ನಾನು ಕನ್ನಡಿಗರ ದಾಸ ಅವರ ಮುಂದಷ್ಟೇ ಕೈಕಟ್ಟಿ ನಿಲ್ಲುತ್ತೇನೆ : ʼಕ್ರಾಂತಿʼ ನನ್ನ ಸೆಲೆಬ್ರೆಟಿಗಳ ಸಿನಿಮಾ..!

ಅಭಿಮಾನಿಗಳು ನನ್ನ ಸೆಲೆಬ್ರೇಟಿಗಳು ಅಂತ ದರ್ಶನ ಯಾವಾಗ್ಲೂ ಹೇಳ್ತಾರೆ. ಕನ್ನಡಿಗರ ದಾಸ ನಾನು, ಅವರೇ ನನ್ನನ್ನು ಬೆಳೆಸಿದ್ದು ಅಂತ ಕನ್ನಡ ಸಿನಿ ಪ್ರೇಕ್ಷರನ್ನು ಸದಾ ಸ್ಮರಿಸುತ್ತಾರೆ. ಕ್ರಾಂತಿ ಸಿನಿಮಾದ ಪ್ರಚಾರ ಜವಾಬ್ದಾರಿ ಹೊತ್ತಿರುವ ಫ್ಯಾನ್ಸ್‌ಗಳ ಬಗ್ಗೆ ದರ್ಶನ್‌ ಇಟ್ಟಿರುವ ಗೌರವ ಅಷ್ಟಿಷ್ಟಲ್ಲ. ಇನ್ನು ದಚ್ಚು ತಮ್ಮ ಫ್ಯಾನ್ಸ್‌ಗಳನ್ನು ಸೆಲೆಬ್ರೇಟಿಗಳು ಅಂತ ಯಾಕೆ ಕರಿತಾರೆ ಎನ್ನುವ ವಿಚಾರದ ಕುರಿತು ಹೃದಯತುಂಬಿ ಮಾತನಾಡಿದ್ದಾರೆ. 

Written by - Krishna N K | Last Updated : Nov 18, 2022, 11:06 AM IST
  • ನಾನು ಕನ್ನಡಿಗರ ದಾಸ ಅವರ ಮುಂದಷ್ಟೇ ಕೈಕಟ್ಟಿ ನಿಲ್ಲುತ್ತೇನೆ
  • ಅಭಿಮಾನಿಗಳ ಬಗ್ಗೆ ದಚ್ಚು ಮನದಾಳದ ಮಾತು
  • ಜೀ ಕನ್ನಡ ನ್ಯೂಸ್‌ ಸಂದರ್ಶನದಲ್ಲಿ ಗಜ
ನಾನು ಕನ್ನಡಿಗರ ದಾಸ ಅವರ ಮುಂದಷ್ಟೇ ಕೈಕಟ್ಟಿ ನಿಲ್ಲುತ್ತೇನೆ : ʼಕ್ರಾಂತಿʼ ನನ್ನ ಸೆಲೆಬ್ರೆಟಿಗಳ ಸಿನಿಮಾ..! title=

D Boss : ಅಭಿಮಾನಿಗಳು ನನ್ನ ಸೆಲೆಬ್ರೇಟಿಗಳು ಅಂತ ದರ್ಶನ ಯಾವಾಗ್ಲೂ ಹೇಳ್ತಾರೆ. ಕನ್ನಡಿಗರ ದಾಸ ನಾನು, ಅವರೇ ನನ್ನನ್ನು ಬೆಳೆಸಿದ್ದು ಅಂತ ಕನ್ನಡ ಸಿನಿ ಪ್ರೇಕ್ಷರನ್ನು ಸದಾ ಸ್ಮರಿಸುತ್ತಾರೆ. ಕ್ರಾಂತಿ ಸಿನಿಮಾದ ಪ್ರಚಾರ ಜವಾಬ್ದಾರಿ ಹೊತ್ತಿರುವ ಫ್ಯಾನ್ಸ್‌ಗಳ ಬಗ್ಗೆ ದರ್ಶನ್‌ ಇಟ್ಟಿರುವ ಗೌರವ ಅಷ್ಟಿಷ್ಟಲ್ಲ. ಇನ್ನು ದಚ್ಚು ತಮ್ಮ ಫ್ಯಾನ್ಸ್‌ಗಳನ್ನು ಸೆಲೆಬ್ರೇಟಿಗಳು ಅಂತ ಯಾಕೆ ಕರಿತಾರೆ ಎನ್ನುವ ವಿಚಾರದ ಕುರಿತು ಹೃದಯತುಂಬಿ ಮಾತನಾಡಿದ್ದಾರೆ. 

