ಬೆಂಗಳೂರು: ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸದಿರುವ ಬಿಜೆಪಿಯವರು ನಿಜವಾದ ದೇಶದ್ರೋಹಿಗಳಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್ ಗಳ ಗುಚ್ಛ ಇಲ್ಲಿದೆ,
ಸಂವಿಧಾನ, ಪ್ರಜಾಪ್ರಭುತ್ವ ಗೌರವಿಸದ ಬಿಜೆಪಿಯವರು ನಿಜವಾದ ದೇಶದ್ರೋಹಿಗಳು. ಒಂದು ಕಡೆ ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಲೇ ಇನ್ನೊಂದು ಕಡೆ ದೇಶದ್ರೋಹದ ಕಾರ್ಯವನ್ನು ಮಾಡುತ್ತಾರೆ. ದೇಶದ ಬಡವರು, ಶೋಷಿತರು, ಮಹಿಳೆಯರು, ರೈತರ ಪರವಾಗಿರುವ ನಾವೇ ಭಾರತ ಮಾತೆಯ ನಿಜವಾದ ಮಕ್ಕಳು. ನಮ್ಮದು ಅವರಂತೆ ಢೋಂಗಿ ದೇಶಪ್ರೇಮವಲ್ಲ. 1/3#ಸಂವಿಧಾನಉಳಿಸಿ pic.twitter.com/G9sEIuskUe
— Siddaramaiah (@siddaramaiah) March 7, 2020
ಸಂವಿಧಾನ, ಪ್ರಜಾಪ್ರಭುತ್ವ ಗೌರವಿಸದ ಬಿಜೆಪಿಯವರು ನಿಜವಾದ ದೇಶದ್ರೋಹಿಗಳು. ಒಂದು ಕಡೆ ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಲೇ ಇನ್ನೊಂದು ಕಡೆ ದೇಶದ್ರೋಹದ ಕಾರ್ಯವನ್ನು ಮಾಡುತ್ತಾರೆ. ದೇಶದ ಬಡವರು, ಶೋಷಿತರು, ಮಹಿಳೆಯರು, ರೈತರ ಪರವಾಗಿರುವ ನಾವೇ ಭಾರತ ಮಾತೆಯ ನಿಜವಾದ ಮಕ್ಕಳು. ನಮ್ಮದು ಅವರಂತೆ ಢೋಂಗಿ ದೇಶಪ್ರೇಮವಲ್ಲ.
1955 ರಲ್ಲಿ ಭಾರತೀಯ ಪೌರತ್ವ ಕಾಯ್ದೆ ಜಾರಿಯಾದ ದಿನದಿಂದ ಇಂದಿನವರೆಗೆ ಈ ಕಾಯ್ದೆಗೆ 9 ತಿದ್ದುಪಡಿಗಳನ್ನು ಮಾಡಲಾಗಿದೆ. ಆ 9 ತಿದ್ದುಪಡಿಗಳಲ್ಲಿ ಯಾವೊಂದು ತಿದ್ದುಪಡಿಯೂ ಧರ್ಮವನ್ನು ಆಧರಿಸಿಲ್ಲ. ಈಗ ಬಿಜೆಪಿಯವರು ಮಾಡಿರುವ ತಿದ್ದುಪಡಿ ಧರ್ಮಾಧಾರಿತವಾಗಿದ್ದು, ಅದು ಸಂವಿಧಾನದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. 2/3#ಸಂವಿಧಾನಉಳಿಸಿ
— Siddaramaiah (@siddaramaiah) March 7, 2020
1955 ರಲ್ಲಿ ಭಾರತೀಯ ಪೌರತ್ವ ಕಾಯ್ದೆ ಜಾರಿಯಾದ ದಿನದಿಂದ ಇಂದಿನವರೆಗೆ ಈ ಕಾಯ್ದೆಗೆ 9 ತಿದ್ದುಪಡಿಗಳನ್ನು ಮಾಡಲಾಗಿದೆ. ಆ 9 ತಿದ್ದುಪಡಿಗಳಲ್ಲಿ ಯಾವೊಂದು ತಿದ್ದುಪಡಿಯೂ ಧರ್ಮವನ್ನು ಆಧರಿಸಿಲ್ಲ. ಈಗ ಬಿಜೆಪಿಯವರು ಮಾಡಿರುವ ತಿದ್ದುಪಡಿ ಧರ್ಮಾಧಾರಿತವಾಗಿದ್ದು, ಅದು ಸಂವಿಧಾನದ ಮೂಲ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ.
ಸಂವಿಧಾನದ ಪರವಾಗಿರುವವರು ಎಲ್ಲರೂ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಕತ್ತೊಗೆದಾಗ ಮಾತ್ರ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಇಲ್ಲದಿದ್ದರೆ ಜಾತಿ, ಧರ್ಮಗಳ ಆಧಾರದ ದೇಶ ಒಡೆದು, ಕೋಮುಗಲಭೆ, ಜನಾಂಗೀಯ ಘರ್ಷಣೆಗಳನ್ನು ಉಂಟುಮಾಡಿ, ಸರ್ವಜನಾಂಗದ ಶಾಂತಿಯ ತೋಟವಾದ ಭಾರತದ ಸಾಮರಸ್ಯವನ್ನು ಹಾಳುಮಾಡುತ್ತಾರೆ. 3/3#ಸಂವಿಧಾನಉಳಿಸಿ
— Siddaramaiah (@siddaramaiah) March 7, 2020
ಸಂವಿಧಾನದ ಪರವಾಗಿರುವವರು ಎಲ್ಲರೂ ಸೇರಿ ಬಿಜೆಪಿಯನ್ನು ಅಧಿಕಾರದಿಂದ ಕತ್ತೊಗೆದಾಗ ಮಾತ್ರ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಇಲ್ಲದಿದ್ದರೆ ಜಾತಿ, ಧರ್ಮಗಳ ಆಧಾರದ ದೇಶ ಒಡೆದು, ಕೋಮುಗಲಭೆ, ಜನಾಂಗೀಯ ಘರ್ಷಣೆಗಳನ್ನು ಉಂಟುಮಾಡಿ, ಸರ್ವಜನಾಂಗದ ಶಾಂತಿಯ ತೋಟವಾದ ಭಾರತದ ಸಾಮರಸ್ಯವನ್ನು ಹಾಳುಮಾಡುತ್ತಾರೆ.