ಗಣರಾಜ್ಯೋತ್ಸವದಂದು ಚಂದನವನದಲ್ಲಿ ಹಬ್ಬ: ಆರು ಕನ್ನಡ ಸಿನಿಮಾಗಳ ಅಬ್ಬರ!

Sandalwood Movies: ಗಣರಾಜೋತ್ಸವದ ಸಂಭ್ರಮದಂದು ಆರು ಕನ್ನಡ ಸಿನಿಮಾಗಳು ರಿಲೀಸ್‌ ಆಗುತ್ತಾಯಿದೆ. ಆದರಿಂದ ಈ ವರ್ಷ ಜನವರಿ 26ಕ್ಕೆ ಪರ ಭಾಷೆ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಗಿದ್ದು, ಕನ್ನಡ ಸಿನಿಮಾಗಳ ಸಂಭ್ರಮ ಜೋರಾಗಿದೆ.

Written by - Zee Kannada News Desk | Last Updated : Jan 25, 2024, 01:13 PM IST
  • ಹಾಸ್ಯ ನಟ ಚಿಕ್ಕಣ್ಣ, ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಸಿನಿಮಾ, ರಾಜ್ಯದೆಲ್ಲೆಡೆ 26 ಕ್ಕೆ ರಿಲೀಸ್ ಆಗುತ್ತಿದೆ.
  • ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿರುವ ಕೇಸ್ ಆಫ್ ಕೊಂಡಾಣ ಸಹ ಗಣರಾಜ್ಯೋತ್ಸವಕ್ಕೆ ಬೆಳ್ಳಿತೆರೆ ಮೇಲೆ ಬರುತ್ತಾಯಿದೆ.
  • ಇನ್ನುಳಿದ ಪ್ರಶಸ್ತಿ ವಿಜೇತ ಸಿನಿಮಾಗಳಾದ ಕೋಳಿ ಎಸ್ರು ಮತ್ತು ಹದಿನೇಳೆಂಟು ಕೂಡ ಜನವರಿ 26ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಗಣರಾಜ್ಯೋತ್ಸವದಂದು ಚಂದನವನದಲ್ಲಿ ಹಬ್ಬ: ಆರು ಕನ್ನಡ ಸಿನಿಮಾಗಳ ಅಬ್ಬರ! title=

Kannada Movies Releasing On Republic Day: ಸ್ಯಾಂಡಲ್‌ವುಡ್‌ನಲ್ಲಿ ಈ ಬಾರಿ ಗಣರಾಜೋತ್ಸವದ ಸಂಭ್ರಮ ಜೋರಾಗಿಯೇ ಇದ್ದು, ಜನವರಿ 26 ರಂದು ಒಂದಲ್ಲ ಎರಡಲ್ಲ ಬರೋಬ್ಬರಿ  ಆರು ಸಿನಿಮಾಗಳು ರಿಲೀಸ್ ಆಗುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪರ ಭಾಷೆಯ ಸಿನಿಮಾಗಳ ಅಬ್ಬರ ಹೆಚ್ಚಾಗಿದ್ದು, ಆದರೆ ಗಣರಾಜೋತ್ಸವಕ್ಕೆ ಕನ್ನಡ ಚಿತ್ರಗಳ ಹವಾ ದುಪ್ಪಟ್ಟಾಗಿದೆ. ಈ ಆರು ಚಿತ್ರಗಳ ಲೆಕ್ಕದಲ್ಲಿ ಎರಡು ಪ್ರಶಸ್ತಿ ವಿಜೇತ ಸಿನಿಮಾಗಳೂ ಇದ್ದು, ಇನ್ನೂ ನಾಲ್ಕು ಚಿತ್ರಗಳು ಕಮರ್ಷಿಯಲ್ ಸಿನಿಮಾಗಳಾಗಿವೆ. 

ಕನ್ನಡದ ಹಾಸ್ಯ ನಟ ಚಿಕ್ಕಣ್ಣ, ಇದೇ ಮೊದಲ ಬಾರಿಗೆ ಹೀರೋ ಆಗಿ ನಟಿಸಿರುವ ಉಪಾಧ್ಯಕ್ಷ ಸಿನಿಮಾ, ರಾಜ್ಯದೆಲ್ಲೆಡೆ 26 ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಕಿರುತೆರೆಯ ನಟಿ ಮಲೈಕಾ ವಾಸುಪಾಲ್ ಜೋಡಿ ಆಗಿ ಅಭಿನಯಿಸಿದ್ದರೇ, ಡೈರೆಕ್ಟರ್ ಅನಿಲ್ ಕುಮಾರ್ ಸಿನಿಮಾಗೆ ಕಥೆ ಬರೆಯುವುದರ ಜೊತೆಗೆ ಆಕ್ಷನ್‌ ಕಟ್‌ ಹೇಳಿದ್ದಾರೆ.

