ಟ್ನರ್ಸ್ 2023 ರ ಪಾಸ್ಪೋರ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.
Indians in the UAE: ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಉಪೇಂದ್ರ ನಾಥ್ ಚತುರ್ವೇದಿ ಎಂಬವರಿಗೆ ಸಾರ್ವಜನಿಕ ಸ್ಥಳದಲ್ಲಿ 1,34,930 ದಿರ್ಹಮ್ (ರೂ. 30,22,500) ನಗದು ಸಿಕ್ಕಿಬಿದ್ದಿದೆ. ಅದನ್ನು ತಕ್ಷಣವೇ ಚತುರ್ವೇದಿ ಅಲ್ ರಫಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಅವರಿಗೆ ನೀಡಿದ್ದಾರೆ.
ದೇಶದಲ್ಲಿ ಉದ್ಯೋಗ ಮಾಡುವುದು ಈಗಿನ ಯುವಜನತೆಯ ಕನಸಾಗಿದೆ. ಆದರೆ ಹಲವು ಬಾರಿ ವಿದೇಶದಲ್ಲಿ ಉದ್ಯೋಗ ಬಯಸಿ ಹೋದವರು ತೊಂದರೆಗೆ ಉಂಟಾಗುವುದು ಎಲ್ಲರಿಗು ತಿಳಿದ ವಿಷಯವಾಗಿದೆ. ಇಂತಹ ತೊಂದರೆಗಳನ್ನು ನಿವಾರಿಸಿ ಸಾಮಾನ್ಯ ಜನರಿಗೆ ವಿದೇಶದಲ್ಲಿ ಸುರಕ್ಷಿತವಾದ ಉದ್ಯೋಗವನ್ನು ಪಡೆಯಲು ಉಪಯುಕ್ತವಾಗಲೆಂದು ಸರಕಾರ ನೂತನವಾಗಿ ಅಂತಾರಾಷ್ಟ್ರೀಯ ವಲಸೆ ಕೇಂದ್ರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.