July 2022 Rashifal: ಈ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು ಈ ನಾಲ್ಕು ರಾಶಿಯವರು

July 2022 Rashifal:ಜುಲೈ ತಿಂಗಳಲ್ಲಿ ಅನೇಕ ವಿಶೇಷ ಯೋಗಗಳು ರೂಪುಗೊಳ್ಳಲಿವೆ. ಈ ತಿಂಗಳಲ್ಲಿ ಶ್ರಾವಣ ಮಾಸ ಪ್ರಾರಂಭವಾಗಲಿದೆ. ಶನಿ ಮತ್ತು ಗುರು  ಹಿಮ್ಮುಖ ಚಲನೆ ಆರಂಭಿಸಲಿದ್ದಾರೆ. ಮಾತ್ರವಲ್ಲ ಇನ್ನೂ ಕೆಲವು ಗ್ರಹಗಳು ರಾಶಿಯನ್ನು  ಬದಲಾಯಿಸಲಿವೆ. 

Written by - Ranjitha R K | Last Updated : Jul 1, 2022, 08:41 AM IST
  • ಜುಲೈ ತಿಂಗಳು ಬಹಳ ಮಹತ್ವದ್ದಾಗಿದೆ
  • ಜುಲೈನಲ್ಲಿ ಹಲವು ಪ್ರಮುಖ ಗ್ರಹಗಳ ಸ್ಥಾನ ಬದಲಾವಣೆ
  • ಶನಿ ಮತ್ತು ಗುರುವಿನ ಹಿಮ್ಮುಖ ಚಲನೆ ಆರಂಭವಾಗಲಿದೆ
July 2022 Rashifal: ಈ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ಭಾರೀ ಎಚ್ಚರಿಕೆಯಿಂದ ಇರಬೇಕು ಈ ನಾಲ್ಕು ರಾಶಿಯವರು title=
July 2022 Rashifal (file photo)

ಬೆಂಗಳೂರು : July 2022 Rashifal : ಧಾರ್ಮಿಕ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ಜುಲೈ ತಿಂಗಳು ಬಹಳ ಮಹತ್ವದ್ದಾಗಿದೆ. ಶಿವನಿಗೆ ಪ್ರಿಯವಾದ ಶ್ರಾವಣ ಮಾಸ ಈ ತಿಂಗಳಿನಿಂದ ಆರಂಭವಾಗಲಿದೆ.  ಇದಲ್ಲದೇ ಜುಲೈನಲ್ಲಿ ಹಲವು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಶನಿ ಮತ್ತು ಗುರುಗಳು ತಮ್ಮದೇ ಆದ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾರೆ. ಇದಲ್ಲದೇ ಬುಧ, ಶುಕ್ರ, ಶನಿ ರಾಶಿಯನ್ನು ಬದಲಾಯಿಸಲಿದ್ದಾರೆ. ಈ ಸಂದರ್ಭಗಳು 4 ರಾಶಿಯ ಜನರಿಗೆ ಹಣಕಾಸಿನ ಸಮಸ್ಯೆ ಎದುರಾಗಲಿದೆ. ಆರ್ಥಿಕ ನಷ್ಟ ಸಂಭವಿಸಲಿದೆ.  ಹಣಕಾಸಿನ ವಿಷಯದಲ್ಲಿ ಈ ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು.  

ಮೇಷ ರಾಶಿ : ಮೇಷ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಧನ ನಷ್ಟ ಉಂಟಾಗಬಹುದು. ಹೂಡಿಕೆ ಮಾಡಬೇಕಾದರೆ ಅಥವಾ ಯಾರಿಗಾದರೂ ಸಾಲ ನೀಡಬೇಕಾದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಕೈ ಸುಟ್ಟು ಕೊಳ್ಳಬೇಕಾದೀತು. ಆದಷ್ಟು ಹಣವನ್ನು ಉಳಿಸಲು ಪ್ರಯತ್ನಿಸುವುದು ಉತ್ತಮ. 

ಇದನ್ನೂ ಓದಿ : Money Plant Upay: ಮನಿ ಪ್ಲಾಂಟ್ ಗೆ ಈ ಒಂದು ವಸ್ತುವನ್ನು ಕಟ್ಟುವುದರಿಂದ, ಅದು ಹೆಸರಿಗೆ ತಕ್ಕಂತೆ ಫಲ ನೀಡಲಿದೆ

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಸದ್ಯಕ್ಕೆ ಎರಡೂವರೆ ಶನಿ ನಡೆಯುತ್ತಿದೆ. ಜುಲೈ 12 ರ ನಂತರ, ಶನಿ ಧೈಯ್ಯಾದಿಂದ ಈ ರಾಶಿಯವರಿಗೆ ಮುಕ್ತಿ ಸಿಗಲಿದೆ. ಈ ಮೂಲಕ ಶನಿಯ ಪ್ರಕೋಪದಿಂದ ಈ ರಾಶಿಯವರು ಹೊರ ಬರುತ್ತಾರೆ ಆದರೆ,  ಧನಹಾನಿಯಾಗುವ ಸಂಭವವಿದೆ.  

ಕನ್ಯಾ ರಾಶಿ : ಕನ್ಯಾ ರಾಶಿಯ ಜನರು ಜುಲೈ ತಿಂಗಳಲ್ಲಿ ಹಣ ನಷ್ಟ ಮತ್ತು ಅನಗತ್ಯ ಖರ್ಚುಗಳನ್ನು ಎದುರಿಸಬೇಕಾಗಬಹುದು. ಆದಾಯ ಹೆಚ್ಚಾಗುತ್ತದೆ ಆದರೆ ಎದುರಾಗುವ ವಿಪರೀತ ವೆಚ್ಚಗಳು ಬಜೆಟ್ ಅನ್ನು ಹಾಳುಮಾಡುತ್ತವೆ. ಆದ್ದರಿಂದ ಹಣದ ವಿಷಯದಲ್ಲಿ ಜಾಗರೂಕರಾಗಿರಿ. 

ಇದನ್ನೂ ಓದಿ : Chanakya Niti: ಈ ರೀತಿಯ ಮಹಿಳೆಯ ಸಾಂಗತ್ಯ ಜೀವನವನ್ನೇ ನರಕವನ್ನಾಗಿಸುತ್ತದೆ

ಮಕರ ರಾಶಿ : ಮಕರ ರಾಶಿಯವರಿಗೂ ಶನಿಯ  ಸಾಡೇಸಾತಿ ನಡೆಯುತ್ತಿದೆ. ನಡೆಯುತ್ತಿದೆ. ಆದರೆ ಜುಲೈ 12 ರಂದು ಶನಿಯು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭಗಳಲ್ಲಿ ಜಾಗರೂಕರಾಗಿರಬೇಕು. ಇಲ್ಲವಾದರೆ ಹಾನಿ ಮಾಡಬಹುದು. ವಿಶೇಷವಾಗಿ ಹಣದ ವಿಷಯದಲ್ಲಿ ಈ ರಾಶಿಯವರು ಜಾಗರೂಕರಾಗಿರಬೇಕು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News