Vastu Tips: ಮನೆಯ ಉತ್ತರ ದಿಕ್ಕಿಗೆ ಈ ವಿಶೇಷ ಗಿಡವನ್ನು ನೆಟ್ಟರೆ ಸಾಕಷ್ಟು ಹಣ ಮತ್ತು ಅದೃಷ್ಟ ಬರುತ್ತದೆ

ಬಹಳಷ್ಟು ಹಣ, ಸಂತೋಷ ಮತ್ತು ಸಮೃದ್ಧಿ ಮನೆಗೆ ಬರುವುದನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ನಿಮಗೂ ಹೆಚ್ಚು ಹಣ ಬೇಕಿದ್ದರೆ ಮನೆಯ ಉತ್ತರ ದಿಕ್ಕಿಗೆ ಈ ವಿಶೇಷವಾದ ಗಿಡವನ್ನು ಇಡಿ. ನೀವು ಶ್ರೀಮಂತರಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

Written by - Puttaraj K Alur | Last Updated : Feb 5, 2022, 07:05 AM IST
  • ತುಂಬಾ ಮಂಗಳಕರವೆಂದು ಪರಿಗಣಿಸಿರುವ ಈ ಸಸ್ಯವು ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ
  • ಮನೆಯ ಉತ್ತರ ದಿಕ್ಕಿಗೆ ಈ ವಿಶೇಷ ಗಿಡವನ್ನು ನೆಟ್ಟ ತಕ್ಷಣ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ
  • ತಾಯಿ ಸರಸ್ವತಿಯ ಕೃಪೆ ಸದಾ ನಿಮ್ಮ ಮೇಲೆ ಇರುವಂತೆ ಮಾಡುವ ಇಂತಹ ಗಿಡ ಮನೆಯಲ್ಲಿ ಇರಬೇಕು
Vastu Tips: ಮನೆಯ ಉತ್ತರ ದಿಕ್ಕಿಗೆ ಈ ವಿಶೇಷ ಗಿಡವನ್ನು ನೆಟ್ಟರೆ ಸಾಕಷ್ಟು ಹಣ ಮತ್ತು ಅದೃಷ್ಟ ಬರುತ್ತದೆ title=
ಈ ಗಿಡ ನೆಟ್ಟ ತಕ್ಷಣ ಅದೃಷ್ಟ ಹೊಳೆಯುತ್ತದೆ

ನವದೆಹಲಿ: ಶ್ರೀಮಂತರ ಕೆಲವು ಅಭ್ಯಾಸಗಳಂತೆ ಜಾತಕದಲ್ಲಿ ಕೆಲವು ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಅದೇ ರೀತಿ ಅವರ ಮನೆಗಳಲ್ಲಿನ ಕೆಲವು ವಿಶೇಷತೆಗಳೂ ಇದೇ ರೀತಿ ಇರುತ್ತವೆ. ಈ ವಿಷಯಗಳು ವಾಸ್ತುಗೆ ಸಂಬಂಧಿಸಿವೆ ಮತ್ತು ಅವುಗಳಿಂದ ಬರುವ ಧನಾತ್ಮಕತೆಯು ಈ ಜನರನ್ನು ಯಶಸ್ವಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಶ್ರೀಮಂತರ ಮನೆಗಳಲ್ಲಿ ಕಂಡುಬರುವ ಕೆಲವು ಸಸ್ಯಗಳು(Morpankhi Plant) ಈ ವಿಶೇಷ ವಿಷಯಗಳಲ್ಲಿ ಸೇರಿವೆ. ಈ ಸಸ್ಯಗಳು ತುಂಬಾ ಮಂಗಳಕರವಾಗಿದ್ದು, ಮನೆಯ ಆರಣದಲ್ಲಿದ್ದರೆ ಬಹಳಷ್ಟು ಹಣ, ಪ್ರತಿಷ್ಠೆ, ಯಶಸ್ಸು ಬರುತ್ತದೆ ಎಂದು ನಂಬಲಾಗಿದೆ. ಇಂದು ನಾವು ಅಂತಹ ಒಂದು ಸಸ್ಯ(Vastu Tips For Earning Money)ದ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದನ್ನು ಹಣದ ವಿಷಯದಲ್ಲಿ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಗಿಡ ನೆಟ್ಟ ತಕ್ಷಣ ಅದೃಷ್ಟ ಹೊಳೆಯುತ್ತದೆ

ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ ತಾಯಿ ಲಕ್ಷ್ಮಿದೇವಿ ಮತ್ತು ತಾಯಿ ಸರಸ್ವತಿ ಇಬ್ಬರಿಂದ ಆಶೀರ್ವದಿಸಲ್ಪಟ್ಟ ಜನರು ಮಾತ್ರ ಜೀವನದಲ್ಲಿ ಎತ್ತರಕ್ಕೆ ತಲುಪುತ್ತಾರೆ ಮತ್ತು ಯಾವಾಗಲೂ ಪ್ರಾಬಲ್ಯ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯು ಬುದ್ಧಿವಂತನಾಗಿದ್ದರೆ ಆತ ಹಣ ಗಳಿಸಲು ಹಲವಾರು ಮಾರ್ಗಗಳನ್ನು ಕಂಡುಕೊಳ್ಳುತ್ತಾನೆ. ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಬಳಸಿಕೊಂಡು ಆತ ಆ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾನೆ. ಆದುದರಿಂದ ತಾಯಿ ಸರಸ್ವತಿಯ ಕೃಪೆ ಸದಾ ನಿಮ್ಮ ಮೇಲೆ ಇರುವಂತೆ ಮಾಡುವ ಇಂತಹ ಗಿಡ(Benefits Of Morepankhi) ಮನೆಯಲ್ಲಿ ಇರಬೇಕು. ಈ ಸಸ್ಯವು ನವಿಲು ಗರಿ ಸಸ್ಯ(Peacock Plant)ವಾಗಿದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಕಲಿಕೆಯ ಸಸ್ಯ ಎಂದೂ ಕರೆಯುತ್ತಾರೆ. ಅದಕ್ಕಾಗಿಯೇ ಅನೇಕರು ಅದನ್ನು ಪುಸ್ತಕಗಳಲ್ಲಿಯೂ ಇಡುತ್ತಾರೆ. ಮತ್ತೊಂದೆಡೆ ಶ್ರೀಮಂತರು ಈ ಸಸ್ಯವನ್ನು ತಮ್ಮ ಮನೆಯಲ್ಲಿ ನೆಡುತ್ತಾರೆ. ಇದರ ಸಕಾರಾತ್ಮಕತೆಯ ಪರಿಣಾಮದಿಂದ ಸರಿಯಾದ ನಿರ್ಧಾರವನ್ನು ಬಹುಬೇಗನೆ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Goddess Laxmi : ನೀವು ಮಾಡುವ ಈ ತಪ್ಪುಗಳಿಂದ ನಿಮ್ಮ ಮನೆಯಲ್ಲಿ ನಿಲ್ಲುವುದಿಲ್ಲ ಲಕ್ಷ್ಮಿದೇವಿ!

ಈ ದಿಕ್ಕಿಗೆ ಇಟ್ಟ ತಕ್ಷಣ ಹಣದ ಮಳೆಯಾಗುತ್ತದೆ

ಮನೆಯ ಉತ್ತರ ದಿಕ್ಕಿಗೆ ಈ ವಿಶೇಷ ಗಿಡವನ್ನು ನೆಟ್ಟ ತಕ್ಷಣ ವ್ಯಕ್ತಿಯ ಅದೃಷ್ಟವೇ(Vastu Tips For Money) ಬದಲಾಗುತ್ತದೆ. ಅವನ ಬುದ್ಧಿವಂತಿಕೆ ಮತ್ತು ಚಾತುರ್ಯದಿಂದ ಎಲ್ಲವೂ ಸುಲಭವಾಗುತ್ತದೆ. ಅವನು ಬಹಳಷ್ಟು ಹಣವನ್ನು ಪಡೆಯಲು ಪ್ರಾರಂಭಿಸುತ್ತಾನೆ. ಈ ಸಸ್ಯವನ್ನು ಒಂದು ಪಾತ್ರೆಯಲ್ಲಿ ನೆಡಬಹುದು. ಕಾಲಕಾಲಕ್ಕೆ ಅದನ್ನು ಟ್ರಿಮ್ ಮಾಡುವುದರಿಂದ ಮತ್ತು ಅದನ್ನು ಅಂದ ಮಾಡಿಕೊಳ್ಳುವ ಮೂಲಕ ಇದು ನಿಮ್ಮ ಮನೆ-ತೋಟದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಇದನ್ನೂ ಓದಿ: Vastu Tips: ಮನೆಯಲ್ಲಿ ಈ ಪ್ರಾಣಿ ಉಪಸ್ಥಿತಿಯಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News