ರೈತರ ಬದುಕಿಗೆ ಸಿಹಿ ನೀಡಬೇಕಿದ್ದ ಕಬ್ಬು ಕಹಿ..! ಸಚಿವರು ಡೋಂಟ್‌ಕೇರ್‌

Sugar Cane: ಕಬ್ಬು ಬೆಳೆದು ಬದುಕು ಸಿಹಿ ಮಾಡಿಕೊಳ್ಳಲು ಹೊರಟಿದ್ದ ರೈತರಿಗೆ ಕಹಿಯಾಗಿದೆ. ಪ್ಯಾಕ್ಟರಿಗೆ ಕಬ್ಬು ಕೊಟ್ಟು ಬಿಲ್ ಪಾವತಿಯಾಗದೆ ಹಾವೇರಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದಿಂದ ತತ್ತರಿಸಿರುವ ಕಬ್ಬು ಬೆಳೆಗಾರರಿಗೆ ಕಬ್ಬಿನ ಬಿಲ್ ಪವತಿಯಾಗದಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ..  

Written by - Savita M B | Last Updated : Jan 7, 2024, 05:28 PM IST
  • ಹಾವೇರಿಯ ಸಂಗೂರಿನಲ್ಲಿರುವ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ಜಿಎಂ ಶುಗರ್ಸ್‌ನವರು ಲೀಜ್ ಮೇಲೆ ಫ್ಯಾಕ್ಟರಿ ನಡೆಸುತ್ತಿದ್ದಾರೆ.
  • ಫ್ಯಾಕ್ಟರಿಗೆ ಕಬ್ಬು ಸಾಗಿಸಿ 45 ದಿನಗಳು ಕಳೆದರು ಫ್ಯಾಕ್ಟರಿಯವರು ಮಾತ್ರ ಇದುವರೆಗು ರೈತರಿಗೆ ಹಣ ಪಾವತಿಸಿಲ್ಲ.
ರೈತರ ಬದುಕಿಗೆ ಸಿಹಿ ನೀಡಬೇಕಿದ್ದ ಕಬ್ಬು ಕಹಿ..! ಸಚಿವರು ಡೋಂಟ್‌ಕೇರ್‌ title=

ಹಾವೇರಿಯ ಸಂಗೂರಿನಲ್ಲಿರುವ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯನ್ನ ಜಿಎಂ ಶುಗರ್ಸ್‌ನವರು ಲೀಜ್ ಮೇಲೆ  ಫ್ಯಾಕ್ಟರಿ ನಡೆಸುತ್ತಿದ್ದಾರೆ. ಇದೆ ಶುಗರ್ ಪ್ಯಾಕ್ಟರಿಗೆ ಕಬ್ಬು ಸಾಗಿಸಿದ್ದ ರೈತರು ಈಗ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಬರಗಾಲದಿಂದ ತತ್ತರಿಸಿ ಹೋಗಿರುವ ರೈತರು ಸಂಕಷ್ಟದ ನಡುವೆಯು ಕಬ್ಬು ಬೆಳೆದು ಫ್ಯಾಕ್ಟರಿಗೆ ಸಾಗಿಸಿದ್ದಾರೆ.

ಫ್ಯಾಕ್ಟರಿಗೆ ಕಬ್ಬು ಸಾಗಿಸಿ 45 ದಿನಗಳು ಕಳೆದರು ಫ್ಯಾಕ್ಟರಿಯವರು ಮಾತ್ರ ಇದುವರೆಗು ರೈತರಿಗೆ ಹಣ ಪಾವತಿಸಿಲ್ಲ. ಬರೊಬ್ಬರಿ 50 ಕೋಟಿಗೂ ಹೆಚ್ಚಿನ ಹಣವನ್ನ ಕಬ್ಬು ಸಾಗಿಸಿದ ರೈತರಿಗೆ ನೀಡುವುದು ಬಾಕಿ ಉಳಿಸಿಕೊಂಡಿದ್ದಾರೆ. ಬಿಲ್ ಪಾವತಿಸುವಂತೆ ರೈತರು ಮನವಿ ಮಾಡಿದ್ರು, ಹಣ ನೀಡದಿರೋದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ-ಪ್ರಧಾನಿ ನರೇಂದ್ರ ಮೋದಿಯವರು ತ್ರಿಬಲ್‌ ತಲಾಖ್‌ ನಿಷೇಧಿಸಿದ್ದಾರೆ

ಹಾವೇರಿ ಜಿಲ್ಲೆಯ 2700 ರೈತರು ಫ್ಯಾಕ್ಟರಿಗೆ ಕಬ್ಬು ಸಾಗಿಸಿದ್ದು, 1 ಲಕ್ಷ 90 ಸಾವಿರ ಟನ್ ಕಬ್ಬಿನ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಕಾಲಕ್ಕೆ ಕಬ್ಬಿನ ಬಿಲ್ ಪಾವತಿಯಾಗದಿರೋದು ಮತ್ತಷ್ಟು ಸಂಕಷ್ಟವನ್ನ ತಂದೊಡ್ಡಿದೆ. ಜಿಲ್ಲಾ ಉಸ್ತುವಾರಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಜಿಲ್ಲೆಯಲ್ಲಿಯೇ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ರು ಸಚಿವರು ನೆರವಿಗೆ ಬರುತ್ತಿಲ್ಲವೆಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ಸೋಮವಾರ ಅಂದ್ರೆ ನಾಳೆ ಹಾನಗಲ್ ಹಾವೇರಿ ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕೆ ರೈತರು ಸಿದ್ದರಾಗಿದ್ದಾರೆ..

ಒಟ್ಟಿನಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಉಸ್ತುವಾರಿ ಇರುವ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ರು ಸಚಿವರು ನೆರವಿಗೆ ಬರುತ್ತಿಲ್ಲ ಎನ್ನೋದು ರೈತರ ಆಕ್ರೋಶ. ಮತ್ತೊಂದೆಡೆ ಬಿಲ್ ಪಾವತಿಗಾಗಿ ಸೋಮವಾರದಿಂದ ರಸ್ತೆಗಿಳಿದು ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಬಿಲ್ ಪಾವತಿ‌ ಮಾಡ್ತಾರಾ. ಇಲ್ಲಾ ರೈತರ ನಾಳೆಯ ಪ್ರತಿಭಟನೆಗೆ ಹಾದಿ ಮಾಡಿಕೊಡಳ್ತಾರ ಅಂತಾ ಕಾದು ನೋಡಬೇಕಿದೆ..

ಇದನ್ನೂ ಓದಿ-ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದದ್ದು ಮನಮೋಹನ್‌ ಸಿಂಗ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News