ದಿನಭವಿಷ್ಯ 21-11-2022: ದ್ವಾದಶ ರಾಶಿಗಳ ನಿತ್ಯ ಭವಿಷ್ಯ

Horoscope  21 November 2022:  ಇಂದಿನ ಪಂಚಾಂಗ:- ದಿನಾಂಕ- 21 ನವೆಂಬರ್ 2022, ವಾರ-ಸೋಮವಾರ, ತಿಥಿ-ದ್ವಾದಶಿ, ನಕ್ಷತ್ರ ಚಿತ್ತ, ಯೋಗ- ಆಯುಷ್ಮಾನ್, ಕರ್ಣ- ತೈತವ.  

Written by - Zee Kannada News Desk | Last Updated : Nov 21, 2022, 06:33 AM IST
  • ಮಿಥುನ ರಾಶಿಯವರಿಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ದಿನ.
  • ಸಿಂಹ ರಾಶಿಯವರು ಹಿರಿಯರೊಂದಿಗೆ ಸೌಜನ್ಯದಿಂದ ವರ್ತಿಸಿ.
  • ವೃಶ್ಚಿಕ ರಾಶಿಯವರಿಗೆ ನಿಮ್ಮ ವೃತ್ತಿ ರಂಗ ಹಾಗೂ ವೈಯಕ್ತಿಯ ಜೀವನ ಎರಡರಲ್ಲೂ ಒಳ್ಳೆಯ ಆಫರ್ ಬರುವ ಅವಕಾಶಗಳಿವೆ.
ದಿನಭವಿಷ್ಯ 21-11-2022:  ದ್ವಾದಶ ರಾಶಿಗಳ ನಿತ್ಯ ಭವಿಷ್ಯ  title=
Todays Horoscope

ದಿನಭವಿಷ್ಯ 21-11-2022 :    ಇಂದಿನ ಪಂಚಾಂಗ:- ದಿನಾಂಕ- 21 ನವೆಂಬರ್ 2022, ವಾರ-ಸೋಮವಾರ, ತಿಥಿ-ದ್ವಾದಶಿ, ನಕ್ಷತ್ರ ಚಿತ್ತ, ಯೋಗ- ಆಯುಷ್ಮಾನ್, ಕರ್ಣ- ತೈತವ. 
ಈ ದಿನದ ವಿಶೇಷತೆ:- ಇಂದು ಕೊನೆಯ ಕಾರ್ತಿಕ ಸೋಮವಾರ ಹಾಗೂ ಧನ್ವಂತರಿ ಜಯಂತಿ 

ಮೇಷ ರಾಶಿ: ಈ ರಾಶಿಯವರಿಗೆ ಈ ದಿನ ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರ ಸಂಪರ್ಕ ಸಾಧ್ಯತೆ. ಸ್ವಲ್ಪ ಕಳ್ಳಕಾಕರ ಕಾಟ ಕಾಡಬಹುದು ಎಚ್ಚರ.

ವೃಷಭ ರಾಶಿ: ಈ ರಾಶಿಯವರಿಗೆ ಸಣ್ಣ-ಪುಟ್ಟ ಕೀಟಗಳಿಂದ ತೊಂದರೆ. ಇದರಿಂದ ಇನ್ಫೆಕ್ಷನ್ ಆಗಬಹುದು, ಈ ಬಗ್ಗೆ ಎಚ್ಚರವಿರಲಿ.

ಮಿಥುನ ರಾಶಿ: ಈ ರಾಶಿಯವರಿಗೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ದಿನ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿಡಿ. ಇಲ್ಲದಿದ್ದರೆ, ಹಣ ಮತ್ತು ಹೆಣ್ಣಿನ ವಿಚಾರದಲ್ಲಿ ಆಕರ್ಷಣೆಗೆ ಒಳಗಾಗಿ ಯಾಮಾರುವ ಸಾಧ್ಯತೆ ಇರುತ್ತದೆ, ಹುಷಾರಾಗಿರಿ.

ಕರ್ಕಾಟಕ ರಾಶಿ: ಈ ರಾಶಿಯವರಿಗೆ ಹಳೇ ಪ್ರೇಮ ಪ್ರಕರಣಗಳು ಮತ್ತೆ ಕನೆಕ್ಟ್ ಆಗಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಿಮ್ಮ ಗೌಪ್ಯ ವಿಚಾರಗಳನ್ನು ಗೌಪ್ಯವಾಗಿಯೇ ಇಡಿ.

