Palmistry: ಅಂಗೈಯಲ್ಲಿ ಈ ರೇಖೆ ಇರುವವರು ಹುಟ್ಟು ಶ್ರೀಮಂತರಾಗಿರುತ್ತಾರೆ, ನಿಮ್ಮ ಕೈಯಲ್ಲಿ ಇದೆಯಾ?

Palmistry - ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯ ರೇಖೆಗಳು ಮತ್ತು ಚಿಹ್ನೆಗಳು  ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳುತ್ತವೆ. ಅಂಗೈಯಲ್ಲಿರುವ ಶನಿಗ್ರಹವು (Saturn) ಜೀವನದಲ್ಲಿ ಸಂಪತ್ತಿನ ಸ್ಥಿತಿಯನ್ನು ಬಿಂಬಿಸುತ್ತದೆ. ಇದಲ್ಲದೆ, ಅಂಗೈಯಲ್ಲಿನ ಕೆಲವು ವಿಶೇಷ ಚಿಹ್ನೆಗಳು ವ್ಯಕ್ತಿ ಹುಟ್ಟಿನಿಂದಲೇ ಶ್ರೀಮಂತ ಎಂಬುದನ್ನು ಸೂಚಿಸುತ್ತವೆ.

Written by - Nitin Tabib | Last Updated : Mar 13, 2022, 04:11 PM IST
  • ಜೀವನದಲ್ಲಿ ಇವರು ಧನವಂತರಾಗಿರುತ್ತಾರೆ
  • ಅಂಗೈಯಲ್ಲಿನ ಶುಕ್ರ ಪರ್ವತ ಧನಲಾಭದ ಸಂಕೇತ ನೀಡುತ್ತದೆ.
  • ಸರ್ಕಾರಿ ನೌಕರಿ ಸಿಗುವ ಸೂಚಕವು ಹೌದು.
Palmistry: ಅಂಗೈಯಲ್ಲಿ ಈ ರೇಖೆ ಇರುವವರು ಹುಟ್ಟು ಶ್ರೀಮಂತರಾಗಿರುತ್ತಾರೆ, ನಿಮ್ಮ ಕೈಯಲ್ಲಿ ಇದೆಯಾ? title=
Palmistry (File Photo)

ನವದೆಹಲಿ: Money Line In Hand - ಜೀವನದಲ್ಲಿ ಶ್ರೀಮಂತರಾಗಬೇಕು ಎಂಬುದು ಎಲ್ಲರ ಆಸೆ. ಭೌತಿಕ ಯುಗದಲ್ಲಿ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಿಲಿಯನೇರ್ ಮತ್ತು ಬಿಲಿಯನೇರ್ ಆಗಬೇಕೆಂದು ಕನಸು ಕಾಣುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಹಸ್ತದ ಕೆಲ ರೇಖೆಗಳ ಕುರಿತು ಉಲ್ಲೇಖಿಸಲಾಗಿದ್ದು, ಅವು ವ್ಯಕ್ತಿಯ ಸಿರಿವಂತಿಕೆಯ ಕುರಿತು ಸೂಚಿಸುತ್ತವೆ. ಹಸ್ತದಲ್ಲಿನ ಈ ರೇಖೆಗಳು ಯಾವುದು ತಿಳಿದುಕೊಳ್ಳೋಣ ಬನ್ನಿ.

ಈ ರೇಖೆಗಳು ಮತ್ತು ಚಿಹ್ನೆಗಳು ಶ್ರೀಮಂತಿಕೆಯ ಸಂಕೇತ ನೀಡುತ್ತವೆ
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ಹಸ್ತದ ಶನಿ ಪರ್ವತವು (Saturn Mountain) ಜೀವನದಲ್ಲಿ ಸಂಪತ್ತಿನ ಸ್ಥಾನವನ್ನು ತೋರಿಸುತ್ತದೆ. ಶನಿಯು (Shani Parvat) ಶುಭ ಸ್ಥಾನದಲ್ಲಿದ್ದು, ಯಾವುದೇ ಅಶುಭ ಚಿಹ್ನೆ ಇಲ್ಲದಿದ್ದರೆ ಅದು ಜೀವನದಲ್ಲಿ ಉತ್ತಮ ಸಂಪತ್ತನ್ನು ಸೂಚಿಸುತ್ತದೆ. ಇದಲ್ಲದೆ, ಶುಕ್ರ ಪರ್ವತವು (Shukra Parvat) ಮಂಗಳಕರ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಜೀವನದಲ್ಲಿ ಉತ್ತಮ ಹಣ (Money Line In Hand) ಗಳಿಕೆ ಮಾಡುತ್ತಾನೆ ಎಂಬುದನ್ನು ಸೂಚಿಸುತ್ತದೆ. ಮತ್ತೊಂದೆಡೆ, ಶನಿ ಪರ್ವತವು ಅಂಗೈಯಲ್ಲಿ ಸಂಪೂರ್ಣವಾಗಿ ಖಾಲಿಯಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಹಣದ ಕೊರತೆಯನ್ನು ಎದುರಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಶನಿ ಪರ್ವತದ ಕಡೆಗೆ ಮೇಲಕ್ಕೆ ಎದ್ದಿರುವ ರೇಖೆಯು ಒಳ್ಳೆಯ ಸಂಕೇತವನ್ನು ನೀಡುತ್ತದೆ. ಜೀವನದಲ್ಲಿ ಅದೃಷ್ಟದ ಜೊತೆಗೆ ಹಣವೂ ಇರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿನ ಮಸ್ತಿಷ್ಕ ರೇಖೆ (Brain Line In Hand) ಮತ್ತು ಬುದ್ಧಿ ರೇಖೆ (Knowledge Lind) ಇದ್ದರೆ ಅದು ಒಳ್ಳೆಯ ಸಂಕೇತ ನೀಡುತ್ತದೆ. ಒಂದು ವೇಳೆ ಜೀವನ ರೇಖೆಯಿಂದ ಹೊರಬರುವ ಯಾವುದೇ ರೇಖೆಯು ನೇರವಾಗಿ ಶನಿ ಪರ್ವತವನ್ನು ತಲುಪಿದರೆ, ಆ ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಇದಲ್ಲದೇ ಇಂತಹ ಜನರು ಕೋಟ್ಯಾಧಿಪತಿಗಳೂ ಆಗುತ್ತಾರೆ. ಆದಾಗ್ಯೂ, ಈ ರೇಖೆ ಉತ್ತಮ ಶನಿ ಪರ್ವತವನ್ನು ಹೊಂದಿರುವುದು ಅಗತ್ಯವಾಗಿದೆ.

