Pariksha Pe Charcha: ಬಿಡುವಿಲ್ಲದ ಕೆಲಸದ ಹೊರತಾಗಿಯೂ ನೀವು ಹೇಗೆ ಒತ್ತಡ ರಹಿತರಾಗಿರುತ್ತೀರಿ?

ಹಿಮಾಚಲ ಪ್ರದೇಶದ ಆಯುಷ್ ಎಂಬ ವಿದ್ಯಾರ್ಥಿ 'ಪರೀಕ್ಷಾ ಪೇ ಚರ್ಚಾ' ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈ ಪ್ರಶ್ನೆಯನ್ನು ಕೇಳಲಿದ್ದಾರೆ.

Last Updated : Jan 20, 2020, 07:39 AM IST
Pariksha Pe Charcha: ಬಿಡುವಿಲ್ಲದ ಕೆಲಸದ ಹೊರತಾಗಿಯೂ ನೀವು ಹೇಗೆ ಒತ್ತಡ ರಹಿತರಾಗಿರುತ್ತೀರಿ? title=

ಧರ್ಮಶಾಲಾ (ಹಿಮಾಚಲ ಪ್ರದೇಶ): ಪಿಎಂ ಸರ್, ನೀವು ಬಿಡುವಿಲ್ಲದ ಕೆಲಸದ ಹೊರತಾಗಿಯೂ ನೀವು ಹೇಗೆ ಒತ್ತಡ ರಹಿತರಾಗಿರುತ್ತೀರಿ? ಎಂದು 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಲಿದ್ದಾರೆ. 

ಇಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಸಂವಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ದೇಶದಾದ್ಯಂತದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಒತ್ತಡ ಇಲ್ಲದೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. ಹಿಮಾಚಲ ಪ್ರದೇಶದ 10 ವಿದ್ಯಾರ್ಥಿಗಳನ್ನು 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಯೋಲಾದ ಆಯುಷ್ ಭಗೋತ್ರ ಕೂಡ ಒಬ್ಬರು.

'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಆನ್‌ಲೈನ್ ಪ್ರವೇಶದ ಮೂಲಕ ಆಯ್ಕೆ ಮಾಡಲಾಗಿದೆ, ಇದಕ್ಕಾಗಿ ವಿದ್ಯಾರ್ಥಿಗಳಿಗೆ ವಿಶೇಷ ವಿಷಯಗಳನ್ನು ನೀಡಲಾಯಿತು; ಇವುಗಳಿಗೆ ಉತ್ತರಿಸಿದ ನಂತರ, ಈ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯುಷ್ ಆರ್ಮಿ ಪಬ್ಲಿಕ್ ಸ್ಕೂಲ್ ಯೋಲ್ ಕ್ಯಾಂಟ್ ನ 10 ನೇ ತರಗತಿ ವಿದ್ಯಾರ್ಥಿ.

ಆಯುಷ್ ಅವರ ಪೋಷಕರ ಪ್ರಕಾರ, ಅವರ ಆಯ್ಕೆಯ ಬಗ್ಗೆ ಶಾಲೆಗೆ ತಿಳಿಸಲಾಯಿತು. ಜನವರಿ 17 ರಂದು ಆಯುಷ್ ತನ್ನ ಶಾಲಾ ಶಿಕ್ಷಕನೊಂದಿಗೆ ಪರ್ವಾನೂಗೆ ಹೋಗಲಿದ್ದು, ನಂತರ ದೆಹಲಿಗೆ ತೆರಳಲಿದ್ದಾರೆ. ಪರ್ವಾನೂ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ.

14 ವರ್ಷದ ಆಯುಷ್ ಅವರು ಪ್ರಧಾನ ಮಂತ್ರಿಯನ್ನು ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದಾರೆ. ಇನ್ನೊಂದೆಡೆ ಆಯುಷ್  ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಲ್ಲಿ ಸಂತೋಷದ ವಾತಾವರಣವೂ ಇದೆ. ಆಯುಷ್ ಪ್ರಕಾರ, ಪ್ರತಿಯೊಂದು ಕಾರ್ಯದಲ್ಲೂ, ಕುಟುಂಬ ಸದಸ್ಯರೊಂದಿಗೆ, ಅವನ ಸ್ನೇಹಿತರು ಸಹ ಅವರನ್ನು ಪ್ರೋತ್ಸಾಹಿಸುತ್ತಾರೆ ಎಂದರು. 

ನನ್ನ ಆಯ್ಕೆಗಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಯೋಲ್ ಕ್ಯಾಂಟ್ ನ ಆರ್ಮಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಆಯುಷ್ ಹೇಳುತ್ತಾರೆ. ನಾನು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಲು ಅವಕಾಶವನ್ನು ಪಡೆಯುತ್ತಿದ್ದೇನೆ, ಅಂತಹ ಪರಿಸ್ಥಿತಿಯಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ ಎಂದರು.

ಒಟ್ಟಾರೆಯಾಗಿ, 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮಕ್ಕೆ ಆಯ್ಕೆ ಮಾಡಿರುವುದಕ್ಕಾಗಿ ಹರ್ಷ ವ್ಯಕ್ತಪಡಿಸಿರುವ ವಿದ್ಯಾರ್ಥಿ ಆಯುಷ್ ಈ ಕಾರ್ಯಕ್ರಮದಲ್ಲಿ ತಾವೂ ಕೂಡ ಪ್ರಧಾನಮಂತ್ರಿಯವರಿಗೆ ಒಂದು ಪ್ರಶ್ನೆಯನ್ನು ಕೇಳುವುದಾಗಿ ಮಾಹಿತಿ ನೀಡಿದರು. ಪಿಎಂ ಸರ್, ಬಿಡುವಿಲ್ಲದ ನಿಮ್ಮ ಕೆಲಸದ ಹೊರತಾಗಿಯೂ ನೀವು ಹೇಗೆ ಒತ್ತಡ ಮುಕ್ತರಾಗಿರುತ್ತೀರಿ? ಎಂದು ಪ್ರಧಾನಿಯವರನ್ನು ಕೇಳಲು ಬಯಸುವುದಾಗಿ ತಿಳಿಸಿದ್ದಾರೆ.

Trending News