Horoscope Today: ಈ ರಾಶಿಯವರು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು

Horoscope Today: ಈ ರಾಶಿಯವರು ಬುದ್ಧಿವಂತಿಕೆಯಿಂದ ನಿರ್ಧಾರ  ತೆಗೆದುಕೊಳ್ಳಬೇಕು. ತುಲಾ ರಾಶಿಯವರಿಗೆ ವೃತ್ತಿ ಬದಲಾವಣೆ ಸಾಧ್ಯತೆಯಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Dec 17, 2022, 05:42 AM IST
  • ಸಿಂಹ ರಾಶಿಯವರು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು
  • ವೃಶ್ಚಿಕ ರಾಶಿಯವರು ಕೋಪವನ್ನು ನಿಯಂತ್ರಿಸಿ, ಬೆಲ್ಲವನ್ನು ದಾನ ಮಾಡಿ
  • ಮಕರ ರಾಶಿಯವರಿಗೆ ಇಂದು ಶುಭ ದಿನವಾಗಿರುತ್ತದೆ, ಶೀಘ್ರವೇ ನಿಮಗೆ ಶುಭಸುದ್ದಿ ಸಿಗಲಿದೆ
Horoscope Today: ಈ ರಾಶಿಯವರು ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು title=
Horoscope Today (17-12-2022)

Astrology Today (17-12-2022): ಮೇಷ ರಾಶಿಯವರು ಸಾಲ ಕೊಟ್ಟ ಹಣ ಮುಳುಗಬಹುದು. ವೃಷಭ ರಾಶಿಯವರು ತರಾತುರಿಯಲ್ಲಿ ಏನನ್ನೂ ಮಾಡಬೇಡಿ. ಕರ್ಕಾಟಕ ರಾಶಿಯವರ ಸಂಬಂಧಗಳಲ್ಲಿ ತೊಂದರೆ ಉಂಟಾಗಬಹುದು.

ಮೇಷ ರಾಶಿ: ಮನೆಯಲ್ಲಿ ಹಿರಿಯರೊಂದಿಗೆ ಸಮಯ ಕಳೆಯಿರಿ. ಅಗತ್ಯವಿರುವ ಸಂಬಂಧಿಕರಿಗೆ ಸಹಾಯ ಮಾಡಿ. ಸಾಲ ಕೊಟ್ಟ ಹಣ ಮುಳುಗಬಹುದು. ಬಡ ಹುಡುಗಿಯ ಮದುವೆಗೆ ಸಹಾಯ ಮಾಡಿ.

ಅದೃಷ್ಟದ ಬಣ್ಣ- ನೇರಳೆ

ವೃಷಭ ರಾಶಿ: ನಿಮ್ಮ ಗುರುಗಳನ್ನು ಗೌರವಿಸಿ. ತರಾತುರಿಯಲ್ಲಿ ಏನನ್ನೂ ಮಾಡಬೇಡಿ. ಸಂಜೆಯೊಳಗೆ ಸಮಸ್ಯೆಗಳು ಬಗೆಹರಿಯಲಿವೆ. ಗಂಜಿಯನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ನೀಲಿ

ಮಿಥುನ ರಾಶಿ: ಸಮಯಕ್ಕೆ ಸರಿಯಾಗಿ ಕೆಲಸ ಮಾಡಲು ಅಭ್ಯಾಸ ಮಾಡಿಕೊಳ್ಳಿ. ಸಾಲ ಕೊಟ್ಟ ಹಣ ವಾಪಸ್ ಬರಲಿದೆ. ಅಗತ್ಯವಿರುವ ಮಕ್ಕಳಿಗೆ ಸಹಾಯ ಮಾಡಿ. ಕೇಸರ್ ಚಂದನ್ ದಾನ ಮಾಡಿ.

ಅದೃಷ್ಟದ ಬಣ್ಣ- ಹಳದಿ

ಕರ್ಕಾಟಕ ರಾಶಿ: ಸಂಬಂಧಗಳಲ್ಲಿ ತೊಂದರೆ ಉಂಟಾಗಬಹುದು. ಮುಂಜಾನೆ ಬೇಗ ಎದ್ದೇಳುವನ್ನು ರೂಢಿಸಿಕೊಳ್ಳಿರಿ. ಯಾರಿಗೂ ಸಾಲ ಕೊಡಬೇಡಿ. ಉದಯಿಸುತ್ತಿರುವ ಸೂರ್ಯನನ್ನು ವೀಕ್ಷಿಸಿ.

