ಧರ್ಮ ಒಡೆದ ಕ್ರೂರ ಮುಖ್ಯಮಂತ್ರಿ ಸಿದ್ದರಾಮಯ್ಯ: ಶೋಭಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತಕ್ಕೊಸ್ಕರ ಧರ್ಮ ಒಡೆದ ಕ್ರೂರಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

Last Updated : Apr 20, 2018, 03:04 PM IST
ಧರ್ಮ ಒಡೆದ ಕ್ರೂರ ಮುಖ್ಯಮಂತ್ರಿ ಸಿದ್ದರಾಮಯ್ಯ: ಶೋಭಾ  title=

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಓಲೈಸಲು ಟಿಪ್ಪು ಜಯಂತಿ ಮಾಡಿದವರು, ಮತಕ್ಕೊಸ್ಕರ ಧರ್ಮ ಒಡೆದ ಕ್ರೂರಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಕರ್ನಾಟಕದಲ್ಲಿ ಬಹಳಷ್ಟು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ ಯಾರೂ ಟಿಪ್ಪು ಜಯಂತಿ ಬಗ್ಗೆ ಆಲೋಚಿಸಿರಲಿಲ್ಲ. ಆದರೆ ರಾಜಕಿಯಕ್ಕೊಸ್ಕರ, ಅಲ್ಪಸಂಖ್ಯಾತರ ಮತ ಗಳಿಸುವ ದುರಾಲೋಚನೆಯಿಂದ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದರಲ್ಲದೆ, ಜಾತಿ, ಧರ್ಮ ಒಡೆದರು ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿಯ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ; ಸತ್ಯ-ಸುಳ್ಳು, ಧರ್ಮ-ಅಧರ್ಮ, ಅಷ್ಟೇ ಅಲ್ಲ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಮಹಾ ಯುದ್ಧ. ಈಗಾಗಲೇ ಚುನಾವಣಾ ಸಮರ ಆರಂಭವಾಗಿದೆ. ನಮ್ಮ ಗೆಲುವು ಖಚಿತ ಎಂದು ಶೋಭಾ ಕರಂದ್ಲಾಜೆ ಹೇಳಿದರು.

Trending News