ದರ್ಶನ್‌ ಅಭಿಮಾನಿಗಳು ಕ್ರಾಂತಿ ಸಿನಿಮಾ ಸ್ವತಃ ತಾವೇ ಹಣ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ಇದು ಬಹುಷ್ಯ ಇತಿಹಾಸ. ಏಕೆಂದ್ರೆ ಈ ಹಿಂದೆ ಈ ರೀತಿಯಾಗಿ ಯಾವುದೇ ಒಬ್ಬ ಹೀರೋನ ಸಿನಿಮಾವನ್ನು ಸ್ವತಃ ಅಭಿಮಾನಿಗಳೇ ಸ್ವ ಇಚ್ಛೆಯಿಂದ ಪ್ರಚಾರ ಮಾಡಿದ್ದ ಬಗ್ಗೆ ದಾಖಲೆ ಇಲ್ಲ. ಆದ್ರೆ ಈ ಕೆಲಸವನ್ನು ಯಜಮಾನನ ಅಭಿಮಾನಿಗಳು ಮಾಡಿ ಮುಗಿಸಿದ್ದಾರೆ. ಇಡೀ ಕರ್ನಾಟಕದ ತುಂಬಾ ತಮ್ಮದೇ ಶೈಲಿಯಲ್ಲಿ ಸಿನಿಮಾದ ಪ್ರಮೋಷನ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ʼಹಾಳ್‌ ಮಾಡೋಕೆ ಹತ್ತು ಜನ ಇದ್ರೆ ಕಾಯೋಕಂತ ಸಾವಿರ ಜನ ಇರ್ತಾರೆʼ : ಫ್ಯಾನ್ಸ್‌ನ ಹೊಗಳಿದ DBoss

ಇನ್ನು ದರ್ಶನ್‌ ಅವರು ತಮ್ಮ ಅಭಿಮಾನಿಗಳನ್ನು ಯಾವಾಗ್ಲೂ ಸೆಲೆಬ್ರೆಟಿಗಳು ಅಂತ ಕರೀತಾರೆ.. ಇದು ಅವರ ಮೇಲೆಟ್ಟಿರುವ ಅಭಿಮಾನ. ಯಾವುದೇ ಒಬ್ಬ ಹೀರೋ ಎಲ್ಲಾ ಜನರಿಗೆ ಸೆಲೆಬ್ರೆಟಿ ಆಗಿರುವುದು ಕಾಮನ್‌ ಆದ್ರೆ ಒಬ್ಬ ಸ್ಟಾರ್‌ ನಟ ತನ್ನ ಅಭಿಮಾನಿಗಳನ್ನು ಸೆಲೆಬ್ರೆಟಿಗಳ ಸ್ಥಾನದಲ್ಲಿ ಇಟ್ಟಿದ್ದು ದರ್ಶನ್‌ ಅವರು ಮಾತ್ರ. ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡುವಾಗ... ನನ್ನ ಬೆಳೆಸಿದ್ದು ಕನ್ನಡಿಗರು, ನನ್ನ ಅಭಿಮಾನಿಗಳೇ ನನ್ನ ಸೆಲೆಬ್ರೆಟಿಗಳು, ಅವರೇ ನನಗೆ ಅನ್ನಹಾಕಿದ್ದು ಈಗ ಅವರೇ ಅವರ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ ಅಷ್ಟೆ. ಅವರಿಂದ ನಾವು ನಮ್ಮಿಂದ ಅವರಲ್ಲ ಎಂದು ಫ್ಯಾನ್ಸ್‌ಗಳ ಬಗ್ಗೆ ಚಕ್ರವರ್ತಿ ಅಭಿಮಾನ ಮೆರೆದರು.

ಹೌದು.. ಡಾ. ರಾಜ್‌ಕುಮಾರ್‌ ಅವರು, ಅಭಿಮಾನಿಗಳನ್ನು ದೇವರು ಅಂದ್ರು, ಪುನೀತ್‌ ರಾಜ್‌ಕುಮಾರ್‌ ಅವರು ಅಭಿಮಾನಿಗಳೇ ನಮ್ಮ ಮನೆಯ ದೇವರು ಅಂದ್ರು, ಇನ್ನು ದರ್ಶನ ಅವರು ಅಭಿಮಾನಿಗಳನ್ನ ಸೆಲೆಬ್ರೆಟಿಗಳು ಅಂತ ಪ್ರೀತಿಯಿಂದ ಕರೀತಾರೆ. ಇದೇ ಅಲ್ವಾ ಒಬ್ಬ ನಟ ಮತ್ತು ಅಭಿಮಾನಿಗಳ ಮಧ್ಯ ಇರಬೇಕಾದ ಬಂಧ. ಸದ್ಯ ಕ್ರಾಂತಿ ಸಿನಿಮಾ ಕುತೂಹಲ ಹುಟ್ಟಿಸುತ್ತಿದೆ. ತೆರೆಮೇಲೆ ಗಜನನ್ನು ನೋಡ್ಬೇಕು ಅಂದ್ರೆ ಜ.26 ರವರೆಗೂ ಕಾಯಲೆಬೇಕು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News