ಈ ನಾಲ್ಕು ರಾಶಿಯವರ ಮೇಲೆ ಸದಾ ಇರುತ್ತದೆ ಆಂಜನೇಯನ ಕೃಪೆ

 ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, 12 ರಾಶಿಚಕ್ರಗಳ ಪೈಕಿ ಕೆಲವು ರಾಶಿಗಳ ಮೇಲೆ ಆಂಜನೇಯನ ವಿಶೇಷ ಕೃಪೆ ಇರುತ್ತದೆ ಎನ್ನಲಾಗಿದೆ.  

Written by - Ranjitha R K | Last Updated : May 13, 2022, 11:45 AM IST
  • ಕೆಲವು ರಾಶಿಯವರ ಮೇಲಿರುತ್ತದೆ ಆಂಜನೇಯನ ಅನುಗ್ರಹ
  • ಇವರ ಎಲ್ಲಾ ಕೆಲಸಗಳಲ್ಲಿಯೂ ಸಿಗುತ್ತದೆ ಯಶಸ್ಸು
  • ಅದೃಷ್ಟ ಸದಾ ಇವರನ್ನು ಬೆಂಬಲಿಸುತ್ತದೆ
ಈ ನಾಲ್ಕು ರಾಶಿಯವರ ಮೇಲೆ ಸದಾ ಇರುತ್ತದೆ ಆಂಜನೇಯನ ಕೃಪೆ  title=
Astrology (file photo)

ಬೆಂಗಳೂರು : ಆಂಜನೇಯನನ್ನು ಕಲಿಯುಗದ ಪ್ರಧಾನ ದೇವರೂ ಎಂದು ಹೇಳಲಾಗುತ್ತದೆ. ಅಮರರಾಗಿರುವಂತೆ  ಆಂಜನೇಯನಿಗೆ ಸೀತಾಮಾತೆ ವರ ನೀಡಿದ್ದರು ಎನ್ನಲಾಗಿದೆ. ಹಾಗಾಗಿ ಹನುಮಂತನ ಕೃಪೆಯಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ನಂಬಿಕೆ.  ಜ್ಯೋತಿಷ್ಯದಲ್ಲಿ 12 ರಾಶಿಚಕ್ರ ಚಿಹ್ನೆಗಳಿವೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, 12 ರಾಶಿಚಕ್ರಗಳ ಪೈಕಿ ಕೆಲವು ರಾಶಿಗಳ ಮೇಲೆ ಆಂಜನೇಯನ ವಿಶೇಷ ಕೃಪೆ ಇರುತ್ತದೆ ಎನ್ನಲಾಗಿದೆ.  ಆ ರಾಶಿಗಳು ಯಾವುವೆಂದರೆ ....

ಮೇಷ ರಾಶಿ :
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಮೇಷ ರಾಶಿಯ ಜನರ ಮೇಲೆ ಆಂಜನೇಯ ವಿಶೇಷ ಅನುಗ್ರಹವನ್ನು ಹೊಂದಿರುತ್ತಾನೆ. ಮೇಷ ರಾಶಿಯವರು ಬಲವಾದ ಇಚ್ಚಾಶಕ್ತಿಯನ್ನು ಹೊಂದಿರುತ್ತಾರೆ.  ಮೇಷ ರಾಶಿಯ ಜನರು ಆಂಜನೇಯನ ವಿಶೇಷ ಅನುಗ್ರಹವನ್ನು ಪಡೆಯಲು ಪ್ರತಿದಿನ ಭಗವಾನ್ ಶ್ರೀರಾಮನಾಮವನ್ನು ಜಪಿಸಬೇಕು. ಹೀಗೆ ಮಾಡಿದರೆ ಆಂಜನೇಯನ ಕೃಪೆಯಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಕೂಡಾ ಬಲಗೊಳ್ಳುತ್ತದೆ. 