ಇದನ್ನೂ ಓದಿ: ವೇಟ್‌ಲಾಸ್‌ ಮಾಡ್ಕೊಂಡ್ರಾ ಮೊಹಕ ತಾರೆ? ರಮ್ಯ ವರ್ಕೌಟ್ ವಿಡಿಯೋ ವೈರಲ್!

ದೂದ್ ಪೇಡ ದಿಗಂತ್, ಅಚ್ಯುತ್ ಕುಮಾರ್, ಲೂಸ್ ಮಾದ ಯೋಗಿ, ಹೀಗೆ ಬಹುದೊಡ್ಡ ತಾರಾಬಳಗವೇ ಇರುವ ಬ್ಯಾಚುಲರ್ ಪಾರ್ಟಿ ಚಿತ್ರ ಸಹ ಇದೇ ಜನವರಿ 26ಕ್ಕೆ ತೆರೆಕಾಣ್ತಾಯಿದೆ. ಈ ಸಿನಿಮಾಗೆ ಡೈರೆಕಟ್ರ್‌ ಅಭಿಜಿತ್ ಮಹೇಶ್ ನಿರ್ದೇಶನ ಮಾಡಿದ್ದು,  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿರುವ ಕೇಸ್ ಆಫ್ ಕೊಂಡಾಣ ಸಹ ಗಣರಾಜ್ಯೋತ್ಸವಕ್ಕೆ ಬೆಳ್ಳಿತೆರೆ ಮೇಲೆ ಬರುತ್ತಾಯಿದೆ. ಇದರಲ್ಲಿ ಜಾಕಿ ಭಾವನಾ ಮೆನನ್ ಕೂಡ ಅಭಿನಯಿಸಿದ್ದು, ಪತ್ರಕರ್ತ ಜೋಗಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ದೇವಿಪ್ರಸಾದ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ, ಡೈರೆಕ್ಷನ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: Pranitha Subhash: ಫೋಟೋಶೂಟ್‌ನಿಂದ ಫ್ಯಾನ್ಸ್‌ ನಿದ್ರೆಗೆಡಿಸಿದ ಕನ್ನಡದ ಮಿಲ್ಕಿ ಬ್ಯೂಟಿ!

ಚಂದನವನದ ನಟಿ ಅದಿತಿ ಪ್ರಭುದೇವ ನಟಿಸಿರುವ ಅಲೆಕ್ಸಾ ಅನ್ನೋ ಚಿತ್ರ ಕೂಡ ಇದೇ ತಿಂಗಳು 26ಕ್ಕೆ ರಿಲೀಸ್ ಆಗುತ್ತಿದ್ದು, ಈ ಚಿತ್ರಕ್ಕೆ ಜೀವ ಎಲ್‌.ಜೆ. ಆಕ್ಷನ್‌ ಮಾಡಿದ್ದಾರೆ. ಪವನ್ ತೇಜ್ ಈ ಚಿತ್ರದ ಹೀರೋ ಆಗಿದ್ದಾರೆ. ಈ ಚಿತ್ರದ ಬಗ್ಗೆನೂ ಒಂದು ನಿರೀಕ್ಷೆ ಇದೆ ಅಂತಲೇ ಹೇಳಬಹುದು.

ಇನ್ನುಳಿದ ಪ್ರಶಸ್ತಿ ವಿಜೇತ ಸಿನಿಮಾಗಳಾದ ಕೋಳಿ ಎಸ್ರು ಮತ್ತು ಹದಿನೇಳೆಂಟು ಕೂಡ ಜನವರಿ 26ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕೋಳಿ ಎಸ್ರು ಚಿತ್ರವನ್ನ ಚಂಪಾ ಶೆಟ್ಟಿ ಡೈರೆಕ್ಟರ್ ಮಾಡಿದ್ದರೇ, ಹದಿನೇಳೆಂಟು ಸಿನಿಮಾಗೆ ಪೃಥ್ವಿ ಕೊಣನೂರು  ಡೈರೆಕ್ಷನ್ ಮಾಡಿದ್ದಾರೆ. ಈ ಎರಡೂ ಸಿನಿಮಾಗಳು ವಿಶೇಷವಾಗಿದ್ದು, ಹಲವು ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News