ಅದೃಷ್ಟದ ಬಣ್ಣ- ಆಕಾಶ ನೀಲಿ

ಇದನ್ನೂ ಓದಿ: New Year 2023: ಹೊಸ ವರ್ಷದ ಮೊದಲ ದಿನವೇ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಯಾರಿಗೆ ಲಾಭ?

ಸಿಂಹ ರಾಶಿ: ಉಡುಗೊರೆಗಳನ್ನು ಸ್ವೀಕರಿಸುವಿರಿ. ಮೇಲಧಿಕಾರಿಯೊಂದಿಗೆ ಯಾವುದಾದರೂ ವಿವಾದ ಉಂಟಾಗಬಹುದು. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಬಿಳಿ ವಸ್ತುಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಕೆಂಪು

ಕನ್ಯಾ ರಾಶಿ: ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಮನೆಗೆ ಅತಿಥಿಗಳು ಬರಬಹುದು. ಸಾಲವಾಗಿ ಬೇರೆಯವರಿಗೆ ನೀಡಿರು ಹಣವನ್ನು ಸ್ವಲ್ಪ ಸಮಯದ ನಂತರ ಸಿಗುತ್ತದೆ. ಹಳದಿ ವಸ್ತುಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ - ಕಿತ್ತಳೆ

ತುಲಾ ರಾಶಿ: ನಿಮ್ಮ ಮನದಾಳದ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಆಹಾರಕ್ರಮವನ್ನು ನೋಡಿಕೊಳ್ಳಿ. ವೃತ್ತಿ ಬದಲಾವಣೆ ಸಾಧ್ಯತೆಯಿದೆ. ನಿರ್ಗತಿಕರಿಗೆ ಅನ್ನದಾನ ಮಾಡಿ.

ಅದೃಷ್ಟದ ಬಣ್ಣ- ಕೆಂಪು

ವೃಶ್ಚಿಕ ರಾಶಿ: ನಿಮ್ಮ ಕೋಪವನ್ನು ನಿಯಂತ್ರಿಸಿ. ಸಂಜೆಯವರೆಗೆ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಮನೆಯ ಉತ್ತರ ದಿಕ್ಕನ್ನು ಸ್ವಚ್ಛವಾಗಿಡಿ. ಬೆಲ್ಲವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಮರೂನ್

ಇದನ್ನೂ ಓದಿ: Vastu Tips : ಮನೆಯ ನಕಾರಾತ್ಮಕ ಶಕ್ತಿಗೆ ಕಾರಣ ಈ 5 ವಸ್ತುಗಳು, ಇಂದೇ ಹೊರ ಹಾಕಿ!

ಧನು ರಾಶಿ: ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬೇಕು. ಸಂಜೆಯೊಳಗೆ ಪ್ರಮುಖ ಕೆಲಸಗಳನ್ನು ಮುಗಿಸಿ. ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಅಗತ್ಯವಿರುವವರಿಗೆ ಔಷಧವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ನೇರಳೆ

ಮಕರ ರಾಶಿ: ಇಂದು ನಿಮಗೆ ಶುಭ ದಿನವಾಗಿರುತ್ತದೆ. ಯಾವುದೇ ತುರ್ತು ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಶೀಘ್ರವೇ ನಿಮಗೆ ಶುಭ ಸುದ್ದಿ ದೊರೆಯಲಿದೆ. ಸಿಹಿತಿಂಡಿಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ - ಗುಲಾಬಿ

ಕುಂಭ ರಾಶಿ: ನಿಮ್ಮ ಅಭಿಪ್ರಾಯವನ್ನು ಯಾರ ಮೇಲೂ ಬಲವಂತದಿಂದ ಹೇರಬೇಡಿ. ಇದು ನಿಮಗೆ ಅದೃಷ್ಟದ ದಿನವಾಗಿರುತ್ತದೆ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ವಸ್ತ್ರದಾನ ಮಾಡಿ.

ಅದೃಷ್ಟದ ಬಣ್ಣ - ಆಕಾಶ

ಮೀನ ರಾಶಿ: ಸುಳ್ಳನ್ನು ಹೆಚ್ಚು ಆಶ್ರಯಿಸಬೇಡಿ. ಬಹಳ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಯಾರಿಗಾದರೂ ಸಹಾಯ ಮಾಡಿ. ಪಕ್ಷಿಗಳಿಗೆ ಆಹಾರ ನೀಡಿ.

ಅದೃಷ್ಟದ ಬಣ್ಣ - ಓಚರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News