ಇದನ್ನೂ ಓದಿ : Chandra Grahan 2022: ವರ್ಷದ ಮೊದಲ ಚಂದ್ರಗ್ರಹಣ ಈ ರಾಶಿಯ ಜನರ ವೃತ್ತಿಜೀವನದಲ್ಲಿ ಬಡ್ತಿ ನೀಡಲಿದೆ

ಕುಂಭ ರಾಶಿ :
ಜ್ಯೋತಿಷ್ಯಶಾಸ್ತ್ರದ ನಂಬಿಕೆಗಳ ಪ್ರಕಾರ, ಆಂಜನೇಯನ ಕೃಪೆಯಿಂದ, ಕುಂಭ ರಾಶಿಯವರು ತಮ್ಮ ಕೆಲಸದಲ್ಲಿ ಶೀಘ್ರವಾಗಿ ಯಶಸ್ಸನ್ನು ಪಡೆಯುತ್ತಾರೆ. ಹನುಮಂತನ ವಿಶೇಷ ಕೃಪೆಯು ಕುಂಭ ರಾಶಿಯ ಮೇಲೆ ಇರಲಿದೆ. ಈ ಕಾರಣದಿಂದಾಗಿಯ ಕುಂಭ ರಾಶಿಯವರಿಗೆ ಜೀವನದಲ್ಲಿ ಹಣದ ಕೊರತೆ ಇರುವುದೇ ಇಲ್ಲ.  ಭಜರಂಗಬಲಿಯ ದಯೆಯಿಂದ ಕುಂಭ ರಾಶಿಯವರ ಕಷ್ಟಗಳು ಕ್ಷಣ ಮಾತ್ರದಲ್ಲಿ ದೂರವಾಗುತ್ತವೆ.

ಸಿಂಹ  ರಾಶಿ :
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಆಂಜನೇಯನ  ಆಶೀರ್ವಾದದಿಂದ ಸಿಂಹ ರಾಶಿಯವರಿಗೆ ಎದುರಾಗುವ ಎಲಾ ಅಡೆ ತಡೆಗಳು ದೂರವಾಗುತ್ತವೆ.   ಈ ರಾಶಿಯ ಜನರ ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿರುತ್ತದೆ. 
ಹನುಮಂತನ ಕೃಪೆಯಿಂದ ಈ ರಾಶಿಯವರು ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ  ಸಾಧಿಸುತ್ತಾರೆ. 

ಇದನ್ನೂ ಓದಿ : Tulsi Plant Remedies : ಈ ನಾಲ್ಕು ದಿನ ಅಪ್ಪಿ ತಪ್ಪಿಯೂ ತುಳಸಿ ಗಿಡಕ್ಕೆ ನೀರು ಅರ್ಪಿಸಬೇಡಿ, ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ

ವೃಶ್ಚಿಕ ರಾಶಿ : 
ವೃಶ್ಚಿಕ ರಾಶಿಯವರ ಮೇಲೆ ಕೂಡಾ ಆಂಜನೇಯನ ವಿಶೇಷ ಆಶೀರ್ವಾದ ಇರುತ್ತದೆ.  ಈ ರಾಶಿಯವರೂ ಏನೇ ಕೆಲಸ ಆರಂಭಿಸಿದರೂ, ಅದರಲ್ಲಿ ಯಶಸ್ಸು ಸಾಧಿಸುತ್ತಾರೆ. ಇವರ ಕೆಲಸಕ್ಕೆ ಅಡೆತಡೆ ಎದುರಾಗುವುದೇ  ಇಲ್ಲ. ಹನುಮಂತನ ಕೃಪೆಯಿಂದ ಇವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ವೃಶ್ಚಿಕ ರಾಶಿಯವರು ಹನುಮಂತನ ಕೃಪೆಯಿಂದ ಅದೃಷ್ಟವಂತರಾಗಿರುತ್ತಾರೆ. 

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News