ಇದನ್ನೂ ಓದಿ- Rahu Gochar: 2023ರಲ್ಲಿ ಈ ರಾಶಿಯವರಿಗೆ ದಯೆ ತೋರಲಿದ್ದಾನೆ ರಾಹು

ಸಿಂಹ ರಾಶಿ: ಈ ರಾಶಿಯವರು ಹಿರಿಯರೊಂದಿಗೆ ಸೌಜನ್ಯದಿಂದ ವರ್ತಿಸಿ. ಇಲ್ಲದಿದ್ದರೆ, ನಿಮಗೇ ತೊಂದರೆಯಾಗಬಹುದು. ಕಡೆಯ ಕಾರ್ತಿಕ ಸೋಮವಾರವಾದ ಇಂದು ಈಶ್ವರನ ಅನುಗ್ರಹದಿಂದ ನಿಮ್ಮ ಕಂಟಕ ದೂರವಾಗುತ್ತದೆ.

ಕನ್ಯಾ ರಾಶಿ: ಈ ರಾಶಿಯವರಿಗೆ ಹಣಕಾಸಿನ ಸಂಕಷ್ಟ ಇರುತ್ತದೆ. ಅನಾವಶ್ಯಕವಾದ ವಿಷಯಗಳಿಗೆ ತಲೆ ಹಾಕದೆ ಇದ್ದರೆ ತುಂಬಾ ಒಳ್ಳೆಯದು.

ತುಲಾ ರಾಶಿ: ಈ ರಾಶಿಯವರು ಈಗ ಮಧುರವಾಗಿ ಮಾತನಾಡುವುದರಿಂದ, ಮಾತಿನಿಂದಲೇ ನಿಮ್ಮ ಕೆಲಸ ಸಾಧಿಸಬಹುದು. ಅದರಲ್ಲೂ ಕೂಡ ಲಲಿತಕಲೆ, ಸಾಹಿತ್ಯ ಇತ್ಯಾದಿ ಕ್ಷೇತ್ರದಿಂದ ನಿಮಗೆ ಲಾಭವಾಗಲಿದೆ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ನಿಮ್ಮ ವೃತ್ತಿ ರಂಗ ಹಾಗೂ ವೈಯಕ್ತಿಯ ಜೀವನ ಎರಡರಲ್ಲೂ ಒಳ್ಳೆಯ ಆಫರ್ ಬರುವ ಅವಕಾಶಗಳಿವೆ. ಇದನ್ನು ಹಿರಿಯರ ಮಾರ್ಗದರ್ಶನದಿಂದ ಸೂಕ್ತ ರೀತಿಯಲ್ಲಿ ಸಿದ್ಧಿ ಮಾಡಿಕೊಳ್ಳಬಹುದು.

ಇದನ್ನೂ ಓದಿ- Tulsi Dry Leaves Tips: ಒಣ ತುಳಸಿ ಎಲೆಗಳ ಈ ಪರಿಹಾರದಿಂದ ನಿಮ್ಮ ಅದೃಷ್ಟವೇ ಬದಲಾಗುತ್ತೆ

ಧನು ರಾಶಿ: ಈ ರಾಶಿಯವರು ಆಧ್ಯಾತ್ಮಿಕವಾಗಿ ಹಾಗೂ ದೈವಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ ತೋರಿಸುವುದು ಬಹಳ ಒಳ್ಳೆಯದು. ತಮಗೆ ಬೇಡವಾದ ವಿಚಾರಗಳಿಂದ, ಮೂರನೇಯವರಿಂದ ತೊಂದರೆಯಾಗಬಹುದು. ಸಣ್ಣಪುಟ್ಟ ಅಪಘಾತಗಳಾಗಬಹುದು. ಇದನ್ನು ತಪ್ಪಿಸಲು ಸುಬ್ರಹ್ಮಣ್ಯನ ಆರಾಧನೆ ಮಾಡಿ.

ಮಕರ ರಾಶಿ: ಈ ರಾಶಿಯ ಗರ್ಭಿಣಿಯರಿಗೆ ಸಿಸೇರಿಯನ್ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವೈದ್ಯರ ಸಲಹೆ ಮೇರೆಗೆ ನಿರ್ಧಾರಗಳನ್ನು ಕೈಗೊಳ್ಳಿ. 

ಕುಂಭ ರಾಶಿ: ಈ ರಾಶಿಯವರಿಗೆ ಕೆಲಸದಲ್ಲಿ ಸ್ವಲ್ಪ ಹೆಚ್ಚಿನ ಒತ್ತಡ ಹಾಗೂ ಮನೆಯಲ್ಲೂ ಒತ್ತಡವಿರುತ್ತದೆ. ನೀವು ಶಾಂತ ಚಿತ್ತರಾಗಿ ಎರಡೂ ಕಡೆಯೂ ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿ.

ಮೀನ ರಾಶಿ: ಈ ರಾಶಿಯವರು ತಮ್ಮ ವ್ಯವಹಾರದಲ್ಲಿ ಕೊಂಚ ಎಚ್ಚರಿಕೆಯಿಂದ ಇರಿ. ಜೊತೆಗೆ ನಿಮ್ಮ ಹಿತ ಶತ್ರುಗಳಿಂದ ದೂರವಿರಿ.

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News