ಹಸ್ತದ ಯಾವುದೇ ಒಂದು ರೇಖೆಯು ಜೀವನ ರೇಖೆಯನ್ನು ದಾಟಿ ಶನಿ ಪರ್ವತವನ್ನು ತಲುಪಿದರೆ, ಅಂತಹ ಜನರು ಹುಟ್ಟು ಮಿಲಿಯನೇರ್ ಅಥವಾ ಕೋಟ್ಯಾಧಿಪತಿಗಳಾಗಿರುತ್ತಾರೆ, ಈ ರೇಖೆಗಳ ಯೋಗದ ಜೊತೆಗೆ ಯಾವುದೇ ರೇಖೆಯು ಜೀವನ ರೇಖೆಯಿಂದ ಹೊರಬಂದು ಸೂರ್ಯ ಪರ್ವತವನ್ನು (Soorya Parvata) ತಲುಪಿದರೆ, ವ್ಯಕ್ತಿಯು ಜೀವನದಲ್ಲಿ ಕೋಟ್ಯಾಧಿಪತಿಯಾಗುತ್ತಾನೆ. ಮತ್ತೊಂದೆಡೆ, ಈ ರೇಖೆಗಳ ನಡುವೆ ಗುರುವಿನ ಪರ್ವತದ ಮೇಲೆ ಮಚ್ಚೆ ಇದ್ದರೆ, ಅದು ಅಶುಭ ಸಂಕೇತವಾಗಿದೆ. ಅಂಥವರು ಕೆಲವೇ ಕ್ಷಣಗಳಲ್ಲಿ ಕೋಟ್ಯಂತರ ರೂ. ಕಳೆದುಕೊಳ್ಳುತ್ತಾರೆ.

ಇದನ್ನೂ ಓದಿ-Health Tips: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪ್ರತಿದಿನವೂ ಈ ಹಣ್ಣುಗಳನ್ನು ಸೇವಿಸಿ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿನ ರೇಖೆಗಳು ಮಂಗಳಕರ ಸ್ಥಾನದಲ್ಲಿದ್ದರೆ ಮತ್ತು ಉಗುರುಗಳ ಮೇಲೆ ಸಣ್ಣ ಚಂದ್ರನ ಗುರುತುಗಳಿದ್ದರೆ, ಅದು ಮಂಗಳಕರ ಸಂಕೇತವಾಗಿದೆ. ಈ ಚಿಹ್ನೆಗಳು ಜೀವನದಲ್ಲಿ ಪ್ರಗತಿಯನ್ನು ಸೂಚಿಸುತ್ತವೆ. ಮತ್ತೊಂದೆಡೆ, ಗುರುಗ್ರಹದ ಬೆರಳಿನಲ್ಲಿ ಈ ಗುರುತು ಇದ್ದರೆ, ನಂತರ ಸರ್ಕಾರಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳು ಬಲವಾಗಿರುತ್ತವೆ.

ಇದನ್ನೂ ಓದಿ-Brihaspati Uday : ಬಹುಬೇಗ ಬದಲಾಗಲಿದೆ ಈ 8 ರಾಶಿಯವರ ಭವಿಷ್ಯ : ಗುರುವಿನ ಬಲದಿಂದ ಶ್ರೀಮಂತರಾಗುತ್ತಾರೆ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆಯನ್ನು ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-First Eclipse of 2022 : ವರ್ಷದ ಮೊದಲ ಸೂರ್ಯ - ಚಂದ್ರ ಗ್ರಹಣದಿಂದ ಬದಲಾಗುತ್ತೆ ಈ 3 ರಾಶಿಯವರ ಅದೃಷ್ಟ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News