ಈ ಐದು ರೋಗಗಳನ್ನು ಶಾಶ್ವತವಾಗಿ ಗುಣಪಡಿಸಬೇಕೆಂದರೆ ಬೆಲ್ಲವೇ ಮದ್ದು ! ಹೀಗೆ ಸೇವಿಸಿದರೆ ಮಾತ್ರ !

ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸುವ ಮೂಲಕ ಅನೇಕ ಆರೋಗ್ಯ ಸಂಬಂಧಿತ ಅಸ್ವಸ್ಥತೆಗಳನ್ನು ಗುಣಪಡಿಸಬಹುದು.   

Written by - Ranjitha R K | Last Updated : Oct 3, 2024, 01:18 PM IST
  • ಬೆಲ್ಲ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ
  • ಬೆಲ್ಲ ಸ್ವಭಾವದಲ್ಲಿ ಬಿಸಿಯಾಗಿರುತ್ತದೆ.
  • ಬೆಲ್ಲದಿಂದ ತಯಾರಿಸಿದ ಕಷಾಯ ಆರೋಗ್ಯಕರವಾಗಿದೆ
ಈ ಐದು ರೋಗಗಳನ್ನು ಶಾಶ್ವತವಾಗಿ ಗುಣಪಡಿಸಬೇಕೆಂದರೆ ಬೆಲ್ಲವೇ ಮದ್ದು ! ಹೀಗೆ ಸೇವಿಸಿದರೆ ಮಾತ್ರ ! title=

ಬೆಂಗಳೂರು : ಬೆಲ್ಲ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.ಬೆಲ್ಲ ಸ್ವಭಾವದಲ್ಲಿ ಬಿಸಿಯಾಗಿರುತ್ತದೆ.ಇದರಿಂದಾಗಿ ಶೀತ ಮತ್ತು ಕೆಮ್ಮಿನ ಸಮಸ್ಯೆಗಳನ್ನು ನಿವಾರಿಸಬಹುದು.ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಅನುಕೂಲಕರವಾಗಿದೆ. 

ರಕ್ತಹೀನತೆಯ ಸಮಸ್ಯೆ ನಿವಾರಣೆ :
ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು,ಬೆಲ್ಲದ ಕಷಾಯವನ್ನು ಕುಡಿಯಬಹುದು.ಬೆಲ್ಲವು ಉತ್ತಮ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ.ಇದು ರಕ್ತಹೀನತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.ಇದಲ್ಲದೆ,ಇದು ರಕ್ತವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.  

ಇದನ್ನೂ ಓದಿ : Home Remedies: ಮಧುಮೇಹ ನಿಯಂತ್ರಣಕ್ಕೆ ಬೇವಿನ ಸೊಪ್ಪಿನ ರಸದ ಜೊತೆ ಈ ಪದಾರ್ಥ ಬಳಸಿ, ಆಗ ಈ ಚಮತ್ಕಾರ ನೋಡಿ..!

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ : 
ದೇಹದ ಶಕ್ತಿಯನ್ನು ಹೆಚ್ಚಿಸಲು ಬೆಲ್ಲದ ಕಷಾಯವನ್ನು ಕುಡಿಯಬಹುದು.ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಬಹುದು.ಇದರಿಂದ ದೇಹದ ಎನರ್ಜಿಯನ್ನು  ಹೆಚ್ಚಿಸಬಹುದು.ಇದು ದೇಹದಲ್ಲಿನ ಆಯಾಸವನ್ನು ಕಡಿಮೆ ಮಾಡುವ ಮೂಲಕ ಶಕ್ತಿಯನ್ನು ಹೆಚ್ಚಿಸುತ್ತದೆ.  

ದೇಹದ ತೂಕವನ್ನು ಕಡಿಮೆ ಮಾಡುತ್ತದೆ : 
ಬೆಲ್ಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.ಇದು ಚಯಾಪಚಯವನ್ನು ಹೆಚ್ಚಿಸುತ್ತದೆ.  ಇದರಿಂದಾಗಿ ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.ನೀವು ತೂಕ ಇಳಿಸಿಕೊಳ್ಳುವುದಾದರೆ ಬೆಲ್ಲದಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು.

ಮೂಳೆಗಳನ್ನು ಸದೃಢಗೊಳಿಸಬಹುದು :   
ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ಮೂಳೆಗಳನ್ನು ಸದೃಢಗೊಳಿಸಬಹುದು.ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತದೆ.  ಇದು ಮೂಳೆಗಳ ಬಲವನ್ನು ಸುಧಾರಿಸುತ್ತದೆ.

ಇದನ್ನೂ ಓದಿ : ಈ ಕೆಂಪು ಹಣ್ಣು ಸೇವಿಸಿದರೆ ಸಾಕು ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಾರ್ಮಲ್ ಆಗುವುದು ! ದಿನಕ್ಕೊಂದು ತಿಂದು ನೋಡಿ !

ಶೀತ ಮತ್ತು ಕೆಮ್ಮಿನಿಂದನಿವಾರಣೆ :
ಬದಲಾಗುತ್ತಿರುವ ಋತುವಿನಲ್ಲಿ ಶೀತ ಮತ್ತು ಕೆಮ್ಮಿನಿಂದ ಬಳಲುವುದು ಸಾಮಾನ್ಯವಾಗಿದೆ.ಈ ಸಮಸ್ಯೆಯನ್ನು ಕಡಿಮೆ ಮಾಡಲು ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು.ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಬೆಲ್ಲದ ಕಷಾಯ ಮಾಡುವುದು ಹೇಗೆ ? : 
ಮೊದಲು ಬಾಣಲೆಯಲ್ಲಿ 2 ಕಪ್ ನೀರು ಹಾಕಿ 4 ರಿಂದ 5 ತುಳಸಿ ಎಲೆಗಳು, 1 ಇಂಚು ತುಂಡು ಶುಂಠಿ ಮತ್ತು ಕರಿಮೆಣಸು ಹಾಕಿ ಚೆನ್ನಾಗಿ ಕುದಿಸಿ.ನೀರಿನ ಬಣ್ಣ ಬದಲಾಗುತ್ತಿದ್ದ ಹಾಗೆ ಬೆಲ್ಲವನ್ನು ಸೇರಿಸಿ ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.ಇದು ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. 

(ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News