ಸಲ್ಮಾನ್‌ ಜೀವ ಬೆದರಿಕೆ ಬಳಿಕ.. ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್‌ ಮುಂದಿನ ಟಾರ್ಗೆಟ್‌ ..?

ಸಲ್ಮಾನ್ ಖಾನ್‌ಗೆ ಬರುತ್ತಿರುವ ಬೆದರಿಕೆ ಕರೆಗಳ ಮಧ್ಯೆ  ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಆತಂಕ ಹೆಚ್ಚಾಗಿದೆ. 

Written by - Chetana Devarmani | Last Updated : Oct 21, 2024, 12:39 PM IST
  • ಸಲ್ಮಾನ್‌ ಖಾನ್‌ ಜೀವ ಬೆದರಿಕೆ
  • ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ!
  • ಬಿಷ್ಣೋಯಿ ಗ್ಯಾಂಗ್‌ ಮುಂದಿನ ಟಾರ್ಗೆಟ್‌ ..?
ಸಲ್ಮಾನ್‌ ಜೀವ ಬೆದರಿಕೆ ಬಳಿಕ.. ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಹೆಚ್ಚಾದ ಆತಂಕ! ಬಿಷ್ಣೋಯಿ ಗ್ಯಾಂಗ್‌ ಮುಂದಿನ ಟಾರ್ಗೆಟ್‌ ..? title=

ಸಲ್ಮಾನ್ ಖಾನ್ ಗೆ ಬಾಲಿವುಡ್ ನಲ್ಲಿ ತುಂಬಾ ಕ್ರೇಜ್ ಇದೆ. ಸದ್ಯ ಹಿಂದಿ ಚಿತ್ರರಂಗದ ಸ್ಟಾರ್ ಹೀರೋಗಳಲ್ಲಿ ಸಲ್ಮಾನ್ ಕೂಡ ಒಬ್ಬರು. ಮತ್ತೊಂದೆಡೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಲಾಗಿದೆ. ಪೊಲೀಸರಿಂದ ಹಿಡಿದು ಅಂಗರಕ್ಷಕರವರೆಗೆ ಸಲ್ಮಾನ್ ಖಾನ್‌ ಅವರಿಗೆ ಸಾಕಷ್ಟು ಭದ್ರತೆ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್‌ಗೆ ಬರುತ್ತಿರುವ ಬೆದರಿಕೆ ಕರೆಗಳ ಮಧ್ಯೆ  ಸುದೀಪ್‌ ಮತ್ತು ರಶ್ಮಿಕಾ ಫ್ಯಾನ್ಸ್‌ಗೆ ಆತಂಕ ಹೆಚ್ಚಾಗಿದೆ. 

26 ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಸಿನಿಮಾ ತಂಡ ರಾಜಸ್ಥಾನದಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಕೃಷ್ಣಮೃಗವನ್ನು ಭೇಟೆಯಾಡಿ ಕೊಂದಿದ್ದಾರೆ ಎಂಬ ಆರೋಪವಿದೆ. ಕೃಷ್ಣಮೃಗವನ್ನು ಬಿಷ್ಣೋಯಿ ಜನಾಂಗದವರು ದೇವರೆಂದು ಪೂಜಿಸುವುದು ವಾಡಿಕೆ. ತಮ್ಮ ದೇವರನ್ನು ಸಲ್ಮಾನ್ ಖಾನ್ ಕೊಂದಿದ್ದು ದೊಡ್ಡ ತಪ್ಪು. ಅವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹಲವು ಬಾರಿ ಕೊಲೆ ಬೆದರಿಕೆಗಳು ಬರುತ್ತವೆ.

ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಗಿಂತ ಇಷ್ಟು ವರ್ಷ ದೊಡ್ಡವರೇ ಐಶ್ವರ್ಯಾ ರೈ!! ಇವರಿಬ್ಬರ ವಯಸ್ಸಿನ ಅಂತರವೆಷ್ಟು ಗೊತ್ತಾ?

ಇತ್ತೀಚಿಗಷ್ಟೇ ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರ ಹತ್ಯೆ ನಡೆಯಿತು. ಈ ಕೊಲೆಯಲ್ಲಿ ಬಿಷ್ಣೋಯಿ ಗ್ಯಾಂಗ್‌ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು. ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಎದೆಯಲ್ಲಿ ನಡುಕ ಶುರುವಾಗಿದೆ. ಸಲ್ಮಾನ್‌ ಖಾನ್‌ಗೆ Y+ ಭದ್ರತೆ ಸಹ ನೀಡಲಾಗಿದೆ. ಸಲ್ಮಾನ್ ಖಾನ್‌ಗೆ ಯಾರೆಲ್ಲಾ ಸಹಾಯ ಮಾಡುವರೋ ಅವರನ್ನೆಲ್ಲ ಒಂದು ಗತಿ ಕಾಣಿಸುವುದಾಗಿ ಬಿಷ್ಣೋಯಿ ಗ್ಯಾಂಗ್ ಹೇಳಿದೆ ಎಂದು ವರದಿಯಾಗಿತ್ತು.

ಬಾಬಾ ಸಿದ್ಧಿಕಿ ಕೂಡ ಸಲ್ಮಾನ್‌ ಖಾನ್‌ ಆಪ್ತರಾಗಿದ್ದರು. ಈ ಬೆನ್ನಲ್ಲೇ ಸಲ್ಮಾನ್‌ ಖಾನ್‌ ಆಪ್ತರ ಲಿಸ್ಟ್‌ನಲ್ಲಿ ಇರುವವರಿಗೆ ಭಯ ಹುಟ್ಟಿದೆ. ಸಲ್ಮಾನ್ ಖಾನ್ ಆಪ್ತರ ಲಿಸ್ಟ್‌ನಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ ಕೂಡ ಇದ್ದಾರೆ. ಇದು ಅನೇಕರಿಗೆ ಗೊತ್ತಿರುವ ಸಂಗತಿ.

ಸಲ್ಮಾನ್ ಖಾನ್ ಮುಂಬರುವ ಸಿನಿಮಾ 'ಸಿಕಂದರ್' ಚಿತ್ರದಲ್ಲಿ ಕರ್ನಾಟಕದವರಾದ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸುದೀಪ್‌ ಹಾಗೂ ರಶ್ಮಿಕಾ ಇಬ್ಬರೂ ಒಂದಲ್ಲ ಒಂದು ರೀತಿ ಸಲ್ಮಾನ್‌ ಖಾನ್‌ ಗೆ ಹತ್ತಿರದವರೇ ಆಗುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸುದೀಪ್‌ ಹಾಗೂ ರಶ್ಮಿಕಾ ಫ್ಯಾನ್ಸ್‌ ಆತಂಕ ಹರಹಾಕುತ್ತಿದ್ದಾರೆ. 'ಸುದೀಪ್ ಸರ್, ಹುಶಾರು.., ರಶ್ಮಿಕಾ ಮೇಡಂ, ಬಿ ಕೇರ್‌ಫುಲ್ ಪ್ಲೀಸ್.. ' ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  ಕನ್ನಡ ಬಿಗ್‌ ಬಾಸ್‌ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ.. ಮೂರನೇ ವಾರಕ್ಕೆ ಬಿಗ್‌ ಶಾಕ್‌ !!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News