ಈ ವಿಷಯಗಳು ಶ್ರೀಮಂತನನ್ನು ಬಡವನನ್ನಾಗಿ ಮಾಡುತ್ತದೆ: ನೀವು ಈ ತಪ್ಪುಗಳನ್ನು ಮಾಡಬೇಡಿ

ಹಣದ ಜೊತೆಗೆ ಅಹಂಕಾರವೂ ಬಂದರೆ ಅಂಥವರ ಭವಿಷ್ಯ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಲಕ್ಷ್ಮೀದೇವಿ ಅಹಂಕಾರ ಹೊಂದಿರುವ ವ್ಯಕ್ತಿಗಳನ್ನು ಇಷ್ಟಪಡುವುದಿಲ್ಲವಂತೆ.

Written by - Puttaraj K Alur | Last Updated : Nov 23, 2021, 01:27 PM IST
  • ಶ್ರೀಮಂತನಾದ ಬಳಿಕ ಬಡವನನ್ನಾಗಿ ಮಾಡುವ ವಿಷಯಗಳಿಂದ ದೂರವಿರುವಂತೆ ಚಾಣಕ್ಯರ ಸಲಹೆ
  • ಯಾವುದೇ ವ್ಯಕ್ತಿ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡರೆ ಲಕ್ಷ್ಮೀದೇವಿ ಕೋಪಿಸಿಕೊಳ್ಳುತ್ತಾಳಂತೆ
  • ಕೋಪ, ಕಹಿ ಮಾತು, ಅಂಹಕಾರ ಮತ್ತು ಕೆಟ್ಟ ಚಟಗಳಿಂದ ದೂರವಿರಬೇಕೆಂದು ಚಾಣಕ್ಯ ಹೇಳಿದ್ದಾರೆ
ಈ ವಿಷಯಗಳು ಶ್ರೀಮಂತನನ್ನು ಬಡವನನ್ನಾಗಿ ಮಾಡುತ್ತದೆ: ನೀವು ಈ ತಪ್ಪುಗಳನ್ನು ಮಾಡಬೇಡಿ  title=
ಕೆಟ್ಟ ಅಭ್ಯಾಸಗಳಿಂದ ವ್ಯಕ್ತಿಯ ಜೀವನ ಹಾಳಾಗುತ್ತದೆ

ನವದೆಹಲಿ: ಪ್ರತಿಯೊಬ್ಬರೂ ಶ್ರೀಮಂತ(Rich)ರಾಗಲು ಬಯಸುತ್ತಾರೆ. ಕಠಿಣ ಪರಿಶ್ರಮ, ಬುದ್ಧಿವಂತಿಕೆ, ಪ್ರತಿಭೆ ಮತ್ತು ಅದೃಷ್ಟದ ಆಧಾರದ ಮೇಲೆ ಜನರು ಶ್ರೀಮಂತರಾಗುತ್ತಾರೆ. ಆದರೆ ಕೆಲವು ವಿಷಯಗಳಿಗೆ ಅವರು ಬಡವರಾಗುತ್ತಾರೆ. ಕೆಲವು ಅಭ್ಯಾಸಗಳು ವ್ಯಕ್ತಿಯ ನಾಶಕ್ಕೆ ಕಾರಣವಾಗುತ್ತವೆ. ಮಹಾನ್ ಅರ್ಥಶಾಸ್ತ್ರಜ್ಞ ಆಚಾರ್ಯ ಚಾಣಕ್ಯ(Acharya Chanakya), ಶ್ರೀಮಂತನಾದ ನಂತರ ಯಾವುದೇ ಒಬ್ಬ ವ್ಯಕ್ತಿಯನ್ನು ಬಡವನನ್ನಾಗಿ ಮಾಡುವ ಕೆಲವು ವಿಷಯಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ. ಈ ಕೆಟ್ಟ ಅಭ್ಯಾಸಗಳನ್ನು ವ್ಯಕ್ತಿ ರೂಢಿಸಿಕೊಂಡರೆ ಲಕ್ಷ್ಮೀದೇವಿ ಕೋಪಿಸಿಕೊಳ್ಳುತ್ತಾಳಂತೆ. ಆದ್ದರಿಂದ ನೀವು ಯಾವಾಗಲೂ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಬಯಸಿದರೆ ಈ ವಿಷಯಗಳಿಂದ ದೂರವಿರಬೇಕು.

ಇದನ್ನೂ ಓದಿ: Money Remedies: ಮುಂದಿನ 25 ದಿನಗಳಲ್ಲಿ ಶಂಖಕ್ಕೆ ಈ ವಿಶೇಷ ಪರಿಹಾರ ಮಾಡಿದರೆ ಇಷ್ಟಾರ್ಥ ಸಿದ್ಧಿ

ಈ ಕೆಟ್ಟ ಅಭ್ಯಾಸಗಳಿಂದ ವ್ಯಕ್ತಿಯ ಜೀವನ ಹಾಳಾಗುತ್ತದೆ

ಚಾಣಕ್ಯ ನೀತಿಯ ಪ್ರಕಾರ ಶ್ರೀಮಂತ ವ್ಯಕ್ತಿಯನ್ನು ಬಡವರನ್ನಾಗಿ ಮಾಡುವ 5 ವಿಷಯಗಳಿವೆ(Chanakya Niti About Money). ಲಕ್ಷ್ಮೀದೇವಿಯ ಆಶೀರ್ವಾದವು ನಿಮ್ಮ ಮೇಲೂ ಬೀಳಬೇಕೆಂದರೆ ವಿಶೇಷವಾಗಿ ಈ ಕೆಟ್ಟ ಅಭ್ಯಾಸಗಳಿಂದ ಆದಷ್ಟು ದೂರವಿರಿ.  

