ಸಂಸತ್ ಸಮಯ ವ್ಯರ್ಥ; ಏಪ್ರಿಲ್ 12ರಿಂದ ಬಿಜೆಪಿ ಉಪವಾಸ ಸತ್ಯಾಗ್ರಹ

     

Last Updated : Apr 6, 2018, 07:10 PM IST
ಸಂಸತ್ ಸಮಯ ವ್ಯರ್ಥ; ಏಪ್ರಿಲ್ 12ರಿಂದ ಬಿಜೆಪಿ ಉಪವಾಸ ಸತ್ಯಾಗ್ರಹ  title=

ನವದೆಹಲಿ: ಬಜೆಟ್ ಅಧಿವೇಶನ ಎರಡನೇ ಹಂತದ ಸಮಯ ವ್ಯರ್ಥವಾಗಿದ್ದರಿಂದ ಬಿಜೆಪಿಯು ಏಪ್ರಿಲ್ 12 ರಿಂದ ಅದು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದೆ.ಈ ಸಂಸತ್ತಿನ ಸಮಯ ಹರಣಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವೆಂದು ಅದು ತಿಳಿಸಿದೆ.

ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಂಸದ ವ್ಯವಹಾರಗಳ ಸಚಿವ ಅನಂತ್ ಕುಮಾರ್  ಈ ಬಾರಿಯ ಲೋಕಸಭಾದ ಸರಾಸರಿ 23 ಹಾಗೂ ರಾಜ್ಯಸಭಾ 28 ರಷ್ಟು ಇದೆ ಎಂದು ತಿಳಿಸಿದರು.

ಬಜೆಟ್ ಅಧಿವೇಶನ ಎರಡನೆಯ ಹಂತವು ಕಾಂಗ್ರೆಸ್ ನ ಮನೋಭಾವ ಮತ್ತು ತಂತ್ರದ ಫಲವಾಗಿ ಸುಲಭವಾಗಿ ನಡೆಯಲು ಸಾಧ್ಯವಾಗಿಲ್ಲ, ಆದ್ದರಿಂದ ಏಪ್ರಿಲ್ 12 ರಂದು ಬಿಜೆಪಿಯ ಎಲ್ಲಾ ಸಂಸದರು ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. 

Trending News