ಬೋನಿಗೆ ಬಿದ್ದ ಚಿರತೆ: ಎರಡು ತಿಂಗಳ‌ ಬಳಿಕ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು...

ಮಲಕನಕೊಪ್ಪ, ತಬಕದಹೊನ್ನಳ್ಳಿ, ಮುಕ್ಕಲ, ಸುತ್ತಮುತ್ತಲಿನ ಗ್ರಾಮಗಳ ಜಮೀನು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. 

Written by - Yashaswini V | Last Updated : Oct 10, 2024, 02:20 PM IST
  • ಮಲಕನಕೊಪ್ಪ ಗ್ರಾಮದ ಜಮೀನಿನ ಮನೆಯಲ್ಲಿ ಕಟ್ಟಿದ್ದ ಸಾಕು ನಾಯಿಯನ್ನು ತಿಂದಿದ್ದ ಚಿರತೆ
  • ತಬಕದಹೊನ್ನಳ್ಳಿ ಗ್ರಾಮದ ಜಾನುವಾರ ಮೇಲೆ ದಾಳಿ ಮಾಡಿತ್ತು.
  • ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯಿಂದ ಚಿರತೆ ಸೆರೆಗಾಗಿ ಅಲ್ಲಲ್ಲಿ ಬೋನು ಅಳವಡಿಸಲಾಗಿತ್ತು.
ಬೋನಿಗೆ ಬಿದ್ದ ಚಿರತೆ: ಎರಡು ತಿಂಗಳ‌ ಬಳಿಕ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು... title=

ಹುಬ್ಬಳ್ಳಿ: ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತಬಕದಹೊನ್ನಳ್ಳಿ ಹಾಗೂ ಬೀರವಳ್ಳಿ ಗ್ರಾಮದ ಹೊರವಲಯದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಬುಧವಾರ (ಅಕ್ಟೋಬರ್ 09)  ಬೆಳಿಗ್ಗೆ ಸೆರೆಯಾಗಿದೆ.

ಮಲಕನಕೊಪ್ಪ, ತಬಕದಹೊನ್ನಳ್ಳಿ, ಮುಕ್ಕಲ, ಸುತ್ತಮುತ್ತಲಿನ ಗ್ರಾಮಗಳ ಜಮೀನು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಇದರಿಂದ ರೈತರು ಹಾಗೂ ಜಾನುವಾರ ಮೇಯಿಸಲು ಹೋಗುವವರು ಭಯಭೀತರಾಗಿದ್ದರು.

ಇದನ್ನೂ ಓದಿ- ಸಫಾರಿ ವೇಳೆ ಬಸ್ ಕಿಟಕಿ ಮೇಲೆಗರಿದ ಚಿರತೆ, ಹೌಹಾರಿದ ಪ್ರವಾಸಿಗಳು: ವಿಡಿಯೋ ವೈರಲ್

ಮಲಕನಕೊಪ್ಪ ಗ್ರಾಮದ ಜಮೀನಿನ ಮನೆಯಲ್ಲಿ ಕಟ್ಟಿದ್ದ ಸಾಕು ನಾಯಿಯನ್ನು ತಿಂದಿದ್ದ ಚಿರತೆ, ತಬಕದಹೊನ್ನಳ್ಳಿ ಗ್ರಾಮದ ಜಾನುವಾರ ಮೇಲೆ ದಾಳಿ ಮಾಡಿತ್ತು.

ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯಿಂದ ಚಿರತೆ ಸೆರೆಗಾಗಿ ಅಲ್ಲಲ್ಲಿ ಬೋನು ಅಳವಡಿಸಲಾಗಿತ್ತು. ಆದ್ರೆ ಚಿರತೆ  ಬೋನಿಗೆ ಬಿದ್ದಿರಲಿಲ್ಲ. ನಿರಂತರ ಕಾರ್ಯಾಚರಣೆ ನಡೆಸಿದ ಪರಿಣಾಮ ಚಿರತೆ ಸೆರೆಯಾಗಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಗಳಾದ ಕೆ.ಎಂ.ಬೇವಿನಕಟ್ಟಿ, ಮಂಜು ನಾಥ ಉಣಕಲ್ಲ, ಅರಣ್ಯಾಧಿಕಾರಿ ಮುಸಿನ್ ಬಿ., ಮತ್ತು ಸಿಬ್ಬಂದಿ ಇದ್ದರು. 

ಇದನ್ನೂ ಓದಿ- ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ: ಹಂದಿ ಬೇಟೆಗಾಗಿ ಬಂದು ನವಿಲು ಕೊಂದು ಪರಾರಿ, ರೈತರಲ್ಲಿ ಆತಂಕ

ಖಚಿತ ಮಾಹಿತಿ ಮೇರೆಗೆ ಮೂರು ದಿನಗಳ ಹಿಂದೆ ತಬಕಹೊನ್ನಳ್ಳಿ ಗ್ರಾಮದ ಬಳಿ ಬೋನು ಅಳವಡಿಸಲಾಗಿತ್ತು. ಸದ್ಯ ಚಿರತೆಯನ್ನು ನಿರ್ಜನ ಪ್ರದೇಶದಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತಿದೆ. ಮೇಲಧಿಕಾರಿಗಳ ನಂತರ ನಿರ್ದೇಶನದಂತೆ ಕಾಡಿನಲ್ಲಿ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಅರುಣ್ ಅಷ್ಟಗಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News