ನಿಮ್ಮ ಭೂತಕಾಲವನ್ನು ಎಂದಿಗೂ ಮರೆಯಬೇಡಿ: ನೀವು ಎಷ್ಟೇ ಶ್ರೀಮಂತರಾಗಿದ್ದರೂ ನಿಮ್ಮ ಹಿಂದಿನದನ್ನು ಮರೆಯಬೇಡಿ . ಹೋರಾಟದ ದಿನಗಳನ್ನು ಮರೆತುಬಿಡುವುದು ಅಥವಾ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದ ಜನರನ್ನು ಮರೆತುಬಿಡುವುದು ನಿಮ್ಮನ್ನು ಹಳೆಯ ದಿನಗಳಿಗೆ ತಳ್ಳಬಹುದು. ಇಂತಹ ವ್ಯಕ್ತಿಗಳ ಮೇಲೆ ಲಕ್ಷ್ಮೀದೇವಿ(Money Mistakes) ಕೋಪಗೊಳ್ಳುತ್ತಾಳೆ.

ಕಹಿ ಮಾತು: ಹಣವು ಮನುಷ್ಯನ ಮಾತು ಮತ್ತು ವರ್ತನೆಯನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಶ್ರೀಮಂತನಾದ ನಂತರ ಕಹಿಯಾಗಿ ಮಾತನಾಡುವುದು ನಿಮ್ಮನ್ನು ಬಡವರನ್ನಾಗಿ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ನೆನಪಿಡಿ. ಯಾರನ್ನಾದರೂ ಅವಮಾನಿಸುವ ಸ್ಥಳದಲ್ಲಿ ಲಕ್ಷ್ಮೀದೇವಿ ಎಂದಿಗೂ ಉಳಿಯುವುದಿಲ್ಲ.

ಕೋಪ: ಕೋಪವು ಮನಸ್ಸನ್ನು ಮಾತ್ರವಲ್ಲದೆ ಹಣವನ್ನು ಸಹ ನಾಶಪಡಿಸುತ್ತದೆ. ಕೋಪ(Anger)ವು ಮನುಷ್ಯನ ದೊಡ್ಡ ಶತ್ರು. ನೀವು ಶ್ರೀಮಂತರಾದ ನಂತರ ತಾಳ್ಮೆಯಿಂದ ವರ್ತಿಸದಿದ್ದರೆ ಯಾವುದೇ ಸಮಯದಲ್ಲಿ ಸಂಪತ್ತು ಮತ್ತು ಆಸ್ತಿ ನಿಮ್ಮಿಂದ ಕೈಬಿಟ್ಟು ಹೋಗಬಹುದು. 

ಅಹಂ: ಹಣದ ಜೊತೆಗೆ ಅಹಂಕಾರ(Ego)ವೂ ಬಂದರೆ ಅಂಥವರ ಭವಿಷ್ಯ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಲಕ್ಷ್ಮೀದೇವಿ ಅಹಂಕಾರ ಹೊಂದಿರುವ ವ್ಯಕ್ತಿಗಳನ್ನು ಇಷ್ಟಪಡುವುದಿಲ್ಲವಂತೆ.  

ಕೆಟ್ಟ ಅಭ್ಯಾಸಗಳು: ಮಾದಕ ವ್ಯಸನ, ಜೂಜಾಟದಂತಹ ಕೆಟ್ಟ ಅಭ್ಯಾಸಗಳು ಸಹ ಮಿಲಿಯನೇರ್‌ ವ್ಯಕ್ತಿಗಳನ್ನು ಬೀದಿಗೆ ತರುತ್ತವೆ. ಈ ಕೆಟ್ಟ ಕಾರಣಕ್ಕೆ ಒಬ್ಬ ವ್ಯಕ್ತಿ ಹಣವನ್ನು ನೀರಿನಂತೆ ವ್ಯರ್ಥ ಮಾಡುತ್ತಾನೆ. ಇದನ್ನು ಅರ್ಥಮಾಡಿಕೊಳ್ಳುವ ಹೊತ್ತಿಗೆ ಆತನ ಜೀವನವೇ ಹಾಳಾಗಿ ಹೋಗಿರುತ್ತದೆ.

ಇದನ್ನೂ ಓದಿ: Shani Gochar: ಶನಿಯ ರಾಶಿ ಪರಿವರ್ತನೆ, ನಿಮ್ಮ ಜೀವನದ ಮೇಲೆ ಯಾವ ಪ್ರಭಾವ ಉಂಟಾಗಲಿದೆ, ಇಲ್ಲಿದೆ ವಿವರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News