ಹೆಚ್.ಡಿ ದೇವೇಗೌಡರ ಹಗರಣಗಳ ಬಗ್ಗೆ ಸಂಜೆ ದಾಖಲೆ ರಿಲೀಸ್: ಯಡಿಯೂರಪ್ಪ

ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆಗೆ ತಿರುಗೇಟು ನೀಡಿದ ಬಿ.ಎಸ್. ಯಡಿಯೂರಪ್ಪ

Last Updated : Sep 20, 2018, 02:12 PM IST
ಹೆಚ್.ಡಿ ದೇವೇಗೌಡರ ಹಗರಣಗಳ ಬಗ್ಗೆ ಸಂಜೆ ದಾಖಲೆ ರಿಲೀಸ್: ಯಡಿಯೂರಪ್ಪ title=

ಬೆಂಗಳೂರು: ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ, ಒಂದೇ ದಿನದಲ್ಲಿ ಏನು ಬೇಕಾದರೂ ಆಗಬಹುದು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿರುವ ಯಡಿಯೂರಪ್ಪ ಹೆಚ್.ಡಿ ದೇವೇಗೌಡರ ಹಗರಣಗಳ ಬಗ್ಗೆ ಸಂಜೆ ದಾಖಲೆ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

ನಿಮ್ಮ ಬಳಿ ರಾಜ್ಯ ಸರ್ಕಾರವಿದ್ದರೇ ನಮ್ಮ ಬಳಿ ಕೇಂದ್ರ ಸರ್ಕಾರವಿದೆ ಎಂದು ಹೆಚ್ಡಿಕೆಗೆ ಟಾಂಗ್ ಕೊಟ್ಟಿರುವ ಬಿಎಸ್ವೈ, ದೇವೇಗೌಡರು ಮಾಡಿರುವ ದ್ರೋಹಗಳ ಬಗ್ಗೆ ನಮಗೆ ಗೊತ್ತಿದೆ. ಯಾರು ಮಾಡದ ದ್ರೋಹವನ್ನ ಮಾಡಿದ್ದಾರೆ. ದೇವೇಗೌಡ, ಕುಮಾರಸ್ವಾಮಿ ಕುಟುಂಬ ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡ್ರಿ ಎಂಬುದು ಗೊತ್ತಿದೆ. ಎಲ್ಲವನ್ನೂ ದಾಖಲೆ ಸಮೇತ ಹೊರ ಹಾಕ್ತೀನಿ. ಅವರ ಹಗರಣಗಳ ಕುರಿತ ದಾಖಲೆಗಳನ್ನ ಸಂಜೆ 4ಗಂಟೆಗೆ ನಮ್ಮ ನಾಯಕರು  ಬಿಡುಗಡೆ ಮಾಡಲಿದ್ದಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪ ಅವರು ನನಗಿಂತಲೂ ಹಿರಿಯರು, ಪದ ಬಳಕೆಯ ಮೇಲೆ ಅವರು ಹಿಡಿತ ಸಾಧಿಸಬೇಕು. ಅಪ್ಪ ಮಕ್ಕಳು ಜೈಲಿಗೆ ಅಟ್ಟುವುದೇ ತಮ್ಮ ಉದ್ದೇಶ ಎಂದು ಈ ಹಿಂದೆ ಹೇಳಿದ್ದರು. ಆದರೆ ಹೋಗಿ ಬಂದವರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ನಮ್ಮ ಕುಟುಂಬವನ್ನು ಜೈಲಿಗೆ ಅಟ್ಟುವ ಕುರಿತು ಬಿಎಸ್ ವೈ ಮಾತನಾಡುತ್ತಿದ್ದಾರೆ. ಅದರೆ ಅವರು ಗಾಜಿನ ಮನೆಯಲ್ಲಿ ಕುಳಿತಿದ್ದೇನೆ ಎಂಬುದನ್ನು ಮರೆಯಬಾರದು. ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಎಸ್ವೈ, ನನ್ನ ಇತಿಮಿತಿ ಬಗ್ಗೆ ಏನೆಂದು ನನಗೆ ಗೊತ್ತಿದೆ. ಹದ್ದುಮೀರಿ ಮಾತನಾಡುತ್ತಿರುವವರು ನೀವು. ನಮ್ಮಲ್ಲಿ ಕೇಂದ್ರ ಸರ್ಕಾರದ ಅಧಿಕಾರವಿದೆ. ನಿಮ್ಮ ಯಾವ ಧಮ್ಕಿಗೂ ನಾನು ಹೆದರಲ್ಲ ಎಂದಿದ್ದಾರೆ.
 

Trending News